ಎನ್.ಎಚ್.ವ್ಯಾಲಿ ನೀರು ಹರಿಸಲು ಆಗ್ರಹ
Team Udayavani, Sep 19, 2020, 1:32 PM IST
ದೇವನಹಳ್ಳಿ: ಬೆಂಗಳೂರಿನ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಅಣಿಘಟ್ಟ, ಸಾವಕನಹಳ್ಳಿ ಗ್ರಾಮ ಗಳ ಗ್ರಾಮಸ್ಥರು ತಾಲೂಕಿನ ಬಿದಲೂರು ಅಮಾನಿಕೆರೆ ಕೋಡಿ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು.
ಸಾವಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎಸ್.ಪಿ. ಮುನಿರಾಜು ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ, ಬಯಲು ಸೀಮೆ ಪ್ರದೇಶದ ಕೆರೆಗಳಿಗೆ ನಾಗವಾರ-ಹೆಬ್ಟಾಳ ಶುದ್ಧೀಕರಿಸಿದ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದರು. ಇದಕ್ಕೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವಕೃಷ್ಣಬೈರೇಗೌಡ ಅವರ ದೂರದೃಷ್ಟಿಯಿಂದ ಈ ಯೋಜನೆಗೆ ಕ್ರಿಯಾಯೋಜನೆ ರೂಪಿಸಿ, ದೇವನಹಳ್ಳಿಯಲ್ಲಿಯೇ ಶಂಕುಸ್ಥಾಪನೆ ಮಾಡಲಾಗಿತ್ತು ಎಂದರು.
ತಾಲೂಕಿನಲ್ಲಿ 3 ಕೆರೆ ಹೊರತು ಪಡಿಸಿದರೆ, ಇನ್ನೂ 6 ಕೆರೆಗಳಿಗೆ ನೀರು ಹರಿದಿಲ್ಲ. ಪ್ರಸ್ತುತ 2 ಇಂಚು ನೀರು ಬರುತ್ತಿದೆ. ಉಳಿದ ನೀರೆಲ್ಲಾ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆಹರಿಯುತ್ತಿದೆ. ನಾವುಇಲ್ಲಿಅನಾಥರಾಗಿದ್ದೇವೆ. ದೇವನಹಳ್ಳಿ ದೊಡ್ಡ ಅಮಾನಿಕೆರೆ 386 ಎಕರೆ ವಿಸ್ತೀರ್ಣ ಹೊಂದಿದೆ. 2 ಕೆರೆ ಕೋಡಿ ನಿರ್ಮಿಸಲಾಗಿದೆ. ಜೌಗು ರೀತಿಯಲ್ಲಿ ನೀರು ಜಿನುಗಿದರೆ ಒಂದು ವರ್ಷವಾದರೂ ಕೆರೆ ತುಂಬುವ ಲಕ್ಷಣ ಕಾಣುವುದಿಲ್ಲ. ಸರ್ಕಾರ ಮತ್ತು ಇಲಾಖೆ ಹಿರಿಯ ಅಧಿಕಾರಿಗಳು ರೈತರ ಕಣ್ಣೀರು ಹರಿಸುವ ತಂತ್ರ ಅನುಸರಿಸುತ್ತಿದ್ದಾರೆಂದು ದೂರಿದರು.
ನಗರ ಪಕ್ಕದಲ್ಲಿಯೇ ಇರುವ ಕೆರೆಗೆ ನೀರು ಹರಿಸದಿದ್ದರೆ ಹೇಗೆ. ಇದೊಂದು ಸಾಂಕೇತಿಕ ಪ್ರತಿಭಟನೆ ಅಷ್ಟೇ.ಹೆಚ್ಚುವರಿ ನೀರು ಹರಿಸಿ, ದೊಡ್ಡ ಅಮಾನಿಕೆರೆ ತುಂಬಿಸ ಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಚಲೋ ಎಂದು ಎತ್ತಿನ ಗಾಡಿಯೊಂದಿಗೆ ಮುತ್ತಿಗೆ ಹಾಕಲಾಗು ವುದು ಎಂದು ಎಚ್ಚರಿಸಿದರು. ಮುಖಂಡ ರಾಜಣ್ಣ, ಆನಂದ್, ಕೃಷ್ಣಪ್ಪ, ಶಿವಣ್ಣ, ಅಣ್ಣಪ್ಪ, ಆಂಜಿನಪ್ಪ, ಚನ್ನಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ