ಬೆಳೆ ಸಮೀಕ್ಷೆ ಆ್ಯಪ್: ರೈತರಿಗೆ ಅನುಕೂಲ
Team Udayavani, Aug 18, 2020, 1:42 PM IST
ಯಳಂದೂರು: ಮೊಬೈಲ್ಗಳಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಸಿದರೆ ಸುಲಭವಾಗಿ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಸೋಮವಾರ ರೈತ ಫಲಾನುಭವಿಗಳಿಗೆ ಟ್ರಿಲ್ಲರ್ ವಿತರಣೆ ಹಾಗೂ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ತೋರಿಸಿ ಅವರು ಮಾತನಾಡಿ, ರೈತರು ಆ್ಯಪ್ನಲ್ಲಿ ತಮ್ಮ ಜಮೀನಿನ ಆರ್ಟಿಸಿ ನಂಬರ್, ಬೆಳೆದಿರುವ ಬೆಳೆಗಳು, ಜಮೀನಿನ ಬೆಳೆಗಳನ್ನು ಫೋಟೋ ಸಮೇತ ಅಪ್ಲೋಡ್ ಮಾಡಬೇಕು. ಆಗ ಇದು ನೇರವಾಗಿ ಇಲಾಖೆಗೆ ತಲುಪುತ್ತದೆ. ಸರ್ಕಾರದ ಸವಲತ್ತು ಗಳನ್ನು ಪಡೆಯಲು ಸುಲಭವಾಗುತ್ತದೆ. ಈ ಹಿಂದೆ ಬೆಳೆ ವಿಮೆಯಲ್ಲಿ ಆಗಿರುವ ಲೋಪಗಳು ಹೊಸ ತಂತ್ರಜ್ಞಾನದಿಂದ ಸರಿಯಾಗಲಿದೆ ಎಂದರು.
ಎಲ್ಲರಿಗೂ ಟ್ರಿಲ್ಲರ್: ತಾಲೂಕಿನ ಸಾಮಾನ್ಯ ವರ್ಗದ 13 ರೈತರಿಗೆ ಟ್ರಿಲ್ಲರ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಮೂಲ ದರ 1.80 ಲಕ್ಷ ರೂ. ಆಗಿದ್ದು, ರೈತರಿಗೆ 72.500 ರೂ. ಸಬ್ಸಿಡಿ ದೊರೆಯಲಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಟ್ರಿಲ್ಲರ್ ವಿತರಣೆ ಮಾಡಲಾಗುವುದು ಎಂದರು.
ಟ್ರಿಲ್ಲರ್ ವಿತರಣೆ ವಿಳಂಬ, ಗೊಂದಲ: ನಾಟಿ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಕ್ಕೂ ಮುಂಚೆ ಟ್ರಿಲ್ಲರ್ಗಳನ್ನು ಇಲಾಖೆ ನೀಡಬೇಕು. 13 ರೈತ ಫಲಾನುಭವಿಗಳು ಆಯ್ಕೆಯಾಗಿದ್ದರೂ ಕೇವಲ 6 ಟ್ರಿಲ್ಲರ್ ಗಳನ್ನು ಮಾತ್ರ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಕೆಸ್ತೂರು ಮಾದೇಶ್ ಆರೋಪಿಸಿದರು. ಕೆಲ ಕಾಲ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದವೂ ನಡೆಯಿತು. ನಂತರ ಶಾಸಕರು ಸಮಾಧಾನಪಡಿಸಿ ಎಲ್ಲರಿಗೂ ಟ್ರಿಲ್ಲರ್ಗಳನ್ನು ವಿತರಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಗೊಂದಲಕ್ಕೆ ತೆರೆಬಿದ್ದಿತು.
ಜಿಪಂ ಸದಸ್ಯ ಜೆ.ಯೋಗೇಶ್, ತಾಪಂ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ವೈ.ಕೆ.ಮೋಳೆ ನಾಗರಾಜು, ಪುಟ್ಟು, ಸಹಾಯಕ ಕೃಷಿ ನಿರ್ದೇಶಕ ಎಸ್. ಕೃಷ್ಣ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಆತ್ಮ ಯೋಜನೆಯ ಮಹೇಂದ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್