ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ
ಬೇಗ ಬಂದರೂ, ವಿಳಂಬವಾಗಿ ಬಂದರೂ ದಂಡ ಪಾವತಿ; ಪ್ರಯಾಣ ರದ್ದಾದರೆ ಶೇ.25ರಷ್ಟು ಶುಲ್ಕ ಕಡ್ಡಾಯ
Team Udayavani, Aug 14, 2020, 6:02 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಖಾಸಗಿ ಕಂಪೆನಿಗಳ ಪಾಲುದಾರಿಕೆಯಲ್ಲಿ ಆರಂಭವಾಗಲಿರುವ ರೈಲು ಸೇವೆಗಳಿಗೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ರೈಲ್ವೆ ಇಲಾಖೆ ಮುಂದಾಗಿದೆ. ಸಮಯ ಪರಿಪಾಲನೆ ಮಾಡದ ರೈಲುಗಳ ಮೇಲೆ ದಂಡ ವಿಧಿಸುವ, ಸುಳ್ಳು ಆದಾಯ ತೋರಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂಥ ನಿಯಮಗಳನ್ನು ಪ್ರಕಟಿಸಲಾಗಿದೆ.
ತಡವಾದರೆ, ಬೇಗ ಬಂದರೆ ದಂಡ: ಖಾಸಗಿ ರೈಲೊಂದು ನಿಲ್ದಾಣದಿಂದ ತಡವಾಗಿ ಹೊರಟರೆ ಅಥವಾ ನಿಗದಿತ ನಿಲ್ದಾಣವನ್ನು ತಡವಾಗಿ ತಲುಪಿದರೆ ಆ ರೈಲನ್ನು ನಿರ್ವಹಿಸುವ ಖಾಸಗಿ ಕಂಪೆನಿಯ ಮೇಲೆ ದಂಡ ವಿಧಿಸಲಾಗುತ್ತದೆ. ಅದು ಹೇಗೆಂದರೆ, ರೈಲ್ವೆ ಇಲಾಖೆಯ ಮೂಲ ಸೌಕರ್ಯಗಳ ಬಳಕೆ ಶುಲ್ಕ (ಹೌಲೇಜ್ ಶುಲ್ಕ) ಪ್ರತಿ ಕಿ.ಮೀ.ಗೆ 512 ರೂ. ನಿಗದಿಯಾಗಿದ್ದು, ಆ ಶುಲ್ಕವನ್ನು 200 ಕಿ.ಮೀ.ವರೆಗೆ ಲೆಕ್ಕ ಹಾಕಿ, ಆ ರೈಲು, ನಿಲ್ದಾಣಕ್ಕೆ ಎಷ್ಟು ತಡವಾಗಿ ಬಂತೋ ಅಷ್ಟು ಶೇಕಡವಾರು ಅವಧಿಗೆ ತಕ್ಕಂತೆ ದಂಡ ಪಾವತಿಸ ಬೇಕಿರುತ್ತದೆ. ಹಾಗೆಯೇ, ಯಾವುದೇ ರೈಲು, ನಿಲ್ದಾಣವನ್ನು ಬೇಗನೇ ತಲುಪಿದರೆ 10 ಕಿ.ಮೀ.ವರೆಗಿನ ಹೌಲೇಜ್ ಶುಲ್ಕವನ್ನು ದಂಡದ ರೂಪದಲ್ಲಿ ಕಟ್ಟಬೇಕಿರುತ್ತದೆ.
ಪ್ರಯಾಣ ರದ್ದಾದರೆ ದಂಡ: ಯಾವುದೇ ರೈಲು ಮಾರ್ಗದಲ್ಲಿ ಸಂಚರಿಸಬೇಕಿದ್ದ ಖಾಸಗಿ ರೈಲು ರದ್ದಾದರೆ, ಖಾಸಗಿ ಸಂಸ್ಥೆ ರೈಲ್ವೆ ಇಲಾಖೆಗೆ ಆ ಮಾರ್ಗದ ಬಳಕೆಗಾಗಿ ತಾನು ನೀಡಬೇಕಿದ್ದ ಹೌಲೇಜ್ ಶುಲ್ಕದಲ್ಲಿ ಶೇ. 25ರಷ್ಟನ್ನು ದಂಡದ ರೂಪದಲ್ಲಿ ರೈಲ್ವೆ ಇಲಾಖೆಗೆ ನೀಡಬೇಕಿರುತ್ತದೆ.
ರೈಲ್ವೆಯಲ್ಲಿನ ಮೂಲ ಸೌಕರ್ಯದಲ್ಲಿನ ಕೊರತೆ, ತೊಂದರೆಯಿಂದಾಗಿ ಖಾಸಗಿ ರೈಲು ನಿಗದಿತ ವೇಳೆಗಿಂತ ತಡವಾಗಿ ನಿಲ್ದಾಣಕ್ಕೆ ಬಂದರೆ ಆಗ ರೈಲ್ವೆ ಇಲಾಖೆಯಿಂದ ಖಾಸಗಿ ಸಂಸ್ಥೆಗೆ 50 ಕಿ.ಮೀ.ವರೆಗಿನ ಹೌಲೇಜ್ ಶುಲ್ಕದ ಲೆಕ್ಕದಲ್ಲಿ ಪರಿಹಾರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ