ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ಧೂರಿ ಅಂಗಮಣಿ ಉತ್ಸವ
Team Udayavani, Jan 17, 2021, 12:47 PM IST
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಂಗಮಣಿ ಉತ್ಸವ ಮತ್ತು ಸಂಕ್ರಾಂತಿ ಮಹೋತ್ಸವ ವೈಭವದಿಂದ ನೆರವೇರಿತು. ಶ್ರೀದೇವಿ ಭೂದೇವಿಗೆ ತವರು ಮನೆಯಾದ ಸಜ್ಜೆಹಟ್ಟಿ ಮಂಟಪದಲ್ಲಿ ಅಂಗಮಣಿ ಉತ್ಸವ ಪ್ರಯುಕ್ತ ಮಡಿಲು ತುಂಬುವ ಸಂಪ್ರದಾಯ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಅಂಗಮಣಿ ಉತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭಾಗವಹಿಸಿದ್ದರು.
ದರ್ಶನಕ್ಕೆ ಅವಕಾಶ: ಭವ್ಯವಾಗಿ ಅಲಂಕಾರಗೊಂಡ ಚೆಲುವನಾರಾಯಣ ಸ್ವಾಮಿಯ ಅರಸಿಯರಾದ ಶ್ರೀದೇವಿ-ಭೂದೇವಿ ಅಮ್ಮನವರಿಗೆ ಅತ್ಯಮೂಲ್ಯ ಹಣ್ಣುಗಳಿಂದ ಮಡಿಲು ತುಂಬಿ ಮಹಾಮಂಗಳಾರತಿ ನೆರವೇರಿಸಲಾಯಿತು. ಕರ್ನಾಟಕದ ವಿವಿಧ
ಭಾಗಗಳಲ್ಲಿ ಬೆಳೆದ 50ಕ್ಕೂ ಹೆಚ್ಚು ರೀತಿಯ ಹಣ್ಣು ಸಂಗ್ರಹಿಸಿ, ನೂರಾರು ತಟ್ಟೆಗಳಲ್ಲಿ ಸಜ್ಜೆ ಹಟ್ಟಿ ಮಂಟಪದಲ್ಲಿ ಜೋಡಿಸಿಟ್ಟು ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ತಂಡೋಪತಂಡವಾಗಿ ಆಗಮಿಸಿದ ಭಕ್ತರು, ಸಜ್ಜೆಹಟ್ಟಿ ಮನೆ, ಕರಗಂ ಮನೆಯಲ್ಲಿರಿಸಿದ್ದ ತಟ್ಟೆಗಳ ಸೋಬಗನ್ನು ಕಣ್ತುಂಬಿಕೊಂಡರು. ದೇವಿಯರ ಅಂಗಮಣಿ ಉತ್ಸವ ಆರಂಭವಾಗಿ ತವರುಮನೆ
ಮಂಟಪಕ್ಕೆ ಭವ್ಯ ಮೆರವಣಿಗೆಯೊಂದಿಗೆ ತಲುಪಿತು.
ಇದನ್ನೂ ಓದಿ:ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್
ದೇವಿಯರನ್ನು ನಡೆಮುಡಿ ಹಾಸಿ ಬರಮಾಡಿಕೊಂಡ ನಂತರ ಅನೂಚಾನ ಸಂಪ್ರದಾಯದಂತೆ ಸಜ್ಜೆಹಟ್ಟಿ ಗುರುಗಳಾದ ತಿರುನಾರಾಯಣ ಅಯ್ಯಂಗಾರ್, ವಸಂತ ಮತ್ತು ಕರಗಂರಾಮಪ್ರಿಯ ದಂಪತಿ ದೇವಿಯರಿಗೆ ಮಡಿಲು ಶಾಸ್ತ್ರ ಪೂರೈಸಿದರು.
ದೇವಿಯರು ತವರು ಮನೆಯಿಂದ ಬರುವುದು ತಡವಾದಾಗ ಕೋಪಗೊಂಡ ಚೆಲುವರಾಯ ಕುದುರೆ ವಾಹನದಲ್ಲಿ ಹೊರನಡೆದು ಮೂರು ಮೊಲಗಳು ಅಡ್ಡಬಂದಾಗ ವಾಪಸ್ಸು ಮರಳಿದನೆಂಬ ಸಂಪ್ರದಾಯವಿದ್ದು, ದಾರಿಯ ನಡುವೆ ಮೂರು ಮೊಲಗಳನ್ನು ಸ್ವಾಮಿಯ ಉತ್ಸವಕ್ಕೆ ಅಡ್ಡಲಾಗಿ ಬಿಟ್ಟ ನಂತರ ಕುದುರೆ ವಾಹನೋತ್ಸವ ದೇವಾಲಯಕ್ಕೆ ಮತ್ತೆ ತಲುಪುವುದರೊಂದಿಗೆ ಅಂಗಮಣಿ ಉತ್ಸವ ಮುಕ್ತಾಯವಾಯಿತು.
ರಸ್ತೆ ರಿಪೇರಿ ಕಾರಣ ಆಹೋಬಲ ಮಠದ ಸಮೀಪ ಕುದುರೆ ವಾಹನೋತ್ಸವ ಮೊಟಕುಗೊಳಿಸಿ, ಎಡಗೈ ಬಲಗೈನವರಿಗೆ ವಿಶೇಷ ಪಾರಂಪರಿಕ ಮರ್ಯಾದೆ ಸಲ್ಲಿಸಲಾಯಿತು. ದೇವಿಯರಿಗೆ ಅರ್ಪಿಸಿದ ಹಣ್ಣು, ತರಕಾರಿಗಳಿಂದ ಕದಂಬ ಮತ್ತು ರಸಾಯನ ತಯಾರಿಸಿ ಶನಿವಾರ ಭಕ್ತರಿಗೆ ನೀಡಲಾಯಿತು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮಂಗಳಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ