ಹಳ್ಳಿಗಳ ಮನೆಗಳಿಗೂ ಕುಡಿಯಲು ನಳ್ಳಿ ನೀರು


Team Udayavani, Sep 18, 2020, 1:52 AM IST

ಹಳ್ಳಿಗಳ ಮನೆಗಳಿಗೂ ಕುಡಿಯಲು ನಳ್ಳಿ ನೀರು

ಸಾಂದರ್ಭಿಕ ಚಿತ್ರ

ಕುಂದಾಪುರ: ನಗರಗಳ ಮಾದರಿಯಲ್ಲಿ ಗ್ರಾಮಾಂತರದಲ್ಲಿ ಪ್ರತಿ ಮನೆಗೂ ನಳ್ಳಿ ನೀರಿನ ಸಂಪರ್ಕ ನೀಡಬೇಕೆಂಬ ಕೇಂದ್ರ ಸರಕಾರದ ಜಲಜೀವನ ಮಿಷನ್‌ (ಹರ್‌ ಘರ್‌ ಜಲ್‌) ಯೋಜನೆ ಈ ವರ್ಷವೇ ಕಾರ್ಯರೂಪಕ್ಕೆ ಬರಲಿದ್ದು 2020-21ನೇ ಸಾಲಿಗೆ ದ.ಕ., ಉಡುಪಿ ಜಿಲ್ಲೆಗೆ ಅನುದಾನ ಬಂದಿದೆ.

ಏನಿದು ಜಲಜೀವನ
2024ರ ಒಳಗೆ ದೇಶದ ಗ್ರಾಮಾಂತರ ಪ್ರದೇಶದ ಪ್ರತಿಮನೆಯೂ ನಳ್ಳಿಯ ಮೂಲಕ ಶುದ್ಧ ಕುಡಿಯುವ ನೀರು ಪಡೆಯಬೇಕೆಂದು ಬಯಸುವ ಯೋಜನೆ ಇದಾಗಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗುವುದು, ಕಲುಷಿತ, ಫ್ಲೋರೈಡ್‌ ಪೂರಿತ ನೀರು ಸೇವಿಸಿ ರೋಗ ರುಜಿನ ಉಂಟಾಗುವುದನ್ನು ತಡೆಯಲು, ಒಬ್ಬ ವ್ಯಕ್ತಿಗೆ ಕನಿಷ್ಠ 55 ಲೀ.ನಂತೆ 365 ದಿನವೂ ನೀರು ಒದಗಿಸಲಾಗುತ್ತದೆ. ಶೇ. 45 ಕೇಂದ್ರದ ಪಾಲಾಗಿದ್ದು ಶೇ. 45 ರಾಜ್ಯ ಸರಕಾರ ನೀಡಲಿದೆ. ಶೇ. 10 ಸ್ಥಳೀಯ ಗ್ರಾ.ಪಂ. ಸಂಪನ್ಮೂಲದಿಂದ ಭರಿಸಬೇಕಿದೆ. ರಾಜ್ಯದಲ್ಲಿ 15 ಲಕ್ಷ ಮನೆಗಳಿಗೆ ಸಂಪರ್ಕ ನೀಡಲು ಕೇಂದ್ರ 1,150 ಕೋ.ರೂ. ಅನುದಾನ ನೀಡಿದೆ. ಪ್ರಾರಂಭದಲ್ಲಿ ಜಲಮೂಲ ಲಭ್ಯ ಇರುವ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ನಳ್ಳಿ ನೀರಿಗೆ ಮೀಟರ್‌ ಅಳವಡಿಸಲಾಗುತ್ತದೆ. ಬಳಸಿದ ನೀರಿಗೆ ಪಂಚಾಯತ್‌ಗೆ ಹಣ ಪಾವತಿಸಬೇಕಿದೆ.

ಬಹುತೇಕ ಮನೆಗಳಲ್ಲಿಲ್ಲ
ಕೇಂದ್ರ ಸರಕಾರ ಬಜೆಟ್‌ನಲ್ಲಿ 3.6 ಲಕ್ಷ ಕೋ.ರೂ.ಗಳನ್ನು ಈ ಯೋಜನೆಗಾಗಿ ಘೋಷಿಸಿತ್ತು. ದೇಶದ ಗ್ರಾಮಾಂತರದ 18.9 ಕೋಟಿ ಮನೆಗಳ ಪೈಕಿ 5.38 ಕೋಟಿ ಮನೆಗಳಿಗಷ್ಟೇ ನಳ್ಳಿ ಸಂಪರ್ಕ ಇದೆ. 13.54 ಕೋಟಿ ಅಂದರೆ ಶೇ. 71ರಷ್ಟು ಮನೆಗಳಿಗೆ ಸಾರ್ವಜನಿಕ ನಳ್ಳಿ ನೀರಿಲ್ಲ. ಸೆ. 8ರ ಅಂಕಿ-ಅಂಶದಂತೆ ರಾಜ್ಯದಲ್ಲಿ 89.61 ಲಕ್ಷ ಮನೆಗಳ ಪೈಕಿ 25.9 ಲಕ್ಷ ಮನೆಗಳಿಗೆ ನಳ್ಳಿ ನೀರಿದೆ. 63.6 ಲಕ್ಷ ಮನೆಗಳಿಗೆ ಸಂಪರ್ಕವಾಗಬೇಕಿದೆ. ದ.ಕ. ಜಿಲ್ಲೆಯಲ್ಲಿ 2.9 ಲಕ್ಷ ಮನೆಗಳ ಪೈಕಿ 1.46 ಲಕ್ಷ ಮನೆಗಳಿಗೆ ನಳ್ಳಿ ನೀರಿದ್ದರೆ, ಉಡುಪಿ ಜಿಲ್ಲೆಯಲ್ಲಿ 2.44 ಲಕ್ಷ ಮನೆಗಳ ಪೈಕಿ 66 ಸಾವಿರ ಮನೆಗಳಲ್ಲಿ ಮಾತ್ರ ನಳ್ಳಿ ಸಂಪರ್ಕ ಇದೆ. ದ.ಕ.ದಲ್ಲಿ ಶೇ. 50 ಹಾಗೂ ಉಡುಪಿಯಲ್ಲಿ ಶೇ. 27 ಮನೆಗಳು ಸ್ಥಳೀಯಾಡಳಿತದಿಂದ ನೀರು ಪಡೆಯುತ್ತವೆ. ಇಡೀ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತ್ಯಂತ ಕಡಿಮೆ ಶೇ. 6ರಷ್ಟು ಮನೆಗಳಿಗೆ ಸಂಪರ್ಕ ಹೊಂದಿದೆ.

ಅನುದಾನ
ದ.ಕ. ಜಿಲ್ಲೆಯ 215 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನವಾಗಬೇಕಿದ್ದು 160 ಕೋ.ರೂ. ಬಂದಿದೆ. ಉಡುಪಿ ಜಿಲ್ಲೆಗೆ 236 ಕೋ.ರೂ. ಬಂದಿದ್ದು 250 ಗ್ರಾಮಗಳಲ್ಲಿ ಅನುಷ್ಠಾನವಾಗಲಿದೆ. ಯೋಜನೆ 2023ರಲ್ಲಿ ಪೂರ್ಣವಾಗಬೇಕಿದ್ದು ಉಳಿಕೆಯಾಗುವ ಮನೆಗಳ ಸಂಪರ್ಕಕ್ಕೆ ಇನ್ನೆರಡು ವರ್ಷಗಳಲ್ಲಿ ಕಂತಿನಲ್ಲಿ ಅನುದಾನ ಬರಲಿದೆ. ಯೋಜನೆಯಲ್ಲಿ ಈಗ ಕೆರೆ, ಬಾವಿ, ಕೊಳವೆಬಾವಿಯಂತಹ ಜಲಮೂಲ ಸೃಷ್ಟಿಗೆ ಹಣ ಇರುವುದಿಲ್ಲ. ಆದರೆ ಜಲಮರುಪೂರಣ, ನೀರಿನ ಮೂಲದ ರಕ್ಷಣೆ, ಮಳೆ ನೀರು ಸಂಗ್ರಹ, ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸೇರಿದಂತೆ ಜಲಸಂಪನ್ಮೂಲ ವೃದ್ಧಿಗೆ ಇದೇ ಯೋಜನೆ ರೂಪುರೇಷೆಗಳನ್ನು ಒಳಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮನೆಗಳಷ್ಟೇ ಅಲ್ಲದೇ ಪಂಚಾಯತ್‌ ಕಟ್ಟಡ, ಶಾಲೆ, ಅಂಗನವಾಡಿ, ಆಸ್ಪತ್ರೆ, ಸಮೂಹ ವಸತಿಯ ಕಟ್ಟಡಗಳಿಗೂ ನೀರು ದೊರೆಯಲಿದೆ.

250 ಗ್ರಾಮಗಳಲ್ಲಿ ಅನುಷ್ಠಾನಕ್ಕಾಗಿ 236 ಕೋ.ರೂ. ಅನುದಾನ ಬಂದಿದ್ದು ಪಂಚಾಯತ್‌ ಹಂತದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ.
ಪ್ರೀತಿ ಗೆಹಲೋಟ್‌, ಉಡುಪಿ ಜಿ.ಪಂ. ಸಿಇಒ

160 ಕೋ.ರೂ. ಅನುದಾನ ಮಂಜೂರಾಗಿದ್ದು 215 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.
ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ,

55 ಲೀ. ಒಬ್ಬ ವ್ಯಕ್ತಿಗೆ ಕನಿಷ್ಠ ನೀರು
365 ದಿನವೂ ಸರಬರಾಜು
2023ಕ್ಕೆ ಯೋಜನೆ ಪೂರ್ಣ

ಟಾಪ್ ನ್ಯೂಸ್

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.