ಉದ್ಯಾನಗಳಲ್ಲಿ ನೂರಾರು ಹಕ್ಕಿಗಳ ಮಾರಣಹೋಮ : ಪಕ್ಷಿಪ್ರಿಯರ ಆಕ್ರೋಶ


Team Udayavani, Dec 5, 2020, 1:11 PM IST

ಉದ್ಯಾನಗಳಲ್ಲಿ ನೂರಾರು ಹಕ್ಕಿಗಳ ಮಾರಣಹೋಮ : ಪಕ್ಷಿಪ್ರಿಯರ ಆಕ್ರೋಶ

ಧಾರವಾಡ: ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಉದ್ಯಾನಗಳಲ್ಲಿ ಹಕ್ಕಿಗಳನ್ನು ಹೊಡೆದು ತಿನ್ನುವ ಸಾಂಪ್ರದಾಯಕ ಬುಡಕಟ್ಟು ಸಮುದಾಯದ ಯುವಕರ ತಂಡಗಳು ಗುಲೇಲ್‌ ಅಥವಾ ಕ್ಯಾಟಿ ಬಳಸಿ ನೂರಾರು ಹಕ್ಕಿಗಳ ಜೀವ ತೆಗೆಯುವ ಕೆಲಸ ಮಾಡುತ್ತಿವೆ ಎಂದು ಅವಳಿ ನಗರದ ಪಕ್ಷಿಪ್ರಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

20ರಿಂದ 25 ವರ್ಷದ ಒಳಗಿನ ಇಪ್ಪತ್ತಕ್ಕೂ ಹೆಚ್ಚು ಯುವಕರು ನಾಲ್ಕಾರು ತಂಡಗಳನ್ನು ಕಟ್ಟಿಕೊಂಡು, ಹಾಡುಹಗಲೇ
ಕಾರ್ಯಾಚರಣೆಗಳಿದು, ಗಿಡಗಳ ಮೇಲಿನ ಬೆಳವ, ಪಾರಿವಾಳ, ಗೊರವಂಕ, ಕೋಗಿಲೆ, ಬುಲ್‌ಬುಲ್‌, ಕೆರೆಗಳ ಆವಾರದ ನೀಲಿನಾಮಗೋಳಿ, ಬಿಳಿ ನಾಮಗೋಳಿ, ಗುಳಮುಳಕ ಇತ್ಯಾದಿ ಹಕ್ಕಿಗಳನ್ನು ಗುಲೇಲ್‌ ಅಥವಾ ಕ್ಯಾಟಿ ಬಳಸಿ ಹೊಡೆದುರುಳಿಸಿ, ಅರೆಜೀವಗೊಳಿಸಿ ತಿನ್ನಲು ಒಯ್ಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನ. 28ರಂದು ಸರೋವರನಗರದ ಕೆಎಚ್‌ಬಿ ಕಾಲೋನಿಯ ಸಾರ್ವಜನಿಕ ಉದ್ಯಾನದಲ್ಲಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ನಾಲ್ವರ ಪೈಕಿ ಇಬ್ಬರು ಯುವಕರು ಪಾರ್ಶ್ವವಾಯು ಪೀಡಿತರಿಗೆ ಉಪಚಾರಕ್ಕೆಂದು ಹಕ್ಕಿಗಳ ರಕ್ತ ಬೇಕಿತ್ತು. ಗಾಂವಟಿ ವೈದ್ಯರು ಹೇಳಿದ್ದಕ್ಕೆ ಒಯ್ಯುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರ ಕೈಯಲ್ಲಿದ್ದ ಚೀಲವೊಂದನ್ನು ಕಸಿದು ನೋಡಿದಾಗ 20ಕ್ಕೂ ಹೆಚ್ಚು ಹಕ್ಕಿಗಳನ್ನು ಹೊಡೆದುರುಳಿಸಿ ತುಂಬಿಸಿದ್ದು ಗಮನಕ್ಕೆ ಬಂದಿದೆ. 15ಕ್ಕೂ ಹೆಚ್ಚು ಹಕ್ಕಿಗಳು ಆಗಲೇ ಕೊನೆಯುಸಿರು ಎಳೆದಿದ್ದರೆ, ನಾಲ್ಕು ಹಕ್ಕಿಗಳ ಗೋಣು, ರೆಕ್ಕೆ ಮತ್ತು ಕಾಲು ಮುರಿಯಲಾಗಿತ್ತು. ಅರೆಜೀವವಾಗಿದ್ದವು. ನಾಲ್ಕು ದಿನಗಳ ಉಪಚಾರದ ಬಳಿಕ, ಒಂದು ಹೆಣ್ಣು ಕೋಗಿಲೆ ಚೇತರಿಸಿಕೊಂಡು ಹಾರಿದ್ದು, ಗಂಡು ಕೋಗಿಲೆ ಪೂರ್ಣ ಗುಣಮುಖವಾಗಿಲ್ಲ.

ಇದನ್ನೂ ಓದಿ:ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಶನ್ ಬೇಗ್ ಗೆ ಜಾಮೀನು ಮಂಜೂರು

ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನ. 30ರಂದು ವಲಯ ಅರಣ್ಯಾಧಿಕಾರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಅರಣ್ಯ ರಕ್ಷಕರನ್ನು ಬೀಟ್‌ಗೆ ನಿಯೋಜಿಸುವಂತೆ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ನಗರದ ಸಿಬಿಟಿ, ಅಕ್ಕಿಪೇಟೆಯಲ್ಲಿ ಮಾರಾಟವಾಗುವ ಹತ್ತಾರು ನಮೂನೆ ಗುಲೇಲ್‌ ಮತ್ತು ಕ್ಯಾಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪಕ್ಷಿಪ್ರಿಯರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.