ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ, ನಿಫ್ಟಿ 14, 200
ನಿಫ್ಟಿ ಸೂಚ್ಯಂಕ 80.95 ಅಂಕಗಳಷ್ಟು ಏರಿಕೆಯಾಗಿದ್ದು, 14,227.20 ಅಂಕಗಳ ವಹಿವಾಟು ದಾಖಲಿಸಿದೆ.
Team Udayavani, Jan 7, 2021, 11:54 AM IST
ಮುಂಬೈ:ಜಾಗತಿಕ ಷೇರುಪೇಟೆ ಬೆಳವಣಿಗೆಗಳು ಮುಂಬೈ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಗುರುವಾರ(ಜನವರಿ 07, 2021) ಹೂಡಿಕೆದಾರರು ಆರಂಭಿಕ ವಹಿವಾಟಿನಲ್ಲಿ ಷೇರು ಖರೀದಿಗೆ ಉತ್ಸಾಹ ತೋರಿದ್ದು, ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ ಕಂಡಿದೆ.
ಹೂಡಿಕೆದಾರರ ಖರೀದಿಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳ ಷೇರು ಮಾರಾಟದಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ತಿಳಿಸಿದೆ.
ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ ಇ) 270.69 ಅಂಕಗಳಷ್ಟು ಏರಿಕೆ ಕಂಡಿದ್ದು, 48,444.75 ಅಂಕಗಳಷ್ಟು ವಹಿವಾಟು ನಡೆಸಿದೆ. ನಿಫ್ಟಿ ಸೂಚ್ಯಂಕ 80.95 ಅಂಕಗಳಷ್ಟು ಏರಿಕೆಯಾಗಿದ್ದು, 14,227.20 ಅಂಕಗಳ ವಹಿವಾಟು ದಾಖಲಿಸಿದೆ.
ಷೇರುಪೇಟೆ ಚೇತರಿಕೆಯಿಂದ ಪವರ್ ಗ್ರಿಡ್ ಶೇ.2ರಷ್ಟು ಲಾಭ ಗಳಿಸಿದೆ. ಇನ್ನುಳಿದಂತೆ ಎಸ್ ಬಿಐ, ಇಂಡಸ್ ಲ್ಯಾಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಆ್ಯಕ್ಸಿಸ್ ಬ್ಯಾಂಕ್, ಒಎನ್ ಜಿಸಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿರುವುದಾಗಿ ವರದಿ ತಿಳಿಸಿದೆ.
10 ದಿನಗಳ ಷೇರುಪೇಟೆಯ ನಾಗಾಲೋಟಕ್ಕೆ ಬುಧವಾರ ಬ್ರೇಕ್ ಬಿದ್ದಿದೆ. ಜಾಗತಿಕ ಬೆಳವಣಿಗೆಗಳು ಮುಂಬೈ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ರಿಲಯನ್ಸ್ ಇಂಡಸ್ಟ್ರೀಸ್, ಐಟಿ, ಹಣಕಾಸು, ಎಫ್ಎಂಸಿಜಿ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಬಿಎಸ್ಇ ಸೆನ್ಸೆಕ್ಸ್ 263.72 ಅಂಕಗಳ ಕುಸಿತ ದಾಖಲಿಸಿ, 48,174ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.
ಇದನ್ನೂ ಓದಿ:ಅಮೆರಿಕ ಕ್ಯಾಪಿಟಲ್ ಕಟ್ಟಡದಲ್ಲಿ ಹಿಂಸಾಚಾರ; ಟ್ರಂಪ್ ಫೇಸ್ ಬುಕ್, ಟ್ವಿಟರ್ ಖಾತೆ ಸ್ಥಗಿತ
ಮಧ್ಯಂತರ ವಹಿವಾಟಿನ ಒಂದು ಹಂತದಲ್ಲಿ ಇದು 48,616.66ಕ್ಕೆ ತಲುಪಿತ್ತು. ಇದೇ ವೇಳೆ, ನಿμr 53.25 ಅಂಕಗಳಷ್ಟು ಕುಸಿದು, 14,146ರಲ್ಲಿ ಕೊನೆಗೊಂಡಿತ್ತು. ಐಟಿಸಿ ಷೇರುಗಳು ಶೇ. 2.86ರಷ್ಟು ಭಾರೀ ನಷ್ಟ ಅನುಭವಿಸಿದರೆ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಎಚ್ಸಿಎಲ್ ಟೆಕ್ ಮತ್ತು ಎಚ್ಯುಎಲ್ ಷೇರುಗಳೂ ಕುಸಿತ ಕಂಡವು. ಇನ್ನೊಂದೆಡೆ, ಪವರ್ ಗ್ರಿಡ್, ಭಾರ್ತಿ ಏರ್ಟೆಲ್, ಒಎನ್ಜಿಸಿ, ಅಲ್ಟ್ರಾ ಟೆಕ್ ಸಿಮೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭ ಗಳಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ