ಯೋಜನೆಗಳಿಗೆ ನೋಂದಣಿ ಸ್ಥಗಿತಕ್ಕೆ ಪಕ್ಷಗಳಿಗೆ ಚುನಾವಣ ಆಯೋಗ ಸೂಚನೆ
Team Udayavani, May 3, 2024, 11:05 AM IST
ಹೊಸದಿಲ್ಲಿ: ಚುನಾವಣೆಯಲ್ಲಿ ಗೆದ್ದ ಅನಂತರ ಜಾರಿಗೊಳಿಸುವುದಾಗಿ ಹೇಳುತ್ತಿರುವ ಯೋಜನೆಗಳಿಗೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು, ಚುನಾವಣೆ ಪೂರ್ವದಲ್ಲೇ ಮತದಾರರಿಂದ ಮಾಹಿತಿ ಪಡೆದು ಸರ್ವೇ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಚುನಾವಣ ಆಯೋಗ ಎಚ್ಚರಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಕೆಲವು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು, ಕಾನೂನಾತ್ಮಕ ಸಮೀಕ್ಷೆ ಮತ್ತು ಪಕ್ಷದ ಪರವಾದ ಸಮೀಕ್ಷೆ ನಡುವಿನ ವ್ಯತ್ಯಾಸವನ್ನು ಮರೆಮಾಚಿವೆ. ಚುನಾವಣೆ ಬಳಿಕ ಜಾರಿಯಾಗಲಿದೆ ಎಂದು ಹೇಳಲಾಗುವ ಯೋಜನೆಗಳಿಗೆ ಮೊದಲೇ ಜನರನ್ನು ನೋಂದಣಿ ಮಾಡಿಕೊಳ್ಳುತ್ತಿವೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಪರಾಧ. ಚುನಾವಣೋತ್ತರ ಯೋಜನೆಗಳ ಕುರಿತು ಜಾಹೀರಾತು, ಸರ್ವೇ ಅಥವಾ ಮೊಬೈಲ್ ಆ್ಯಪ್ಗಳ ಮೂಲಕ ಮತದಾರರ ಹೆಸರು ನೋಂದಾಯಿಸಿಕೊಳ್ಳುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪಕ್ಷಗಳಿಗೆ ಚುನಾವಣ ಆಯೋಗ ಎಚ್ಚರಿಕೆ ನೀಡಿದೆ.