ಸರಿಯಾಗಿ ವಿದಾಯ ಸಿಗದ ಆಟಗಾರರ ತಂಡ ರಚಿಸಿದ ಪಠಾಣ್: ವಿದಾಯ ಪಂದ್ಯ ನಡೆಸಲು ಕೋರಿಕೆ
Team Udayavani, Aug 23, 2020, 9:19 AM IST
ಮುಂಬೈ: ಟೀಂ ಇಂಡಿಯಾ ಪರ ಆಡಿ ಸರಿಯಾದ ವಿದಾಯ ಪಂದ್ಯ ಸಿಗದೆ ನಿವೃತ್ತಿಯಾದ ಆಟಗಾರರಿಗೆ ಒಂದು ವಿದಾಯ ಪಂದ್ಯ ನಡೆಸಬೇಕು ಎಂದು ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ. ಇದರ ಕುರಿತು ಬಿಸಿಸಿಗೆ ಪಠಾಣ್ ಹೊಸ ಉಪಾಯವೊಂದನ್ನೂ ನೀಡಿದ್ದಾರೆ.
ಸರಿಯಾಗಿ ವಿದಾಯ ಸಿಗದೆ, ಅಥವಾ ವಿದಾಯ ಪಂದ್ಯ ಸಿಗದೆ ನಿವೃತ್ತಿಯಾಗಿರುವ ಆಟಗಾರರ ತಂಡವೊಂದನ್ನು ಇರ್ಫಾನ್ ಪಠಾಣ್ ಪಟ್ಟಿ ಮಾಡಿದ್ದಾರೆ. ಇತ್ತೀಚೆಗೆ ನಿವೃತ್ತಿಯಾದ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾರನ್ನು ಸೇರಿಸಿ ಹನ್ನೊಂದು ಜನರ ತಂಡವೊಂದನ್ನು ಪಠಾಣ್ ಪಟ್ಟಿ ಮಾಡಿದ್ದಾರೆ. ಈ ತಂಡ ಮತ್ತು ಸದ್ಯದ ವಿರಾಟ್ ನೇತೃತ್ವದ ರಾಷ್ಟ್ರೀಯ ತಂಡದ ನಡುವೆ ಸ್ನೇಹ ಪಂದ್ಯ ನಡೆಸಬೇಕು ಎಂದು ಪಠಾಣ್ ಕೋರಿದ್ದಾರೆ.
ಇದನ್ನೂ ಓದಿ: ಜ್ಯಾಕ್ ಕ್ರಾವ್ಲಿ ದ್ವಿಶತಕ, ಬಟ್ಲರ್ ಶತಕದ ಮೆರೆದಾಟ: ಪಾಕಿಸ್ಥಾನ ಪರದಾಟ
ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಅವರಿಗೆ ವಿದಾಯ ಪಂದ್ಯವೊಂದನ್ನು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಈ ನಡುವೆ ಬಿಸಿಸಿಐ ಗೆ ಇರ್ಫಾನ್ ಪಠಾಣ್ ಉತ್ತಮ ಉಪಾಯವೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: ಲಿಫ್ಟ್ ನೀಡುವುದಾಗಿ ಹೇಳಿ 50 ವರ್ಷದ ಮಹಿಳೆಯ ಗ್ಯಾಂಗ್ ರೇಪ್: ವಿಡಿಯೋ ವೈರಲ್, ಆರು ಜನರ ಬಂಧನ
ನಿವೃತ್ತರ ತಂಡ:
ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಎಂ.ಎಸ್.ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಓಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !