ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…


Team Udayavani, Jul 29, 2020, 11:41 PM IST

ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಒಲಿಂಪಿಕ್ಸ್‌ ಹಾಕಿಯೆಂದರೆ ಭಾರತವೇ ಕಿಂಗ್‌ ಎಂಬ ಕಾಲ ಒಂದಿತ್ತು.

1928ರಿಂದ ಮೊದಲ್ಗೊಂಡು ಎಂಟು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಹೆದ್ದ ಹೆಗ್ಗಳಿಕೆ ಭಾರತದ್ದು.

ಇದರಲ್ಲಿ 1928-1956ರ ಅವಧಿಯಲ್ಲಿ ಸತತ ಆರು ಸಲ ಕಿರೀಟ ಏರಿಸಿಕೊಂಡದ್ದು ಭಾರತದ ಅಸಾಮಾನ್ಯ ಸಾಧನೆಯೇ ಆಗಿದೆ.

ಆದರೆ 1980ರ ಬಳಿಕ ಭಾರತೀಯ ಹಾಕಿಗೆ ಪದಕದ ತೀವ್ರ ಬರಗಾಲ ಬಡಿದಿದೆ.

ಅಂದಿನ ಮಾಸ್ಕೊ ಒಲಿಂಪಿಕ್ಸ್‌ ಬಳಿಕ ಚಿನ್ನವಿರಲಿ, ಕನಿಷ್ಠ ಕಂಚು ಕೂಡ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ.

1980ರಲ್ಲಿ ಸ್ಪೇನ್‌ ತಂಡವನ್ನು 4-3 ಅಂತರದಿಂದ ಮಣಿಸುವ ಮೂಲಕ ಭಾರತ ಬಂಗಾರಕ್ಕೆ ಮುತ್ತಿಕ್ಕಿತ್ತು. 1980ರ ಜುಲೈ 29ರಂದು ಭಾರತಕ್ಕೆ ಈ ಪದಕ ಒಲಿದಿತ್ತು. ಬುಧವಾರ ಇದಕ್ಕೆ ಭರ್ತಿ 40 ವರ್ಷ ತುಂಬಿತು.

ಆರೇ ತಂಡಗಳ ಸ್ಪರ್ಧೆ
ಆದರೆ ಇದೇನೂ ಹೆಗ್ಗಳಿಕೆಯ ಪದಕವಾಗಿರಲಿಲ್ಲ. ಅಂದಿನ ಮಾಸ್ಕೊ ಕೂಟಕ್ಕೆ ಬಹಳಷ್ಟು ದೇಶಗಳು ಬಹಿಷ್ಕಾರ ಹಾಕಿದ್ದವು. ಹಾಕಿಯಲ್ಲಿ ಕಣಕ್ಕಿಳಿದದ್ದು 6 ತಂಡಗಳು ಮಾತ್ರ! ಭಾರತ, ಸ್ಪೇನ್‌ ಹೊರತುಪಡಿಸಿ ಉಳಿದೆಲ್ಲವೂ ಲೆಕ್ಕದ ಭರ್ತಿಯ ತಂಡಗಳಾಗಿದ್ದವು. ಇವುಗಳೆಂದರೆ ಪೋಲೆಂಡ್‌, ಕ್ಯೂಬಾ, ತಾಂಜಾನಿಯಾ ಮತ್ತು ಆತಿಥೇಯ ರಶ್ಯ.

ದುರ್ಬಲ ತಾಂಜಾನಿಯಾವನ್ನು 18-0 ಗೋಲುಗಳಿಂದ ಮಣಿಸಿದ ಭಾರತ ಭರ್ಜರಿ ಆರಂಭ ಮಾಡಿತು. ಆದರೆ ಪೋಲೆಂಡ್‌ ಮತ್ತು ಸ್ಪೇನ್‌ ವಿರುದ್ಧ ಡ್ರಾ ಸಾಧಿಸಿತು. ಬಳಿಕ ಕ್ಯೂಬಾವನ್ನು 13-0 ಅಂತರದಿಂದ, ರಶ್ಯವನ್ನು 4-2ರಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು.

ರೋಚಕ ಹಣಾಹಣಿ
ಫೈನಲ್‌ ಹಣಾಹಣಿಯ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿದ ಭಾರತ 16 ವರ್ಷಗಳ ಬಳಿಕ ಚಿನ್ನವನ್ನು ಖಾತ್ರಿಪಡಿಸಿತು. ಎರಡೂ ಗೋಲುಗಳನ್ನು ಸುರೀಂದರ್‌ ಸಿಂಗ್‌ ಸೋಧಿ ಬಾರಿಸಿದ್ದರು. ವಿರಾಮದ ಆರಂಭದಲ್ಲೇ ಎಂ.ಕೆ. ಕೌಶಿಕ್‌ ಮತ್ತೂಂದು ಗೋಲು ಸಿಡಿಸಿದರು. ಬಳಿಕ ಸ್ಪೇನ್‌ ನಾಯಕ ಜುವಾನ್‌ ಅಮಟ್‌ 2 ಗೋಲು ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ಮೊಹಮ್ಮದ್‌ ಶಾಹಿದ್‌ 4ನೇ ಗೋಲಿನ ಕಾಣಿಕೆ ನೀಡಿದರು. ಅಮಟ್‌ ಹ್ಯಾಟ್ರಿಕ್‌ ಪೂರೈಸಿದರು. ಆದರೆ ಅದೃಷ್ಟ ವಿ. ಭಾಸ್ಕರನ್‌ ಬಳಗಕ್ಕೆ ಒಲಿದಿತ್ತು!

ಟೋಕಿಯೊದಲ್ಲಿ ಭಾರತದ ಹಾಕಿ ಸುವರ್ಣ ಯುಗ ಮರುಕಳಿಸೀತೇ ಎಂಬ ನಿರೀಕ್ಷೆಯೀಗ ಒಂದು ವರ್ಷ ಮುಂದೂಡಲ್ಪಟ್ಟಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.