ಮಂಜಿನಲ್ಲಿ ಮರೆಯಾಗುವ ಶಿವಗಂಗೆ ಬೆಟ್ಟ

ಸಮುದ್ರ ಮಟ್ಟದಿಂದ 4547ಅಡಿ ಎತ್ತರವಿರುವ ಬೆಟ್ಟ

Team Udayavani, Aug 18, 2020, 12:46 PM IST

ಮಂಜಿನಲ್ಲಿ ಮರೆಯಾಗುವ ಶಿವಗಂಗೆ ಬೆಟ್ಟ

ನೆಲಮಂಗಲ: ಸಮುದ್ರ ಮಟ್ಟದಿಂದ 4547ಅಡಿ ಎತ್ತರವಿರುವ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಭಕ್ತರು ಹಾಗೂ ಪ್ರವಾಸಿಗರು ಮೋಡದಲ್ಲಿ ಪ್ರಯಣಿಸಿದ ಅನುಭವ ಅಚ್ಚರಿ ಎಂಬಂತೆ ಕೆಲವು ಸನ್ನಿವೇಶಗಳಲ್ಲಿ ಕಂಡುಬರುತ್ತಿದೆ.

ತಾಲೂಕಿನ ಸೋಂಪುರ ಹೋಬಳಿಯ ಸುಂದರ ರಮಣೀಯ ಶಿವಗಂಗೆ ಬೆಟ್ಟ ಮುಂಜಾನೆ ವೇಳೆ ಸಂಪೂರ್ಣವಾಗಿ ಮಂಜು ಮುಸುಕಿ ಬೆಟ್ಟವೇ ಇಲ್ಲದಂತೆ ಕಾಣುತ್ತದೆ. ಈ ಇಬ್ಬನಿ ಬೆಳಗ್ಗೆ 10 ಗಂಟೆಯಾದರೂ ಬೆಟ್ಟದ ಪೂರ್ಣ ಚಿತ್ರಣ ನೋಡಲು ಬಿಡುವುದಿಲ್ಲ. ಮೋಡದಲ್ಲಿ ಪಯಣ: 4547 ಅಡಿ ಎತ್ತರದ ಶಿವಗಂಗೆ ಬೆಟ್ಟದ ಆರಂಭದಲ್ಲಿರುವ ಗಂಗಾಧರೇಶ್ವರ ದೇವಾಲಯದವರೆಗೂ ಮಂಜು ಆವರಿಸುವುದರಿಂದ ಪ್ರವಾಸಿಗರು, ಭಕ್ತರು ದೇವರ ದರ್ಶನ ಪಡೆದು ಬೆಟ್ಟ ಏರಲು ಪ್ರಾರಂಭಿಸಿದರೆ ಸಾಕು, ಮೋಡದ ಒಳಗೆ ಸಂಚರಿಸುವ ಹಾಗೂ ಮೋಡದ ಮೇಲಿನ ಬೆಟ್ಟವನ್ನು ಏರುತ್ತಿರುವ ಅನುಭವ ಆಗುತ್ತದೆ.

ಬೆಟ್ಟ ಏರುವುದು ಸಾಹಸ: ಮಂಜು ಆವರಿಸಿದ ಸಂದರ್ಭದಲ್ಲಿ ಬೆಟ್ಟಕ್ಕೆ ಏರುವಾಗ ಮೆಟ್ಟಿಲುಗಳು ಹಾಗೂ ಕಡಿದಾದ ಕಲ್ಲುಬಂಡೆ ದಾರಿಯಲ್ಲಿ ಇಬ್ಬನಿ ನೀರಿನಿಂದ ಜಾರುವ ಅಪಾಯದ ಸ್ಥಿತಿ ಎದುರಾಗುತ್ತದೆ. ಇಂತಹ ಸಮಯದಲ್ಲಿ ಪ್ರವಾಸಿಗರು ಬೆಟ್ಟವನ್ನು ಏರುವುದು ಹಾಗೂ ಇಳಿಯುವುದು ಬಹಳ ಕಷ್ಟಕರ. ಆದರೂ, ಪ್ರವಾಸಿಗರು ಮಾತ್ರಮುಂಜಾನೆ ಮಂಜಿನ ಬೆಟ್ಟಕ್ಕೆ ಏರುವ ಮೂಲಕ ಸಾಹಸ ತೋರುತ್ತಾರೆ.

ಅಪರೂಪದ ದೃಶ್ಯ: ಶಿವಗಂಗೆ ನೋಡಲು ಬರುವ ಪ್ರವಾಸಿಗರಿಗೆ ಮಂಜಿನಲ್ಲಿ ಮರೆಯಾದ ಶಿವಗಂಗೆ ಕಾಣುವುದು ಬಲು ಅಪರೂಪ. ಮುಂಜಾನೆ 5.30 ರಿಂದ 7 ಗಂಟೆ ಒಳಗೆ ಭೇಟಿ ನೀಡಿದರೆ ಅಪರೂಪದ ದೃಶ್ಯ ಕಂಡು ಬರುತ್ತದೆ.

ಮುಂಜಾನೆ ಬನ್ನಿ: ಶಿವಗಂಗೆ ಬೆಟ್ಟವನ್ನು ಏರುವ ಪ್ರವಾಸಿಗರು ಮುಂಜಾನೆ ಸಮಯದಲ್ಲಿ ಬಂದರೆ ಆಯಾಸದ ಜತೆಗೆ ಆರೋಗ್ಯವೂ ಉತ್ತಮಗೊಳ್ಳುವುದು. ಮಧ್ಯಾಹ್ನದ ನಂತರ ಬೆಟ್ಟ ಏರಲು ಮುಂದಾದರೆ, ಬಿಸಿಲಿನ ತಾಪಕ್ಕೆ ಕುಸಿದು ಬೀಳುವ ಜತೆಗೆ ಒಳಕಲ್ಲು ತೀರ್ಥಕ್ಕೆಹೋಗುವಷ್ಟರಲ್ಲಿ ಬೆಟ್ಟ ಏರುವ ಆಸೆ ಬಿಟ್ಟುಬಿಡುತ್ತೀರಿ. ಹೀಗಾಗಿ ಶಿವಗಂಗೆ ಬೆಟ್ಟ ನೋಡಲು, ಏರಲು ಮುಂಜಾನೆ ಬನ್ನಿ ಎಂಬುದು ಕೆಲವು ಪ್ರವಾಸಿಗರ ಅಭಿಪ್ರಾಯ.

ಮುಂಜಾನೆ ಶಿವಗಂಗೆ ಸುಂದರ ಮರೆಯಾಗಿರುತ್ತದೆ. ಬೆಟ್ಟ ಹತ್ತುವಾಗ ಆಕಾಶದಲ್ಲಿ ಸಂಚರಿಸುವ ಅನುಭವ ಉಂಟಾಗಲಿದೆ. ಕೋವಿಡ್ ಲೆಕ್ಕಿಸದೇಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ.  -ಸಿದ್ಧರಾಜು, ಶಿವಗಂಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.