ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್
Team Udayavani, Nov 30, 2020, 11:52 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್ ಕಾಲಿಟ್ಟ ಆರಂಭದಲ್ಲಿ ಬಡರಾಷ್ಟ್ರಗಳಿಗೆ ಮಲೇರಿಯಾ ಗುಳಿಗೆ ರವಾನಿಸಿ ಭಾರತ ಮಾನವೀಯತೆ ಮೆರೆದಿತ್ತು. ಪ್ರಸ್ತುತ ಕನಿಷ್ಠ ಅಭಿವೃದ್ಧಿ ಹೊಂದಿದ ಜಗತ್ತಿನ 47 ರಾಷ್ಟ್ರಗಳಿಗೆ ಸೋಲಾರ್ ಆಧಾರಿತ, ಕೊರೊನಾ ಲಸಿಕೆ ಸಂಗ್ರಾಹಕ ಪೂರೈಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಕನಿಷ್ಠ ಅಭಿವೃದ್ಧಿ ಹೊಂದಿದ 47 ರಾಷ್ಟ್ರಗಳ 500 ಆಸ್ಪತ್ರೆಗಳಲ್ಲಿ ಇಂಥದ್ದೊಂದು ಯೋಜನೆ ರೂಪಿಸಲು ಗುರುಗ್ರಾಮದ “ಅಂತಾರಾಷ್ಟ್ರೀಯ ಸೋಲಾರ್ ಕೂಟ’ (ಐಎಸ್ಎ) ನಿರ್ಧರಿಸಿದೆ. ಪ್ಯಾರಿಸ್ ಒಪ್ಪಂದದ ಭಾಗವಾಗಿ ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ಸ್ಥಾಪಿಸಿರುವ ಈ ಕೂಟ, ಉದ್ದೇಶಿತ ಯೋಜನೆಗೆ “ಐಎಸ್ಎ ಕೇರ್’ ಎಂದು ಹೆಸರಿಟ್ಟಿದೆ. ಆಫ್ರಿಕಾದ ಬಡರಾಷ್ಟ್ರಗಳು, ದ್ವೀಪರಾಷ್ಟ್ರಗಳು ಇದರ ಪ್ರಯೋಜನ ಪಡೆಯಲಿವೆ.
ಏನಿದು ಯೋಜನೆ?: ಕೋವಿಡ್ ಲಸಿಕೆ ಸುರಕ್ಷಿತವಾಗಿ ಸಂಗ್ರಹಿಸಿಡಲು 24/7 ವಿದ್ಯುತ್ತಿನ ಅವಶ್ಯಕತೆ ಇದೆ. ಆದರೆ, ತೀವ್ರ ವಿದ್ಯುತ್ತಿನ ಕೊರತೆ ಅನುಭವಿಸುತ್ತಿರುವ ಕನಿಷ್ಠ ಅಭಿವೃದ್ಧಿ ಹೊಂದಿದ ಬಡರಾಷ್ಟ್ರಗಳಲ್ಲಿ ಇದು ನಿಜಕ್ಕೂ ಸವಾಲು. ಇಂಥ ಪ್ರದೇಶಗಳ ಪ್ರತಿ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸೋಲಾರ್ ಆಧಾರಿತ ಲಸಿಕೆ ಸಂಗ್ರಾಹಕ ಘಟಕವನ್ನು ಐಎಸ್ಎ ಸ್ಥಾಪಿಸಲಿದೆ. “ಅಗತ್ಯವಿರುವ ರಾಷ್ಟ್ರಗಳಿಗೆ ಲಸಿಕೆ ಸರಬರಾಜಿಗೆ ಅನುಕೂಲವಾಗುವಂಥ ಕೋಲ್ಡ್ ಚೈನ್ ಮತ್ತು ಸಂಗ್ರಾಹಕ ಸಾಮರ್ಥ್ಯ ವ್ಯವಸ್ಥೆ ಹೆಚ್ಚಿಸಲು ಭಾರತ ನೆರವಾಗಲಿದೆ’ ಎಂದು ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ