ಪೋಷಣ್‌ ಅಭಿಯಾನದಡಿ 2,186 ಸಿಮ್‌ ವಿತರಣೆಗೆ ಸಿದ್ಧ

ಸ್ಮಾರ್ಟ್‌ ಫೋನ್‌ ಈಗಾಗಲೆ ವಿತರಣೆ ,ಕೋವಿಡ್‌ನಿಂದ ತಂತ್ರಾಂಶ ಬಳಕೆ ತರಬೇತಿ ವಿಳಂಬ

Team Udayavani, Oct 12, 2020, 11:48 AM IST

ಪೋಷಣ್‌ ಅಭಿಯಾನದಡಿ 2,186 ಸಿಮ್‌ ವಿತರಣೆಗೆ ಸಿದ್ಧ

ವಿತರಣೆಗೆ ಸಿದ್ಧವಾಗಿರುವ ಮೊಬೈಲ್‌.

ಬೆಳ್ತಂಗಡಿ,ಅ. 11: ಕೇಂದ್ರ ಸರಕಾರದ ಪೋಷಣ್‌ ಅಭಿಯಾನದಡಿ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು, ಗರ್ಭಿಣಿ, ಬಾಣಂತಿಯರ ಸಂಪೂರ್ಣ ಮಾಹಿತಿ ಡಿಜಿಟಲೈಜ್‌ ದಾಖಲೀಕರಣ ಮಾಡುವ ನೆಲೆಯಲ್ಲಿ ಜಿಲ್ಲೆಯ 2,108 ಅಂಗನವಾಡಿಗಳ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಈಗಾಗಲೇ ಮೊಬೈಲ್‌ ವಿತರಣೆಯಾಗಿದ್ದು, ಪ್ರಸಕ್ತ 2,186 ಸಿಮ್‌ ಕಾರ್ಡ್‌ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕೈಸೇರಿದೆ.

ಜಿಲ್ಲೆಯಲ್ಲಿ ಒಟ್ಟು 2,018 ಅಂಗನವಾಡಿ ಕೇಂದ್ರಗಳಲ್ಲಿದ್ದು 82 ಮೇಲ್ವಿಚಾರಕರಿದ್ದಾರೆ. ಈಗಾಗಲೆ ಅವಶ್ಯವಿರುವಷ್ಟು ಮೊಬೈಲ್‌ಗ‌ಳನ್ನು ಸಿಡಿಪಿಒ ಕಚೇರಿಗೆ ವರ್ಗಾಯಿಸಿ ಒಂದು ತಿಂಗಳು ಕಳೆದಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಅಂಗನವಾಡಿ ವ್ಯಾಪ್ತಿಯಲ್ಲಿ ಲಭ್ಯವಿರುವ ನೆಟ್‌ವರ್ಕ್‌ ಆಧರಿಸಿ ಬೇರೆ ಬೇರೆ ಕಂಪೆನಿ ಸಿಮ್‌ಗಳ ಮಾಹಿತಿ ಪಡೆಯಲಾಗಿತ್ತು. ಈ ನೆಲೆಯಲ್ಲಿ ಒಟ್ಟು ಹೆಚ್ಚುವರಿ ಸಿಮ್‌ ಸೇರಿ 2,186 ಸಿಮ್‌ ಕಾರ್ಡ್‌ ಜಿಲ್ಲಾ ಕಚೇರಿಗೆ ಪೂರೈಕೆಯಾಗಿದೆ.

ತರಬೇತಿ ವಿಳಂಬ :  ವಿತರಣೆಗೆ ಲಭ್ಯವಿದ್ದರೂ ಸಿಮ್‌ ಕಾರ್ಡ್‌ ನೀಡುವ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಸ್ನೇಹ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ನೀಡಬೇಕಿದೆ. ತರಬೇತಿ ವಿಳಂಬವಾಗುತ್ತಿರುವುದರಿಂದ ಸಿಮ್‌ ಕಾರ್ಡ್‌ ವಿತರಣೆ ನಡೆದಿಲ್ಲ.

ಸ್ನೇಹ ತಂತ್ರಾಂಶ ಆ್ಯಪ್‌ :  ರಾಜ್ಯದ ಅಂಗನವಾಡಿ ಕೇಂದ್ರಗಳ ಮಾಹಿತಿ ಸಂಗ್ರಹಕ್ಕಾಗಿ ಸ್ನೇಹ ತಂತ್ರಾಂಶ (ಆ್ಯಪ್‌) ರೂಪಿಸಲಾಗಿದೆ. ಈ ಆ್ಯಪ್‌ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ವಿವರ ದಾಖಲಾತಿ ಮಾಡಬೇಕಿದೆ.

ಡಿಡಿ ಕಚೇರಿ  ಸಿಬಂದಿಗೆ ತರಬೇತಿ :  ದ.ಕ. ಜಿಲ್ಲೆಯಲ್ಲಿರುವ 2,108 ಅಂಗನವಾಡಿಗಳ ಕಾರ್ಯಕರ್ತೆಯರು, 82 ಮೇಲ್ವಿಚಾರಕರು ಸಹಿತ 2,190 ಮೊಬೈಲ್‌ ಜತೆಗೆ ಹೆಚ್ಚುವರಿಯಾಗಿ 116 ಸೇರಿ ಒಟ್ಟು 2,306 ಮೊಬೈಲ್‌ಗ‌ಳು ಪೂರೈಕೆಯಾಗಿವೆ. ಇನ್ನುಳಿದಂತೆ 1,949 ಏರ್‌ಟೆಲ್‌, 2 ವೊಡಾಫೋನ್‌, 130 ಬಿಎಸ್‌ಎನ್‌ಎಲ್‌, 105 ಜಿಯೋ ಸಿಮ್‌ ರಾಜ್ಯದಿಂದ ಜಿಲ್ಲಾ ಕಚೇರಿಗೆ ತಲುಪಿದೆ. ಮೊಬೈಲ್‌ ಸಿಮ್‌ ನೀಡುವ ಮುನ್ನ ಸ್ನೇಹ ಆ್ಯಪ್‌, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್‌), ಹೆಚ್ಚುವರಿ ಕಲಿಕಾ ವಿಧಾನ ತಂತ್ರಾಂಶ ಅಳವಡಿಸಿ ನೀಡಬೇಕಿದೆ. ಈಗಾಗಲೆ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿ 21 ವಿಷಯವಾರುಗಳ ಪೈಕಿ 3 ವಿಷಯವಾರು ತರಬೇತಿಯಷ್ಟೆ ಪೂರ್ಣ ಗೊಂಡಿದೆ. ತಂತ್ರಾಂಶದ ವಿಚಾರವಾಗಿ ದಿಲ್ಲಿಯಿಂದ ಡಿಡಿ ಕಚೇರಿ ಸಿಬಂದಿಗಷ್ಟೆ ತರಬೇತಿ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಇಲಾಖೆಯ ಮೇಲ್ವಿಚಾರಕರಿಗೂ ಸ್ಮಾರ್ಟ್‌ಫೋನ್‌ ವಿತರಣೆಯಾಗಲಿದೆ. ಮಕ್ಕಳ ವಿವರ, ಅವರ ತೂಕ, ಎತ್ತರ, ನೀಡಿದ ಆಹಾರದ ವಿವರಗಳನ್ನು ದಾಖಲಾತಿ ಮಾಡಬೇಕಾಗಿದೆ. ಜತೆಗೆ ಕೇಂದ್ರದ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ವಿವರಗಳನ್ನು ದಾಖಲಾತಿ ಮಾಡುವ ಸಲುವಾಗಿ ಮೂರು ಆ್ಯಪ್‌ಗಳನ್ನು ಮೊಬೈಲ್‌ಗೆ ಅಳವಡಿಸಿ ಕೇಂದ್ರದ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಪ್ರಸ್ತುತ ಕೋವಿಡ್‌ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ತೆರೆಯದಿದ್ದುದರಿಂದ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗುತ್ತಿವೆ.

ಸಲಕರಣೆ ಸಹಿತ ವಿತರಣೆ :  ಈಗಾಗಲೇ ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ ವ್ಯಾಪ್ತಿಯ 7 ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗಳಿಗೆ ಮೊಬೈಲ್‌ ವಿತರಣೆಯಾಗಿದೆ. ಮೊಬೈಲ್‌ ಜತೆಗೆ ಪವರ್‌ ಬ್ಯಾಂಕ್‌, ಇಯರ್‌ ಫೋನ್‌, ಚಾರ್ಜರ್‌, ಮೆಮರಿಕಾರ್ಡ್‌, ಸ್ಕ್ರೀನ್‌ ಗಾರ್ಡ್‌ ನೀಡಲಾಗಿದೆ. ಇದರೊಂದಿಗೆಪ್ರತಿ ಅಂಗನವಾಡಿಗೆ ಮಕ್ಕಳ ತೂಕ ಮತ್ತು ಎತ್ತರ ಪರಿಶೀಲಿಸಲು ಡಿಜಿಟಲ್‌ ಮಾಪನ ಯಂತ್ರವನ್ನು ಪೂರೈಸಲಾಗಿದೆ.

ಸ್ಮಾರ್ಟ್‌ ಫೋನ್‌ ವಿತರಣೆ : ಪೋಷಣ್‌ ಅಭಿಯಾನದಡಿ ಸ್ಮಾರ್ಟ್‌ ಫೋನ್‌ ಈಗಾಗಲೆ ವಿತರಿಸಲಾಗಿದೆ. ಸಿಮ್‌ ಕಾರ್ಡ್‌ ಕೈಸೇರಿದ್ದು, ಸ್ನೇಹ ತಂತ್ರಾಂಶವನ್ನು ಮೊಬೈಲ್‌ಗಳಿಗೆ ಅಳವಡಿಸಿ ಅದರ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಶ್ಯಾಮಲಾ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.

 

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.