ಕೋವಿಡ್-19: ಮರಣ ಪ್ರಮಾಣ ಶೇ.1.93ಕ್ಕೆ ಇಳಿಕೆ, ಲಾಲಾರಸ ಪರೀಕ್ಷೆಗೆ ಗ್ರೀನ್ ಸಿಗ್ನಲ್
Team Udayavani, Aug 17, 2020, 9:23 AM IST
ಹೊಸದಿಲ್ಲಿ/ಹ್ಯೂಸ್ಟನ್: ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಈಗ ಮರಣ ಪ್ರಮಾಣ ಶೇ.1.93ಕ್ಕಿಳಿದಿದೆ. ಜಗತ್ತಿನಲ್ಲೇ ಕನಿಷ್ಠ ಮರಣ ಪ್ರಮಾಣ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಅಮೆರಿಕದಲ್ಲಿ 23 ದಿನಗಳಲ್ಲಿ 50 ಸಾವಿರ ಮಂದಿ ಮೃತಪಟ್ಟರೆ, ಬ್ರೆಜಿಲ್ನಲ್ಲಿ 95 ದಿನ, ಮೆಕ್ಸಿಕೋದಲ್ಲಿ 141 ದಿನಗಳಲ್ಲಿ 50 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಭಾರತದಲ್ಲಿ ಸಾವಿನ ಸಂಖ್ಯೆ 50 ಸಾವಿರಕ್ಕೇರಲು 156 ದಿನಗಳು ಬೇಕಾದವು ಎಂದೂ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೆ, ದೇಶದ ಗುಣಮುಖ ಪ್ರಮಾಣವೂ ಶೇ.72 ಸಮೀಪಿಸಿದ್ದು, 18.60 ಲಕ್ಷಕ್ಕೂ ಅಧಿಕ ಮಂದಿ ವಾಸಿಯಾಗಿದ್ದಾರೆ.
63,490 ಪ್ರಕರಣ: ಶನಿವಾರದಿಂದ ರವಿವಾರದ ವರೆಗೆ 24 ಗಂಟೆಗಳಲ್ಲಿ ದೇಶದಲ್ಲಿ 63,490 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 944 ಮಂದಿ ಸಾವಿಗೀಡಾಗಿದ್ದಾರೆ. ಆ.7ರಿಂದ ನಿರಂತರವಾಗಿ (ಆ.11 ಹೊರತುಪಡಿಸಿ) ಭಾರತದಲ್ಲಿ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೆ, ಸತತ 12 ದಿನಗಳಿಂದಲೂ ಅಮೆ ರಿಕ, ಬ್ರೆಜಿಲ್ಗಿಂತಲೂ ಹೆಚ್ಚು ಪ್ರಕರಣ ಗಳು ಭಾರತದಲ್ಲಿ ಕಂಡುಬಂದಿವೆ.
ಲಾಲಾರಸ ಪರೀಕ್ಷೆಗೆ ಗ್ರೀನ್ ಸಿಗ್ನಲ್
ವ್ಯಕ್ತಿಯ ಲಾಲಾರಸ ಪರೀಕ್ಷೆ ಮೂಲಕ ಕೋವಿಡ್ ಪತ್ತೆಹಚ್ಚುವ ಸರಳ ಹಾಗೂ ತುರ್ತು ವಿಧಾನ ಅನುಸರಿಸಲು ಅಮೆರಿಕ ಮುಂದಾಗಿದೆ.
ಕೋವಿಡ್ ಸೋಂಕು ಪತ್ತೆಗೆ ಈಗಾಗಲೇ ಹಲವು ಮಾದರಿಗಳ ಪರೀಕ್ಷೆಗಳನ್ನು ಅಮೆರಿಕದ ಲ್ಯಾಬ್ಗಳು ಅನುಸರಿಸಿವೆ. ಆದರೆ, ನಿಖರ ಫಲಿತಾಂಶಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದರಿಂದ, ವಿಶ್ವಾಸಾರ್ಹ ಫಲಿತಾಂಶ ಸಾಧ್ಯವಾಗದೆ ಇರುವುದ ರಿಂದ ಯುಎಸ್ ಫುಡ್ ಆ್ಯಂಡ್ ಅಡ್ಮಿನಿ ಸ್ಟ್ರೇಷನ್ (ಯುಎಸ್ಎಫ್ಡಿಎ) ಲಾಲಾ ರಸ ಪರೀಕ್ಷಾ ವಿಧಾನವನ್ನು “ಗೇಮ್ ಚೇಂಜರ್’ ಎಂದು ಘೋಷಿಸಿದೆ.
“ಕೋವಿಡ್ ಸೋಂಕಿನ ಪತ್ತೆಗೆ ಲಾಲಾ ರಸ ಪರೀಕ್ಷೆ ಅತ್ಯಂತ ಪರಿಣಾಮಕಾರಿ. ಪ್ರಯೋಗಾಲಯಕ್ಕೆ ಬಳಸಲ್ಪಡುವ ರಾಸಾ ಯನಿಕಗಳ ಕೊರತೆ ತಪ್ಪಿಸಲೂ ಈ ಟೆಸ್ಟ್ ಸೂಕ್ತವಾಗಿದೆ’ ಎಂದು ಯುಎಸ್ಎಫ್ಡಿಎ ನಿರ್ದೇಶಕ ಸ್ಟೀಫನ್ ಹ್ಯಾನ್ ತಿಳಿಸಿದ್ದಾರೆ.
ಎನ್ಬಿಎಯಿಂದ ಆರಂಭ: “ಸಲೈವಾ ಡೈರೆಕ್ಟ್ ಟೆಸ್ಟ್’ ಎಂದು ಕರೆಯಲ್ಪಡುವ ಈ ನೂತನ ಪರೀಕ್ಷಾ ವಿಧಾನ, ಎನ್ಪಿ ಸ್ವಾಬಿಂಗ್ ಹಾಗೂ ಇತರೆ ಸಾಂಪ್ರದಾಯಿಕ ವಿಧಾನಗಳಿಗಿಂತ ಕಡಿಮೆ ವೆಚ್ಚದ್ದಾಗಿದೆ. ನ್ಯಾಶನಲ್ ಬಾಸ್ಕೆಟ್ಬಾಲ್ ಅಸೋಸಿಯೇಶನ್ (ಎನ್ಬಿಎ) ಆಟಗಾರರು, ಸಿಬಂದಿ ಪರೀಕ್ಷೆ ಮೂಲಕ ಸಲೈವಾ ಡೈರೆಕ್ಟ್ ಟೆಸ್ಟ್ ಆರಂಭಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ