ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡುವೆ


Team Udayavani, Nov 15, 2020, 8:16 PM IST

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡುವೆ

ಶಿರಾ: ಆಗ್ನೇಯ ಪದವೀಧರರ ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಐದು ಜಿಲ್ಲೆಗಳ ಸಾಮಾನ್ಯ ಕಾರ್ಯಕರ್ತರಿಂದ ಮೊದಲ್ಗೊಂಡು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವೈ.ಎ.ನಾರಾಯಣಸ್ವಾಮಿ ಅವರಿಗೆ ಕೃತಜ್ಞತೆಗಳು ಎಂದು ನೂತನ ಎಂಎಲ್‌ಸಿ ಚಿದಾನಂದ ಎಂ.ಗೌಡ ತಿಳಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡ ಚಿದಾನಂದ ಎಂ.ಗೌಡ, ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿಜೆಪಿ ಪಕ್ಷವೊಂದು ಅವಿಭಕ್ತ ಕುಟುಂಬದಂತೆ ಸಂಘಟಿತರಾಗಿ,ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರದಲ್ಲಿ ತೊಡಗಿಸಿ ತಮ್ಮ ಗೆಲುವಿಗೆ ಶ್ರಮಿಸಿದಎಲ್ಲರಿಗೂದೀಪಾವಳಿಹಬ್ಬದ ಶುಭಾಶಯಗಳೊಂದಿಗೆಕೃತಜ್ಞತೆ ಅರ್ಪಿಸಿದರು. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಶಿಕ್ಷಕರ, ಉಪನ್ಯಾಸಕರು ಮತ್ತಿತರೆ ಸರ್ಕಾರಿ ನೌಕರರು ಎದುರಿಸುತ್ತಿರುವ ಪದೋನ್ನತಿ, ವರ್ಗಾವಣೆ ಮೊದಲಾದ ಸಮಸ್ಯೆ, ಕೋವಿಡ್‌ ಕಾಲದಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ಕೊಡಿಸುವ ಬಗ್ಗೆಯೂ ಗಮನ ಹರಿಸುವುದು ತಮ್ಮ ಆದ್ಯತೆ. ಅದರಂತೆ ವಕೀಲರು, ವೈದ್ಯರು, ಅಭಿಯಂತರರು, ನಿರುದ್ಯೋಗಿಪದವೀಧರರು ತಮಗೆ ಮತ ಚಲಾಯಿಸಿದ್ದು, ಎಲ್ಲರನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಿ, ಅವರ ಸಮಸ್ಯೆ ಬಗೆಹರಿಸಲಿದ್ದೇನೆಂದರು.

ಅಭಿವೃದ್ಧಿ ಚಿಂತನೆ: ಹೊಸ ಶಿಕ್ಷಣ ನೀತಿಯಡಿ, ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಅತ್ಯಂತ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ತಮ್ಮ ಮುಂದಿನ 6 ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿ ಪಕ್ಷದ ಬಲವರ್ಧನೆಗೆ ಚಿಂತನೆನಡೆಸಿ, ಸ್ಥಳಿಯ ಮುಖಂಡರೊಡಗೂಡಿ ಚರ್ಚಿಸಿ,ಮುಂದಿನ 50ವರ್ಷಗಳ ಅವಧಿಯಲ್ಲಿ ಪಕ್ಷದ ಅಭಿವೃದ್ಧಿ ಬಗ್ಗೆ ಕಾರ್ಯಯೋಜನೆ ರೂಪಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದರು. ಶಿರಾ ತಾಲೂಕು ಎಂದಿಗೂ ಜಾತ್ಯತೀತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪ್ರತಿ ಪಕ್ಷದಲ್ಲೂ ಎಲ್ಲಾ ಜಾತಿಯ ನಾಯಕರು ಇದ್ದಾರೆ. ಇಲ್ಲಿ ಯಾರೋ ಹೊರಗಿನವರು ಬಂದು ಒಂದು ಜಾತಿಯನ್ನು ಓಲೈಸುವ ನಿಟ್ಟಿನಲ್ಲಿ ಮತ್ತೂಂದು ಜಾತಿಯವರನ್ನು ಎತ್ತಿಕಟ್ಟುವುದನ್ನು ವಿರೋಧಿಸುತ್ತೇನೆ ಎಂದು ಯಾರ ಹೆಸರನ್ನೂ ಉಲ್ಲೇಖೀಸದೆ ನುಡಿದರು.

ಟೋಪಿ ಹಾಕುವ ಕೆಲಸ ನಡೆದಿತ್ತು: ಪಕ್ಷದ ಜಿಲ್ಲಾ ಕಾರ್ಯದರ್ಶಿ‌ ,ಚುನಾವಣೆವೇಳೆಹೇಮಾವತಿ ನೀರ®ು° ‌ ಮದಲೂರು ಕೆರೆಗೆ ಹರಿಸುವ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ತಾವು ಅಧಿಕಾರಿಗಳು, ವಿವಿಧ ಮುಖಂಡರ ಜತೆ ಚರ್ಚೆ ನಡೆಸಿದಾಗ ಇದರ ಹಿಂದಿನ ಹುನ್ನಾರ ಅರ್ಥವಾಯಿತು. ಮದಲೂರು ಕೆರೆಗೆ ನೀರು ಹರಿಸುವುದು ಈ ಹಿಂದೆಯೂ ಸಾಧ್ಯವಿತ್ತು. ಆದರೆ, ಅದನ್ನು ಜೀವಂತವಾಗಿಟ್ಟು, ಚುನಾವಣೆ ವಸ್ತುವಾಗಿಸಿ,ಜನರಿಗೆ ಟೋಪಿ ಹಾಕುವಕೆಲಸ ಆಗುತ್ತಿತ್ತು. ಪೈಪ್‌ಲೈನ್‌ ಮೂಲಕ ನೀರು: ನೈಸರ್ಗಿಕ ಹಳ್ಳ ಹೊರತುಪಡಿಸಿ, ಬುದ್ಧಿವಂತಿಕೆಯಿಂದ, ವೈಜ್ಞಾನಿಕವಾಗಿ ಪೈಪ್‌ಲೈನ್‌ ಮೂಲಕ ನೀರು ಹರಿಸಿದರೆ ಕೆರೆಗಳು,ಪಿಕಪ್‌ಗ್ಳು ಎಲ್ಲವನ್ನೂ ತುಂಬಿಸಲು ಸಾಧ್ಯವಿದೆ. ಈಅಂಶ ನಮ್ಮ ಮುಖಂಡರಿಗೆ ಮನವರಿಕೆ ಆಗಿದೆ. ಅದರಂತೆ ಸರ್ಕಾರವೂ ನಮಗೆ ಬೆಂಬಲ ನೀಡಲಿದೆ.ಸದ್ಯದಲ್ಲೇ ಅದರಕಾರ್ಯಯೋಜನೆ ಸಾಧುವಾಗಲಿದೆ. ಈಗಿರುವಂತೆಯೇ ಪ್ರಸ್ತುತ ವರ್ಷ ಮದಲೂರು ಕೆರೆಗೆನೀರು ಹರಿಸಿ, ಮುಖ್ಯಮಂತ್ರಿಗಳೇ ಬಂದು ಪೂಜೆ ಸಲ್ಲಿಸಲಿದ್ದಾರೆ. ಮುಂದಿನ ವರ್ಷದ ಹೊತ್ತಿಗೆ, ಪೈಪ್‌ ಲೈನ್‌ ಮೂಲಕ ನೀರು ಹರಿಸುವ ಕ್ರಮ ಕೈಗೊಳ್ಳಲಾಗುವುದು. ಎರಡು ವರ್ಷಗಳಲ್ಲಿ ಭದ್ರಾ ನೀರೂ ಹರಿಯಲಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು 900ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರ ಮಂಡಲ ಅಧ್ಯಕ್ಷ ವಿಜಯರಾಜ್‌, ಸ್ನೇಕ್‌ ನಂದೀಶ್‌, ಮಾಜಿ ಅಧ್ಯಕ್ಷ ಬಸವರಾಜು, ಹೊನ್ನ ಗೊಂಡನಹಳ್ಳಿ ಚಿಕ್ಕಣ್ಣ, ಸುಬ್ರಹ್ಮಣ್ಯ, ನರಸಿಂಹೇಗೌಡ, ಶ್ರೀಧರಮೂರ್ತಿ, ಉಮೇಶ್‌, ಗಿರಿಧರ್‌, ಲಕ್ಷ್ಮೀ ನಾರಾಯಣ, ರಘು.ಪಿ, ಕಾಡಿ ದೇವರಾಜು, ಸಿ. ಕರಿಯಣ್ಣ, ಕೋಟೆ ಬಾಬು, ಬಂಬು ನಾಗರಜ್‌,ಕೋಟೆ ರಘು, ಲಿಂಗರಾಜು ಮತ್ತಿತರರಿದ್ದರು.

ಐದು ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ :  ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ಸತತ ಬರಪೀಡಿತ ಪ್ರದೇಶಗಳಾಗಿದ್ದು, ಸ್ಥಳೀಯ ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಉದ್ಯೋಗ ಸಂಪಾದನೆ ಮಾಡಿಕೊಳ್ಳಲು ಸಹಾಯವಾಗುವಂತೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ತರಬೇತಿ ಕೊಡುವ ಯೋಜನೆ ಜಾರಿಗೆ ತರಲಾಗುತ್ತದೆ. ಅಲ್ಲದೇ, ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಸ್ಥಾಪನೆಗೆಕ್ರಮಕೈಗೊಳ್ಳುವ ಯೋಜನೆ ಇದೆ ಎಂದು ನೂತನ ಎಂಎಲ್‌ಸಿ ಚಿದಾನಂದ ಎಂ.ಗೌಡ ತಿಳಿಸಿದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.