“ಗ್ರೇಟ್‌ ಬ್ಯಾರಿಯರ್‌ ರೀಫ್’; ಅಚ್ಚರಿಯ ಜಗತ್ತು ಇದು…

ಸಾವಿರಾರು ಕಿ.ಮೀ ಉದ್ದದ ಈ ರಚನೆಯನ್ನು ಸೂಕ್ಷ್ಮ ಜೀವಿಗಳು ನಿರ್ಮಿಸಿದ್ದು ಎನ್ನುವುದು ಅಚ್ಚರಿಯೇ ಸರಿ

Team Udayavani, Dec 28, 2020, 5:25 PM IST

“ಗ್ರೇಟ್‌ ಬ್ಯಾರಿಯರ್‌ ರೀಫ್’; ಅಚ್ಚರಿಯ ಜಗತ್ತು ಇದು…

ಹವಳದ ದಿಬ್ಬಗಳು
“ಗ್ರೇಟ್‌ ಬ್ಯಾರಿಯರ್‌ ರೀಫ್’ ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ ಸಲುವಾಗಿ ಆ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ. ಈ ಭಾಗದಲ್ಲಿ 1,500ಕ್ಕೂ ಹೆಚ್ಚು ಮೀನಿನ ಪ್ರಭೇದಗಳಿದ್ದು, 215 ಜಾತಿಯ ಪಕ್ಷಿಗಳು ವಾಸವಾಗಿವೆ. ಈ ಎಲ್ಲ ಕಾರಣದಿಂದಲೂ ಜಗತ್ತಿನ ಏಳು ನೈಸರ್ಗಿಕ ಅದ್ಭುತಗಳಲ್ಲಿ ಬ್ಯಾರಿಯರ್‌ ರೀಫ್ಗೂ ಸ್ಥಾನ ಸಿಕ್ಕಿದೆ. ಅಲ್ಲಿನ ವೈವಿಧ್ಯಮಯ ಜೀವ ಸಂಕುಲವನ್ನು ಮನಗಂಡು 1981ರಲ್ಲಿ ಅದನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. “ಗ್ರೇಟ್‌ ಬ್ಯಾರಿಯರ್‌ ರೀಫ‌ನ್ನು’ ಬಾಹ್ಯಾಕಾಶದಿಂದಲೂ ಕಾಣಬಹುದು. ಸಾವಿರಾರು ಕಿ.ಮೀ ಉದ್ದದ ಈ ರಚನೆಯನ್ನು ಸೂಕ್ಷ್ಮ ಜೀವಿಗಳು ನಿರ್ಮಿಸಿದ್ದು ಎನ್ನುವುದು ಅಚ್ಚರಿಯೇ ಸರಿ. ಕೆಲ ನೈಸರ್ಗಿಕ ಕಾರಣಗಳು ಮತ್ತು ಮಾನವರ ದುರಾಸೆಯಿಂದಾಗಿ ಈ ಹವಳದ ದಿಬ್ಬಗಳಿಗೆ ಆಪತ್ತು ಒದಗಿದೆ.

ಗೋಡೆ ಏರುವ ಆಡು
ಸಣ್ಣಪುಟ್ಟ ಕೀಟಗಳು ಅಥವಾ ಹಾವುಗಳಂಥ ಸರೀಸೃಪಗಳು ಜಾರುವ ಅಥವಾ ಉದ್ದವಾದ ಗೋಡೆಯನ್ನು ಏರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇ ರೀತಿ ಕೆಲವು ಪ್ರಾಣಿಗಳು ಮರಗಳನ್ನು ಸಲೀಸಾಗಿ ಏರುತ್ತವೆ. ಆದರೆ ಯಾವತ್ತಾದರೂ ಆಡು ಗೋಡೆ ಹತ್ತುವುದನ್ನು ನೋಡಿದ್ದೀರಾ? ಇಟಲಿಯ ಉತ್ತರ ಭಾಗದಲ್ಲಿರುವ ಕೆಲವು ಅಣೆಕಟ್ಟುಗಳ ಬಳಿ ಆಲ್ಪೆ„ನ್‌ ಐಬೆಕ್ಸ್ ಎಂಬ ಪ್ರಭೇದಕ್ಕೆ ಸೇರಿದ ಆಡುಗಳಿವೆ. ಅವು ಸುಮಾರು 160 ಮೀ ಎತ್ತರಕ್ಕಿರುವ ತಡೆಗೋಡೆಯನ್ನು ಯಾವುದೇ ಸಹಾಯವಿಲ್ಲದೆ ಏರಬಲ್ಲವು. ಆಣೆಕಟ್ಟನ್ನು ಕಟ್ಟಿರುವ ಕಲ್ಲುಗಳಲ್ಲಿ ಸಂದುಗಳಲ್ಲಿ ಖನಿಜಯುಕ್ತ ಉಪ್ಪು, ಹುಲ್ಲುಗಳಿರುತ್ತವೆ. ಅದನ್ನು ತಿನ್ನಲು ಅವು ಆ ರೀತಿ ಹತ್ತುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಈ ಖನಿಜಯುಕ್ತ ಉಪ್ಪು ಅವುಗಳ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿರುವುದರಿಂದ ಅವುಗಳನ್ನು ಅರಸಿ ಹೊರಡುವ ಆಡುಗಳ ಗುಂಪು ಅದೆಷ್ಟೇ ದೊಡ್ಡ ಗೋಡೆಯಿದ್ದರೂ ಅದನ್ನು ಸುಲಭವಾಗಿ ಏರುತ್ತದೆ. ಅವುಗಳ ಕಾಲಿನ ಗೊರಸುಗಳಲ್ಲಿರುವ ರಬ್ಬರಿನಂತಹ ಅಂಶವು ಆಡುಗಳು ಕೆಳಕ್ಕೆ ಬೀಳದಂತೆ ತಡೆಯುತ್ತವೆ.

ಬೆಳೆಯುವ ಕಲ್ಲುಗಳು
ರಷ್ಯಾ, ರೊಮೆನಿಯಾ ಹಾಗೂ ಜೆಕ್‌ ಗಣರಾಜ್ಯಗಳಲ್ಲಿ ಕಾಣಸಿಗುವ “ಟ್ರೋವಂಟ್ಸ್‌’ ಎಂಬ ಕಲ್ಲುಗಳು ವಿಸ್ಮಯಕಾರಿಯಾಗಿವೆ. ಈ ಕಲ್ಲುಗಳ ವಿಚಿತ್ರ ಸಂಗತಿ ಏನೆಂದರೆ ಮಳೆ ಬಂದ ಕೆಲ ದಿನಗಳ ನಂತರ ಆ ನೀರನ್ನು ಹೀರಿಕೊಂಡು ಕಲ್ಲುಗಳು ಬೆಳೆಯುತ್ತಾ ಹೋಗುತ್ತವೆ ಮತ್ತು ಇನ್ನೊಂದು ಕಲ್ಲನ್ನು ಸೃಷ್ಟಿಸುತ್ತವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಮಳೆಯ ನಂತರ ಮಣ್ಣಿನೊಳಗೆ ನಡೆಯುವ ರಾಸಾಯನಿಕ ಕ್ರಿಯೆಗಳಿಂದಾಗಿ ಈ ಕಲ್ಲುಗಳು ಹೀಗೆ ಬೆಳೆಯುತ್ತವೆ ಎಂಬುದು ವಿಜ್ಞಾನಿಗಳ ಅಂಬೋಣ. ಈ ಕಲ್ಲುಗಳು ಸುಮಾರು 6 ಮಿಲಿಯನ್‌ ವರ್ಷಗಳ ಹಿಂದೆ ಉಂಟಾದ ಭೂಕಂಪದ ಪರಿಣಾಮವಾಗಿ ಹುಟ್ಟಿಕೊಂಡವು ಎನ್ನಲಾಗಿದೆ. ಇವು ಒಂದು ನಿರ್ದಿಷ್ಟ ಆಕಾರದಲ್ಲಿ ಬೆಳೆಯದೆ ಉದ್ದ, ಲಂಬ, ಓರೆ, ಸಿಲಿಂಡರ್‌ ಆಕೃತಿ, ಚೌಕಾಕೃತಿ, ಒಂದರ ಮೇಲೆ ಒಂದು ಕಲ್ಲುಗಳನ್ನು ಇಟ್ಟಂತೆ ಬೆಳೆಯುವುದು- ಇವೆಲ್ಲಾ ಮತ್ತೂಂದು ವಿಶೇಷ. ಈ ಕಲ್ಲುಗಳು ಕನಿಷ್ಟ 5 ಮೀ ನಿಂದ ಗರಿಷ್ಟ 10 ಮೀ.ವರೆಗೂ ಬೆಳೆಯುತ್ತವಂತೆ. ಸದ್ಯ ಈ ಕಲ್ಲುಗಳನ್ನು ವಿಶ್ವ ಪಾರಂಪರಿಕಾ ತಾಣವಾಗಿ ಯುನೆಸ್ಕೊ ಘೋಷಿಸಿದ್ದು ಈ ವಿಸ್ಮಯ ತಾಣಕ್ಕೆ ಪ್ರವಾಸಿಗರು ಹೇರಳವಾಗಿ ಬರುತ್ತಾರೆ.

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.