ಚುನಾವಣೆಯಲ್ಲಿ ಸೋತಿದ್ದಕ್ಕೆ 11 ರಸ್ತೆಗೆ ಕುತ್ತು
ಜೆಸಿಬಿಯಿಂದ ರಸ್ತೆ ಅಗೆಸಿ ಗ್ರಾಮಸ್ಥರಿಗೆ ತೊಂದರೆ | ವೆಂಕಟಾಚಲಪತಿಗೌಡ ವಿರುದ್ಧ ಕ್ರಮಕ್ಕೆ ಒತ್ತಾಯ
Team Udayavani, Jan 3, 2021, 1:50 PM IST
ಮುಳಬಾಗಿಲು: ಹಳ್ಳಿಫೈಟ್ ನಡೆದು ಫಲಿತಾಂಶ ಪ್ರಕಟವಾಗಿ ಗೆದ್ದವರು ಸಂಭ್ರದಲ್ಲಿದ್ದರೇ, ಸೋತವರುಆತ್ಮವಲೋಕನದಲ್ಲಿ ಮುಳುಗಿದ್ದಾರೆ. ಆದರೆಇಲ್ಲೊಬ್ಬ ಭೂಪ ಚುನಾವಣೆಯ ಸೋಲಿನಿಂದಾಗಿಗ್ರಾಮಸ್ಥರಿಗೆ ಕಾಟ ಕೊಡಲು ಶುರು ಮಾಡಿ ಗ್ರಾಮದ ರಸ್ತೆಗಳನ್ನು ಹಾಳು ಮಾಡಿದ್ದಾನೆ.
ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್ಗ್ರಾಮದಲ್ಲಿ ಎಂ.ಎಸ್.ವೆಂಕಟಾಚಲಪತಿಗೌಡಸ್ಪರ್ಧಿಸಿ ಸೋತಿದ್ದರು. ಸೋಲಿನ ಸಿಟ್ಟಿನಿಂದಗ್ರಾಮಸ್ಥರಿಗೆ ತೊಂದರೆಯುಂಟು ಮಾಡಲೆಂದುಜನಸಾಮಾನ್ಯರು ಓಡಾಡುವ ರಸ್ತೆ, ಹೊಲಗದ್ದೆ,ತೋಟಗಳು ಮತ್ತು ಸ್ಮಶಾನಕ್ಕೆ ಹೋಗುವ ರಸ್ತೆಗಳನ್ನು ಜೆಸಿಬಿಯಿಂದ ಅಗೆದು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಜೆಸಿಬಿಯಿಂದ 11 ರಸ್ತೆ ಹಾಳು: ಎಂ.ವಿ.ಶ್ರೀನಿವಾಸ ಗೌಡ, ಎಂ.ಎಸ್.ವೆಂಕಟಾಚಲಪತಿಗೌಡ, ರಾಜುಎಂ.ಎನ್, ಮಂಜುನಾಥ ಎಂಬುವವರಿಗೆತೊಂದರೆಯನ್ನುಂಟು ಮಾಡಲೆಂಬ ದುರುದ್ದೇಶ ದಿಂದ ನರೇಗಾ ಯೋಜನೇಯಡಿ ಅನುದಾನಬಿಡುಗಡೆಗೊಂಡು ಕೈಗೊಂಡಿರುವ ಕಾಮಗಾರಿ ಯಲ್ಲಿನ ಗ್ರಾಮದ ಸುತ್ತಮುತ್ತಲಿನ 11 ರಸ್ತೆಗಳನ್ನು ಜೆಸಿಬಿಯಿಂದ ಹಾಳು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ.
ಗ್ರಾಮದ ರೈತರು ಹೊಲ, ಗದ್ದೆ, ತೋಟಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು, ಕೋಳಿಫಾರಂ ನಲ್ಲಿರುವ ಕೋಳಿಗಳನ್ನು ಮಾರುಕಟ್ಟೆಗೆಸಾಗಿಸಲು ಆಗದೇ ಹಾಗೂ ಜಾನುವಾರುಗಳನ್ನುಮೇಯಿಸಲು ಹೋಗಲು ಆಗದೇ ತೊಂದರೆಯುಂಟಾಗಿದೆ. ಗ್ರಾಮದ ನಕ್ಷೆಯಲ್ಲಿರುವ ರಸ್ತೆಗಳನ್ನು ಒತ್ತುವರಿಮಾಡಿಕೊಂಡಿರುವ ರಸ್ತೆಗಳನ್ನು ತೋಟಗಳಿಗೆಹೋಗಲು ತೆರವುಗೊಳಿಸಬೇಕು ಮತ್ತು ಸರ್ಕಾರಿ ಜಮೀನಿನಲ್ಲಿರುವ ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಆರೋಪಿಗಳವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಂಡಿಕಲ್ ಗ್ರಾಮಸ್ಥರು ನಗರದ ಮಿನಿ ವಿಧಾನಸೌದದಲ್ಲಿ ತಹಶೀಲ್ದಾರ್ ರಾಜಶೇಖರ್ಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ