ಆರೋಗ್ಯ ನಿರ್ವಹಣೆಯಲ್ಲಿ ನವಜಾತ ಶಿಶುವಿನ ಆರೈಕೆ

ಅಂತಾರಾಷ್ಟ್ರೀಯ ವೆಬಿನಾರ್‌ನಲ್ಲಿ ವಿಚಾರ ಮಂಡನೆ

Team Udayavani, Dec 5, 2020, 6:18 PM IST

Webinar

ಬೆಂಗಳೂರು: ನಗರದ ಆಚಾರ್ಯ ಮಹಾವಿದ್ಯಾಲಯದ ನಾಗರತ್ನಮ್ಮ ಕಾಲೇಜ್‌ ಆಫ್ ನರ್ಸಿಂಗ್‌ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಕೋವಿಡ್‌ 19 ಸಮಯದಲ್ಲಿ ನವಜಾತ ಶಿಶುಗಳನ್ನು ಯಾವ ರೀತಿ ಮುನ್ನೆಚ್ಚರಿಕೆ, ಜಾಗೃತಿ ಜೊತೆಗೆ ಹೃದ್ರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಹೊಸ ಕಾರ್ಯ ವಿಧಾನಗಳ ಕುರಿತು ವಿಚಾರ ಮಂಡಿಸಿದರು.

ನವಜಾತ ಮಕ್ಕಳ ಆರೈಕೆ ಮಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಮುಖ್ಯವಾಗಿ ಆಕ್ಸಿಜನ್‌ ಕೊಡುವಾಗ ಮೂಗಿನ ಮೇಲೆ ಶಿಶುಗಳಿಗೆ ಗಾಯವಾದಾಗ‌ ಅದನ್ನು ತಡೆಗಟ್ಟುವುದರಿಂದ ನೇಸಲ್‌ ಸೆಪ್ಟಮ್‌ ಬಂಡಲ್‌ನ್ನು ಉಪಯೋಗಿಸುವುದರಿಂದ ಅಂತಹ ತೊಂದರೆಗಳನ್ನು ನಿವಾರಿಸಬಹುದು ಹಾಗೂ ಕಾಂಗರೂ ಮದರ್‌ ಕೇರ್‌ ಅಂದರೆ ಶಿಶುವನ್ನು ಬೆಚ್ಚಗೆ ಇಡುವುದರಿಂದ ಶಿಶುವಿನ ಬೆಳವಣಿಗೆಗೆ ಸಹಾಯವಾಗುತ್ತದೆ ಮತ್ತು ಎನ್‌ಐಸಿಯುನಲ್ಲಿ ಬೆಳಕು ಮತ್ತು ಶಬ್ಧದ ಪ್ರಮಾಣವನ್ನು ಡಬ್ಲ್ಯುಎಚ್‌ಒ ಶಿಫಾರಸ್ಸು ಇದರ ಬಗ್ಗೆ ಓಮನ್‌ ಕೌಲ ಆಸ್ಪತ್ರೆಯ ನರ್ಸಿಂಗ್‌ ಆಡಳಿತ ಮಂಡಲಿಯ ಶ್ರೀಮತಿ ಶೂರೊಕ್ಯೂ ಮೊಹಮ್ಮದ್‌ ತಿಳಿಸಿದರು.

ಜನನ ಹಾಗೂ ಮರಣ ಪ್ರಮಾಣ: ಆಚಾರ್ಯ ನಾಗರತ್ನಮ್ಮ ಸ್ಕೂಲ್‌ ಹಾಗೂ ಕಾಲೇಜ್‌ ಆಫ್ ನರ್ಸಿಂಗ್‌ನ ಶಿಶುವೈದ್ಯ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಶ್ರೀಮತಿ ಅಂಬಾ ಇವರು ನವಜಾತ ಶಿಶುಗಳ ಜನನ ಹಾಗೂ ಮರಣಗಳ ಪ್ರಮಾಣವನ್ನು ಭಾರತದಲ್ಲಿ 34 ಮಗುವಿನ ಜನನವಾದರೆ, ಪ್ರಪಂಚದಲ್ಲಿ ಪ್ರತಿ ನಿಮಿಷಕ್ಕೆ 250 ಮಗುವಿನ ಜನನವಾಗುತ್ತದೆ. ಹಾಗೆಯೇ ಒಂದು ಗಂಟೆಗೆ 2062 ಹಾಗೂ 67385 ಒಂದು ದಿನಕ್ಕೆ ಮಕ್ಕಳ ಜನನವಾಗುತ್ತದೆ. ಪ್ರತಿ ನಿಮಿಷದಲ್ಲಿ 10 ಮಕ್ಕಳ ಮರಣ, ಪ್ರತಿ ಗಂಟೆಯಲ್ಲಿ 603 ಮಕ್ಕಳ ಮರಣ, ಪ್ರತಿದಿನ 14475 ಮರಣವನ್ನು ನಾವು ಭಾರತದಲ್ಲಿ ಕಾಣಬಹುದು. ಈ ಮರಣ ಪ್ರಮಾಣವನ್ನು ಕಡಿಮೆಮಾಡಲು ಭಾರತ ಸರಕಾರವು ಪ್ರಧಾನಮಂತ್ರಿ ಸುರಕ್ಷಿತ್‌ ಮಾತೃತಾ ಅಭಿಯಾನ್‌, ಸಿಎಸ್‌ಎಸ್‌ಎಂ, ಆರ್‌ಸಿಎಚ್‌, ಎನ್‌ಆರ್‌ಎಚ್‌ಎಂ, ಐಎನ್‌ಎಪಿ, ಎಮ್‌ಎಎ ಇವರು ತೆಗೆದುಕೊಳ್ಳುವ ಕಾರ್ಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.

ಕಡಿಮೆ ತೂಕದ ಶಿಶುವಿಗೆ ಅದರ ಬೆಳವಣಿಗೆ, ವಯಸ್ಸಿನ ಪ್ರಕಾರ ಹಾಲು ಉಣಿಸುವುದರ ಬಗ್ಗೆ ಹಾಗೂ ಯಾವ ಯಾವ ತೊಂದರೆಗಳು ಬರುವ ವಿಚಾರ, ಅದನ್ನು ನಿವಾರಣೆ ಮಾಡಲು ತಾಯಿ ಹಾಲು ಶೇಖರಣೆ ಮತ್ತು ಎಷ್ಟು ಉಷ್ಣಾಂಶದಲ್ಲಿ ಶೇಖರಣೆಯನ್ನು ಮಾಡಬೇಕು, ಎಷ್ಟು ಗಂಟೆಗಳ ಕಾಲ ಶೇಖರಿಸಬಹುದು ಎಂದು ಓಮನ್‌ ಆಸ್ಪತ್ರೆಯ ಸಂಯೋಜಕಿ ಶ್ರೀಮತಿ ಜಮೀಮ ಮೊಹಮ್ಮದ್‌ ತಿಳಿಸಿದರು.

ನವಜಾತ ಶಿಶುಗಳಲ್ಲಿ ಪ್ರಪಂಚದಲ್ಲಿ ಒಂದು ಸಾವಿರ ಮಕ್ಕಳಲ್ಲಿ 5ರಿಂದ 8 ಮಕ್ಕಳಿಗೆ ಹೃದಯ ರೋಗ ಕಾಣಿಸಿಕೊಳ್ಳುವುದು. ಅದರಲ್ಲಿ 90% ಮಕ್ಕಳು ಬೆಳೆದು ದೊಡ್ಡವರಾಗುವುದು ಹಾಗೂ ವಿಶ್ವದಾದ್ಯಂತ 2017ರಲ್ಲಿ 2,61247 ಮಕ್ಕಳ ಸಾವು ಆಗಿದೆ. ಈ ಹೃದಯ ಸಂಬಂಧಿ ರೋಗಗಳಿಗೆ ಕಾರಣ ಹಾಗೂ ಆಸ್ಪ$ತೆಗಳಲ್ಲಿ ಯಾವ ರೀತಿ ಆರೈಕೆ ಮಾಡಬೇಕು ಎಂದು ಶ್ರೀಮತಿ ಡಾ. ವಾರ್ದಾ ಅಲ್‌ ಅರ್ಮಿ ತಿಳಿಸಿಕೊಟ್ಟರು.

ರಕ್ತಹೀನತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ: ಪ್ರತಿವರ್ಷ ಪ್ರಪಂಚದಲ್ಲಿ 3ಲಕ್ಷಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ ಹಾಗೂ ಭಾರತ ದೇಶದಲ್ಲಿ 20 ಮಿಲಿಯನ್‌ ಮಕ್ಕಳು ಈ ಕಾಯಿಲೆಯಿಂದ ನರಳುತ್ತಿದ್ದಾರೆ. ಮುಖ್ಯವಾಗಿ ಕುಡಗೋಲು ಕೋಶ ಹಾಗೂ ಥಲಸ್ಸೇಮಿಯಾ ಇದರ ಗುಣಲಕ್ಷಣಗಳು, ಅದರಿಂದ ಉಂಟಾಗುವ ತೊಂದರೆ, ಆರೈಕೆ ಹಾಗೂ ಕೋವಿಡ್‌ ಪಿಡುಗಿನ ಸಮಯದಲ್ಲಿ ಶಿಶುಗಳಿಗೆ ಬಂದ ತೊಂದರೆಗಳ ಬಗ್ಗೆ ಶ್ರೀಮತಿ ಡಾ.ಲಕ್ಷ್ಮೀ ರಂಗನಾಥ್‌ ವಿವರಿಸಿದರು.

ಆಚಾರ್ಯ ಆಲೈವ್‌ ಪ್ಲಾಟ್‌ಫಾರಂನಲ್ಲಿ ಈ ಕಾರ್ಯಕ್ರಮವನ್ನು ಶ್ರೀಮತಿ ಮರ್ಸಿ ದೇವಪ್ರಿಯ ನಿರೂಪಿಸಿದರು. ಡಾ. ಟಿಎನ್‌ ಭೀಮರಾಜು ವಂದಿಸಿದರು. ಪ್ರಾಂಶುಪಾಲರಾದ ಶ್ರೀಮತಿ ದೇವಿ ನಂಜಪ್ಪನ್‌, ಕ್ಯಾಂಪಸ್‌ನ ಮುಖ್ಯಸ್ಥರಾದ ಡಾ. ಮನೀಷ್‌ ಪಾಲ್‌, ಎಚ್‌ಆರ್‌ ಮುಖ್ಯಸ್ಥರಾದ ಹರೀಶ್‌ ಕೆ.ಎಲ್‌, ಸಹ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.