ಚಕ್ರಬಡ್ಡಿ ಮನ್ನಾ ಪ್ರಕರಣದ ವಿಚಾರಣೆ: ಕೇಂದ್ರದ ಅಫಿಡವಿಟ್ಗೆ ಸುಪ್ರೀಂ ಅಸಮಾಧಾನ
ಕಾಮತ್ ನೇತೃತ್ವದ ಸಮಿತಿಯ ವರದಿಯನ್ವಯವೇ ಚಕ್ರಬಡ್ಡಿ ಮನ್ನಾ ಮಾಡಲಾಗಿದೆಯೇ ಎಂಬುದರ ಬಗ್ಗೆ ಅಫಿಡ ವಿಟ್ನಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.
Team Udayavani, Oct 6, 2020, 6:35 PM IST
ನವದೆಹಲಿ:ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಲ ಮರುಪಾವತಿ ಕಂತುಗಳ ಮುಂದೂಡಿಕೆಯ (ಲೋನ್ ಮೊರಟೋರಿಯಂ) ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಅದು ಎಲ್ಲಾ ಸಾಲಗಾರರಿಗೂ ಸಮಾಧಾನಕರವಾದ ಕ್ರಮವಾಗಿಲ್ಲ ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ.
ಪ್ರಕರಣ ಸಂಬಂಧ ವಿವಿಧ ವಲಯಗಳಿಂದ ಸಲ್ಲಿಕೆಯಾಗಿರುವ ಆಕ್ಷೇಪಣಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆಕ್ಷೇಪಣೆಗಳಿಗೆ ಪ್ರತಿ
ಯಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ನಲ್ಲಿರುವ ಲೋಪಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿತು. ಜೊತೆಗೆ, ಎಲ್ಲಾ ವಲಯಗಳ ಸಾಲಗಾರರ ಗೊಂದಲ
ಪರಿಹಾರ ವಾಗುವಂತೆ ಸೂಕ್ತ ಪ್ರಕಟಣೆ ಹೊರತರು ವಂತೆ ಸೂಚಿಸಿತು.
ಮೂರು ಬಗೆಯ ಲೋಪ ಪತ್ತೆ: ಚಕ್ರಬಡ್ಡಿ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 3 ಬಗೆಯ ಲೋಪಗಳಿವೆ ಎಂದು ನ್ಯಾಯ
ಪೀಠ ಹೇಳಿತು. ಮೊದಲನೆಯದಾಗಿ, ಚಕ್ರಬಡ್ಡಿ ಮನ್ನಾ ವಿಚಾರವಾಗಿ ಕೇಂದ್ರ ಸರ್ಕಾರದಿಂದಾಗಲೀ, “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'(ಆರ್ಬಿ
ಐ)ದಿಂದಾಗಲೀ ಯಾವುದೇ “ಪರಿಣಾಮಕಾರಿ ಆದೇಶ’ ಅಥವಾ “ಸುತ್ತೋಲೆ’ ಪ್ರಕಟವಾಗಿಲ್ಲ.
ಎರಡನೆಯದಾಗಿ, ಕೊರೊನಾ ಸಾಂಕ್ರಾಮಿಕ ಘಟ್ಟ ದಲ್ಲಿ ಸಾಲಗಾರರ ಮೇಲಿನ ಸಾಲದ ಹೊರೆ ಇಳಿಕೆ ಮಾಡುವ ವಿಧಾನಗಳನ್ನು ಪರಿಶೋಧಿಸಿ ಸಲಹೆ
ನೀಡುವ ಸಲುವಾಗಿ ನೇಮಿಸಲಾಗಿದ್ದ ಕೆ.ವಿ.ಕಾಮತ್ ನೇತೃತ್ವದ ಸಮಿತಿಯ ವರದಿಯನ್ವಯವೇ ಚಕ್ರಬಡ್ಡಿ ಮನ್ನಾ ಮಾಡಲಾಗಿದೆಯೇ ಎಂಬುದರ ಬಗ್ಗೆ ಅಫಿಡ
ವಿಟ್ನಲ್ಲಿ ಸ್ಪಷ್ಟ ಉಲ್ಲೇಖವಿಲ್ಲ. ಅಸಲಿಗೆ, ವರದಿ ಯನ್ನು ಸರ್ಕಾರ ಸ್ವೀಕರಿಸಿದೆಯೇ ಅಥವಾ ತಿರಸ್ಕರಿಸಿ ದೆಯೇ ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳಲಾಗಿಲ್ಲ.
ಮೂರನೆಯದಾಗಿ, ಕಾಮತ್ ಸಮಿತಿ ವರದಿಯನ್ನು ಸಾರ್ವಜನಿಕ ಅವಗಾಹನೆಗಾಗಿ ಎಲ್ಲಿಯೂ ಅದನ್ನು ಅಧಿಕೃತವಾಗಿ ಪ್ರಕಟಿಸಿರುವ ಬಗ್ಗೆಯಾಗಲೀ
ಅಫಿಡವಿಟ್ನಲ್ಲಿ ಎಲ್ಲೂ ತಿಳಿಸಿಲ್ಲ ಎಂದು ನ್ಯಾಯ ಪೀಠ ಹೇಳಿತು.
ಬೇರೆ ಅಫಿಡವಿಟ್ಗೆ ಸೂಚನೆ: ಮೇಲೆ ತಿಳಿಸಿದ ಎಲ್ಲಾ ಲೋಪಗಳಿಗೆ ಸೂಕ್ತ ಉತ್ತರವಿರುವ ಬೇರೊಂದು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು. ಜೊತೆಗೆ, ಈಗಾಗಲೇ ಚಕ್ರಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿ ಅನೇಕ ವಲಯಗಳಿಂದ ಬಂದಿರುವ ಆಕ್ಷೇಪಣಾ ಅರ್ಜಿಗಳಿಗೆ ಅದರಲ್ಲೂ ವಿಶೇಷವಾಗಿ ರಿಯಲ್ ಎಸ್ಟೇಟ್ ವಲಯ ಹಾಗೂ ವಿದ್ಯುತ್ ಉತ್ಪಾದನಾ ವಲಯಗಳಿಂದ ಬಂದಿರುವ ಅರ್ಜಿಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆದೇಶಿಸಿತು. ಇದೇ ವೇಳೆ, ಚಕ್ರಬಡ್ಡಿ ಮನ್ನಾದಿಂದ ಬ್ಯಾಂಕುಗಳಿಗೆ6 ಸಾವಿರಕೋಟಿ ರೂ. ಹೊರೆ ಬೀಳುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿರುವ ಬಗ್ಗೆಯೂ ಸ್ಪಷ್ಟನೆ ನೀಡು ವಂತೆ ನ್ಯಾಯಪೀಠ ಸೂಚಿಸಿ ವಿಚಾರಣೆಯನ್ನು ಅ.13ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ