ನೀಲಗಿರಿ ಮರ ತೆರವಿಗೆ ಮೀನಮೇಷ

ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಕ್ಷೀಣ

Team Udayavani, Nov 21, 2020, 5:43 PM IST

ನೀಲಗಿರಿ ಮರ ತೆರವಿಗೆ ಮೀನಮೇಷ

ಯಲಬುರ್ಗಾ: ಅಂರ್ತಜಲಕ್ಕೆ ಕಂಟಕವಾಗಿರುವ ನೀಲಗಿರಿ ಮರಗಳ ತೆರವಿಗೆ ತಾಲೂಕಿನಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ರೈತಾಪಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆದಿದೆ. ಅದರ ಮಧ್ಯೆ ತಾಲೂಕಿನಲ್ಲಿರುವ ಕೆರೆಗಳ ದಡದಲ್ಲಿ ಸಾವಿರಾರು ನೀಲಗಿರಿ ಮರಗಳಿವೆ. ಅಂತರ್ಜಲ ಕಬಳಿಸುವ ಮರಗಳ ತೆರವಿಗೆ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಸರ ಮಾರಕ ಮತ್ತು ಅಂತರ್ಜಲವನ್ನು ಬರಿದು ಮಾಡುವ ನೀಲಗಿರಿ ಮರಗಳನ್ನು ತೆರವುಗೊಳಿಸದೇ ಇರುವುದು ಅಚ್ಚರಿ ಮತ್ತು ಆಘಾತ ಉಂಟು ಮಾಡಿದೆ.

ಅಪಾರ ಪ್ರಮಾಣದಲ್ಲಿ ನೀಲಗಿರಿ ಮರಗಳಿರುವ ಕಾರಣಕ್ಕೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆಕುಸಿದಿದೆ. ರಾಜ್ಯದಲ್ಲಿ ಹಲವು ವರ್ಷಗಳ ಹೋರಾಟದಬಳಿಕ ಪರಿಸರಕ್ಕೆ ಮಾರಕವಾಗುವ ಈ ನೀಲಗಿರಿ ಬೆಳೆಸುವುದನ್ನು ನಿಷೇಧಿ ಸಿ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನೀಲಗಿರಿ ಮರ ಯಾವುದೇ ಹಣ್ಣು ಬಿಡುವುದಿಲ್ಲ, ಪ್ರಾಣಿ, ಪಕ್ಷಿಗಳಿಗೂ ಆಸರೆ ಆಗುವುದಿಲ್ಲ, ಅದರ ಜೊತೆಗೆ ಅಂರ್ತಜಲಕ್ಕೆ ಮಾರಕವಾಗುತ್ತದೆ.ಇಂತಹ ಮರವನ್ನು ಸರಕಾರ ಸಂಪೂರ್ಣ ನಿಷೇಧ ಮಾಡಿ ಆದೇಶ ಹೊರಡಿಸಿದರೂ ಇಂದಿಗೂಆ ಮರ ನಿಷೇಧವಾಗಿಲ್ಲ.

ತಾಲೂಕಿನಲ್ಲಿ ನೀಲಗಿರಿ: ತಾಲೂಕಿನ ತಲ್ಲೂರು, ಮಲಕಸಮುದ್ರ, ಕುದರಿಮೋತಿ, ಬಳೂಟಗಿ, ಮುರಡಿ, ಬಹುತೇಕ ಕೆರೆಗಳ ಆವರಣದಲ್ಲಿ ನೀಲಗಿರಿ ಸಸಿಗಳು ಇವೆ. ಜೊತೆಗೆ ತಾಲೂಕಿನ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಸಾವಿರಾರು ನೀಲಗಿರಿ ಗಿಡಗಳಿವೆ. ಸರಕಾರಿ ಜಾಗೆಯಲ್ಲಿ ಅತ್ಯಧಿಕವಾಗಿ ಗಿಡಗಳು ಬೆಳೆದಿವೆ.

ಅಧಿಕಾರಿಗಳ ನಿರ್ಲಕ್ಷ್ಯ: ಸರಕಾರ ನೀಲಗಿರಿ ತೆರವಿಗೆಆದೇಶ ಹೊರಡಿಸಿ ಹಲವಾರು ವರ್ಷಗಳಾದರೂ ತಾಲೂಕಿನ ತಹಶೀಲ್ದಾರ್‌ ಹಾಗೂ ಸಣ್ಣನೀರಾವರಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಬಂಧಪಟ್ಟ ಅಧಿಕಾರಿಗಳು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.ತಾಲೂಕಿನಲ್ಲಿ ಅಂತರ್ಜಲ ಬಹುತೇಕವಾಗಿ ಬತ್ತಿ ಹೋಗುತ್ತಿದೆ. ಇದಕ್ಕೆ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬರುವ ನೀಲಗಿರಿಯೂ ಒಂದು ಕಾರಣ ಎಂದುಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಮಣ್ಣಿನ ಫಲವತ್ತತೆ, ಜನರ ಆರೋಗ್ಯದ ಮೇಲೆ ಪರಿಣಾಮ,ಮಳೆ, ಮೋಡವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ನೀಲಗಿರಿ, ಅಂರ್ತಜಲಕ್ಕೆ ಸಂಪೂರ್ಣ ಮಾರಕವಾಗಿದೆ. ನೀಲಗಿರಿ ಮರದ ವಿರುದ್ಧ ಅಭಿಯಾನ: ತಾಲೂಕಿನಲ್ಲಿ ನೀಲಗಿರಿ ಮರಗಳ ವಿರುದ್ಧ ಶೀಘ್ರದಲ್ಲಿ ರೈತ ಸಮೂಹ ಹಾಗೂ ಜಲತಜ್ಞರ ಸಮಿತಿವೊಂದು ಅಭಿಯಾನಹಮ್ಮಿಕೊಳ್ಳಲಾಗುತ್ತಿದೆ ಎಂದು ಜಲ ಕಾರ್ಯಕರ್ತಈರಣ್ಣ ತೋಟದ ತಿಳಿಸಿದ್ದಾರೆ. ಶೀಘ್ರದಲ್ಲಿ ಮರಗಳ ತೆರವಿಗೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸುಂದರ ಪರಿಸರ ನಿರ್ಮಾಣಕ್ಕೆ ಹಾಗೂ ರೈತರ ಹಿತ ಕಾಪಾಡಲು ಶೀಘ್ರದಲ್ಲಿ ನೀಲಗಿರಿಗಳ ತೆರವಿಗೆ ಮುಂದಾಗಬೇಕಿದೆ.

ಸಂಶೋಧನೆಯಿಂದ ಮರದ ವಿಶಿಷ್ಟತೆ ತಿಳಿದು ಬಂದಿದೆ. ಅಂತರ್ಜಲಕ್ಕೆ ನೀಲಗಿರಿ ಕಾರಣವಾಗಿವೆ. ಶೀಘ್ರದಲ್ಲಿಯೇ ತಾಲೂಕಿನಲ್ಲಿರುವ ನೀಲಗಿರಿ ತೆರವಿಗೆ ಮುಂದಾಗಿರೈತರ ಹಿತ ಕಾಪಾಡಬೇಕು. ಶೀಘ್ರದಲ್ಲಿ ತಾಲೂಕಿನಲ್ಲಿ ನೀಲಗಿರಿ ವಿರುದ್ಧ ಅಭಿಯಾನ ಆರಂಭವಾಗಲಿದೆ. –ಈರಣ್ಣ ತೋಟದ, ರೈತ

ಕಳೆದ 10 ವರ್ಷಗಳಿಂದ ನೀಲಗಿರಿ ಸಸಿಗಳನ್ನು ನೆಡಲಾಗಿಲ್ಲ, ಶೀಘ್ರದಲ್ಲೇ ನೀಲಗಿರಿಗಳನ್ನು ತೆರವುಗೊಳಿಸಲಾಗುತ್ತದೆ. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅವಶ್ಯಕವಾಗಿದೆ. –ಅಂದಪ್ಪ ಕುರಿ, ಉಪ ವಲಯ ಅರಣ್ಯಾಧಿಕಾರಿ ಯಲಬುರ್ಗಾ

 

-ಮಲ್ಲಪ್ಪ ಮಾಟರಂಗಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.