ಸಿರಾಜ್ ಗೆ ಮತ್ತೆ ನಿಂದನೆ, ಪೊಲೀಸರಿಂದ ಕ್ರಮ: ಕಠಿಣ ಗುರಿ ನೀಡಿ ಆಸೀಸ್ ಡಿಕ್ಲೇರ್
Team Udayavani, Jan 10, 2021, 10:06 AM IST
ಸಿಡ್ನಿ: ಭಾರತ- ಆಸೀಸ್ ನಡುವಿನ ಸಿಡ್ನಿ ಟೆಸ್ಟ್ ನಲ್ಲಿ ಮತ್ತೆ ಜನಾಂಗೀಯ ನಿಂದನೆ ಆಪಾದನೆ ಕೇಳಿಬಂದಿದೆ. ಶನಿವಾರ ಸಿರಾಜ್ ಗೆ ನಿಂದನೆ ಮಾಡಿದ್ದ ಆಸೀಸ್ ಪ್ರೇಕ್ಷಕರು ಇಂದು ಮತ್ತೆ ನಿಂದನೆ ನಡೆಸಿದ್ದಾರೆ. ಇದರ ಮಧ್ಯೆ ಭಾರತಕ್ಕೆ ಕಠಿಣ ಗುರಿ ನೀಡಿರುವ ಆಸೀಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 94 ರನ್ ಹಿನ್ನಡೆ ಅನುಭವಿಸಿರುವ ಭಾರತ ತಂಡ ಈ ಪಂದ್ಯ ಗೆಲ್ಲಬೇಕಾದರೆ 407 ರನ್ ಗಳಿಸಬೇಕಿದೆ. ಡ್ರಾ ಮಾಡಿಕೊಳ್ಳಲು 138 ಓವರ್ ಆಡಬೇಕಿದೆ.
ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅರ್ಧಶತಕ ಸಿಡಿಸಿ ಮಿಂಚಿದರು. ಲಬುಶೇನ್ 73 ರನ್ ಗಳಿಸಿದರೆ, ಸ್ಮಿತ್ 81 ರನ್ ಗಳಿಸಿದರು. ವೇಗವಾಗಿ ಬ್ಯಾಟ್ ಬೀಸಿದ ಗ್ರೀನ್ ನಾಲ್ಕು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ನಾಯಕ ಪೇನ್ ಅಜೇಯ 39 ರನ್ ಗಳಸಿದರು. ಗ್ರೀನ್ ಔಟಾಗುತ್ತಿದ್ದಂತೆ ಆಸೀಸ್ ಡಿಕ್ಲೇರ್ ಮಾಡಿಕೊಂಡಿತು.
ಇದನ್ನೂ ಓದಿ:ಚೇತೇಶ್ವರ್ ಪೂಜಾರ ಫಿಫ್ಟಿಗೆ 174 ಎಸೆತ!
ಸೈನಿ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಪಡೆದರೆ, ಬುಮ್ರಾ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು. ಜಡೇಜಾ ಅನುಪಸ್ಥಿತಿ ಮತ್ತು ಕಳಪೆ ಫೀಲ್ಡಿಂಗ್ ಭಾರತಕ್ಕೆ ಹಿನ್ನಡೆಯಾಯಿತು.
ಮತ್ತೆ ನಿಂದನೆ: ಆಸೀಸ್ ಪ್ರೇಕ್ಷಕರು ಇಂದು ಮತ್ತೆ ತಮ್ಮ ಕೀಳು ಮನಸ್ಥಿತಿ ತೋರಿದರು. ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಗೆ ಅಶ್ಲೀಲ ಶಬ್ಧ ಬಳಕೆ ಮಾಡಿದರು. ಸಿರಾಜ್ ಕೂಡಲೇ ಅಂಪಾಯರ್ ಗಳ ಗಮನಕ್ಕೆ ತಂದರು. ನಿಂದನೆ ಮಾಡಿದ ಪ್ರೇಕ್ಷಕರ ಬಳಿಗೆ ತೆರಳಿದ ಪೊಲೀಸರು ನಾಲ್ವರು ಯುವಕರನ್ನು ಸ್ಟ್ಯಾಂಡ್ ನಿಂದ ಹೊರಕ್ಕೆ ಕಳುಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ
Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ
Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್ ಮನೆಗೆ ಕನ್ನ
Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ
Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ