ಪರಿಸರಕ್ಕೆ ಹಾನಿ: ಮುಂಬಯಿ ಮಹಾನಗರ ಪಾಲಿಕೆಗೆ 29.75 ಕೋಟಿ ರೂ. ದಂಡ: NGT
Team Udayavani, Oct 30, 2020, 6:58 PM IST
ಮುಂಬಯಿ: ನಗರದ ಒಳಚರಂಡಿಗಳನ್ನು ಸರಿಯಾಗಿ ಸಂಸ್ಕರಿಸದಿರುವುದು, ಕೊಳಚೆ ನೀರಿನಲ್ಲಿ ಘನತ್ಯಾಜ್ಯ, ಪ್ಲಾಸ್ಟಿಕ್ ಅನ್ನು ಸಮುದ್ರ, ಕೊಲ್ಲಿಯಲ್ಲಿ ಹರಿದುಬಿಡುವ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡಿದ ಕಾರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಾಮಂಡಳಿ( ಎನ್ಜಿಟಿ)ಯು ಮುಂಬಯಿ ಮಹಾನಗರ ಪಾಲಿಕೆಗೆ 29.75 ಕೋಟಿ ರೂ. ದಂಡ ವಿಧಿಸಿದೆ.
2018ರಲ್ಲಿ ವನಶಕ್ತಿ ಪರಿಸರ ಸಂಸ್ಥೆಯ ಡಿ. ಸ್ಟಾಲಿನ್ ಅವರು ಈ ನಿಟ್ಟಿನಲ್ಲಿ ಎನ್ಜಿಟಿ ಅರ್ಜಿ ಸಲ್ಲಿಸಿದ್ದರು. ನಗರದ ಕೊಳಚೆನೀರನ್ನು ಸಂಸ್ಕರಣೆ ಮಾಡದೆ ಸಮುದ್ರಕ್ಕೆ ಹೊರಬಿಡುವುದರಿಂದ ನೀರಿನ ಮಾಲಿನ್ಯ ಹೆಚ್ಚಾಗುವುದರ ಬಗ್ಗೆ ಈ ಅರ್ಜಿಯಲ್ಲಿ ಹೇಳಲಾಯಿತು. ಕಳೆದ ಎರಡು ವರ್ಷಗಳಲ್ಲಿ, ಎನ್ಜಿಪಿ ಕಾಲಕಾಲಕ್ಕೆ ವಿವಿಧ ಸಮಸ್ಯೆಗಳನ್ನು ಎತ್ತಿದ್ದು, ಇದು ವಿವಿಧ ತಜ್ಞರ ವರದಿಗಳನ್ನು ಆಧರಿಸಿದೆ.
ನಗರದ ದೈನಂದಿನ ಶೇ.25 ರಷ್ಟು ಒಳಚರಂಡಿಯ ನೀರನ್ನು ಸಂಸ್ಕರಣೆಯಿಲ್ಲದೆ ಹೊರಹಾಕಲಾಗುತ್ತಿದೆ ಎಂಬ ವಿಜೆಟಿಐ ವರದಿಯನ್ನು ಎನ್ಜಿಟಿ ಪಡೆದಿದೆ. ಮನಪಾವು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಹೊರಹಾಕುವ 85 ಸ್ಥಳಗಳಲ್ಲಿ ನೀರನ್ನು ಸರಿಯಾಗಿ ಸಂಸ್ಕರಿಸುವ ಅಗತ್ಯವನ್ನು ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಂಗಳಿಗೆ 4.25 ಕೋಟಿ ರೂ.ಗಳಂತೆ ಇದುವರೆಗೆ 29.75 ಕೋಟಿ ರೂ.ಗಳ ದಂಡವನ್ನು ಪಾವತಿಸಲು 30 ದಿನಗಳ ಅವಧಿಯನ್ನು ಸಹ ನೀಡಿದೆ.
ತ್ಯಾಜ್ಯನೀರನ್ನು ಸಂಸ್ಕರಿಸದಿರುವ ವಿಷಯದ ಜೊತೆಗೆ ಕೊಳಚೆನೀರಿನಲ್ಲಿ ಕೊಳೆಯದ ತ್ಯಾಜ್ಯ ಹೆಚ್ಚಾಗುವುದನ್ನು ಎನ್ಜಿಟಿ ಗಮನಿಸಿದೆ. ಚರಂಡಿಗಳಲ್ಲಿ ತ್ಯಾಜ್ಯ ಬೆರೆಸದಂತೆ ವಿಸರ್ಜನೆಗಳಲ್ಲಿ ಬಲೆಗಳನ್ನು ಅಳವಡಿಸಲು ಆದೇಶ ಹೊರಡಿಸಲಾಗಿದೆ. ಸಮುದ್ರದಲ್ಲಿ ಕಲುಷಿತ ನೀರನ್ನು ಬೆರೆಸಿದ್ದರಿಂದ ಮ್ಯಾಂಗ್ರೋಸ್ಗಳಿಗೂ ಹಾನಿಯಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಷ್ಟವನ್ನು ತಪ್ಪಿಸಲು ಐಐಟಿ ಮುಂಬಯಿ ಸೂಚಿಸಿದ ತಂತ್ರವನ್ನು ಬಳಸುವುದನ್ನು ಕಡ್ಡಾಯವಾಗಿದೆ ಎಂದು ಎನ್ಜಿಟಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
ಯೋಜನೆಗಳಿಗೆ ನೋಂದಣಿ ಸ್ಥಗಿತಕ್ಕೆ ಪಕ್ಷಗಳಿಗೆ ಚುನಾವಣ ಆಯೋಗ ಸೂಚನೆ
MUST WATCH
ಹೊಸ ಸೇರ್ಪಡೆ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣಸ್ವಾಮಿ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ