ಆಲಾಡಿ ಜಾಕ್ವೆಲ್ ಶೇ. 70 ಪೂರ್ಣ
ನಗರ ಸ್ಥಳೀಯ ಸಂಸ್ಥೆ ಸೇರಿ 25 ಗ್ರಾಮಗಳಿಗೆ ನೀರು ಪೂರೈಕೆ
Team Udayavani, Nov 28, 2020, 9:47 AM IST
ಬಂಟ್ವಾಳ, ನ. 27: ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾ ಡಳಿತ ಸಂಸ್ಥೆಗಳು ಸೇರಿದಂತೆ 25 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ಜಾಕ್ವೆಲ್ ನಿರ್ಮಾಣ ಗೊಳ್ಳುತ್ತಿದ್ದು, ಈಗಾಗಲೇ ಶೇ. 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ನೇತ್ರಾವತಿ ನದಿಯಿಂದ ನೀರನ್ನು ಮೇಲಕ್ಕೆತ್ತಿ ಬೇರೆ ಬೇರೆ ಯೋಜನೆಗಳ ಮೂಲಕ ಜನತೆಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್ಡಿಬಿ) ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಬಂಟ್ವಾಳ ಹಾಗೂ ಮಂಗಳೂರು ತಾಲೂ ಕುಗಳ ಗ್ರಾಮಗಳಿಗೆ ಯೋಜನೆಯಿಂದ ನೀರು ಪೂರೈಕೆಯಾಗಲಿದ್ದು, 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ತುಂಬೆ ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ಜಾಕ್ವೆಲ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಪೈಪ್ಲೈನ್ ಮೂಲಕ ನಿಗದಿತ ಪ್ರದೇಶಗಳಿಗೆ ನೀರು ಪೂರೈಕೆಯಾಗಲಿದೆ. ಯೋಜನೆಯ ಪ್ರಾರಂಭದಲ್ಲಿ ಸಾಕಷ್ಟು ಗೊಂದಲ, ಆರೋಪಗಳು ಕೇಳಿಬಂದಿದ್ದು, ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಯೋಜನೆ ಪೂರ್ಣ ಪ್ರಮಾಣದಲ್ಲಿ ಅನು ಷ್ಠಾನಗೊಂಡ ಬಳಿಕ ನಗರ ಸ್ಥಳೀಯಾ ಡಳಿತ ಸಂಸ್ಥೆಗಳು ಸೇರಿದಂತೆ ಸುಮಾರು 25 ಗ್ರಾಮಗಳಿಗೆ ನೇತ್ರಾವತಿ ನದಿ ನೀರು ಪೂರೈಕೆಯಾಗಲಿದೆ.
ಬಂಟ್ವಾಳದ ಗ್ರಾಮಗಳಿಗೂ ನೀರು :
ಉಳ್ಳಾಲ ನಗರಸಭೆ, ಕೋಟೆಕಾರು ಪ.ಪಂ. ಸೇರಿ ಸುಮಾರು 25 ಗ್ರಾಮಗಳಿಗೆ ಈ ಯೋಜನೆಯಿಂದ ನೀರು ಪೂರೈಕೆ ಯಾಗಲಿದ್ದು, ಬಂಟ್ವಾಳದ ಸಜೀಪ ಮುನ್ನೂರು, ಮಂಚಿ, ವೀರಕಂಭ, ಬೋಳಂತೂರು, ಸಜೀಪ ನಡು ಗ್ರಾಮ ಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪೈಪ್ಲೈನ್ ಹಾದುಹೋಗುವ ಗ್ರಾಮಗಳಿಗೂ ನೀರು ಪೂರೈಕೆಯ ಭರವಸೆ ನೀಡಿದ್ದಾರೆ ಎಂದು ಗ್ರಾ.ಪಂ.ನವರು ಹೇಳುತ್ತಾರೆ.
ಪ್ರಾರಂಭದಲ್ಲಿ ಆಕ್ಷೇಪ : ಬಂಟ್ವಾಳದ ಸಜೀಪಮುನ್ನೂರಿಂದ ನಮ್ಮ ಗ್ರಾಮಕ್ಕೆ ನೀರು ಕೊಡದೆ ಉಳ್ಳಾಲಕ್ಕೆನೀರು ಕೊಂಡುಹೋಗುತ್ತಿದ್ದಾರೆಎಂದು ಪ್ರಾರಂಭದಲ್ಲಿ ಈಯೋಜನೆಗೆ ಆಕ್ಷೇಪ ಕೇಳಿಬಂದಿತ್ತು.ಸ್ಥಳೀಯ ಸಜೀಪಮುನ್ನೂರುಗ್ರಾ.ಪಂ.ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬಳಿಕ ಬಂಟ್ವಾಳದ ಕೆಲವು ಗ್ರಾಮಗಳಿಗೆ ಯೋಜನೆಯಿಂದ ನೀರು ಲಭ್ಯವಾಗಲಿದೆ ಎಂದು ಮನದಟ್ಟಾದ ಬಳಿಕ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಿದ್ದರು.
1.98 ಕೋ.ರೂ. ಯೋಜನೆ : ಬಂಟ್ವಾಳ ಹಾಗೂ ಮಂಗಳೂರಿನ 25 ಗ್ರಾಮಗಳಿಗೆ ನೀರನ್ನು ಪೂರೈಸುವದೃಷ್ಟಿಯಿಂದ ಆಲಾಡಿಯಿಂದ ನೀರನ್ನೆತ್ತುವ ದೃಷ್ಟಿಯಿಂದ ಜಾಕ್ವೆಲ್ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 1.98 ಕೋ.ರೂ.ಗಳಲ್ಲಿಅನುಷ್ಠಾನಗೊಳ್ಳಲಿದೆ. ಈಗಾ ಗಲೇ 70ಶೇ. ಕಾಮಗಾರಿ ನಡೆದಿದ್ದು, 6 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದೆ. –ಶೋಭಾಲ, ಸಹಾಯಕ ಎಂಜಿನಿಯರ್ ಕೆಯುಡಬ್ಲ್ಯು ಎಸ್ಡಿಬಿ, ಮಂಗಳೂರು
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ