ಕನ್ನಡ ಸಾಹಿತ್ಯಕ್ಕಿದೆ ತನ್ನದೇ ಆದ ಗಟ್ಟಿತನ
ಕುವೆಂಪು ವಿವಿ ಕುಲಪತಿ ಡಾ| ಬಿ.ಪಿ. ವೀರಭದ್ರಪ್ಪ ಅಭಿಮತ
Team Udayavani, Jan 25, 2021, 6:41 PM IST
ಭದ್ರಾವತಿ: ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಗಟ್ಟಿತನವಿದೆ. ಹಣದ ವ್ಯಾಮೋಹ ಬಿಟ್ಟು ಸಮಾಜದ ಕಲ್ಯಾಣ ಮುಖ್ಯ. ಕಲ್ಲು ದೇವರ ಹುಡುಕಿ ಹೋಗುವ ನಾವು ನಮ್ಮೊಳಗಿನ ದೇವರನ್ನು ಕಂಡಾಗ ಅಭಿವೃದ್ಧಿಯಾಗುತ್ತೇವೆ ಎಂದು ಕುವೆಂಪು ವಿವಿ ಕುಲಪತಿ ಡಾ| ಬಿ.ಪಿ.
ವೀರಭದ್ರಪ್ಪ ಹೇಳಿದರು.
ಸಿದ್ದಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಕಸಾಪ ಹಮ್ಮಿಕೊಂಡಿದ್ದ 9 ನೇ ತಾಲೂಕು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
12 ನೇ ಶತಮಾನದ ವಚನಕಾರರ ಸಾಹಿತ್ಯಗಳು ಜೀವಂತವಾಗಿವೆ. ಕನಕದಾಸ, ಪುರಂದರ ದಾಸರು ಚೈತನ್ಯವಾಗಿದ್ದಾರೆ. ಕನ್ನಡಿಗರು ಸಹೃದಯಿಗಳು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬೆಂಗಳೂರು ಎನ್ನಡವಾಗಿದೆ. ಸಾಹಿತಿ ಬೇಂದ್ರೆಯವರ ಚಿಂತನೆಯಂತೆ ಮಂಗಳೂರು, ಬೆಳಗಾವಿ, ಹೈದರಾಬಾದ್ ಸೇರಿದಂತೆ 13 ಪ್ರಾಂತ್ಯಗಳಲ್ಲಿನ ಕನ್ನಡಿಗರು ಒಂದಾಗಬೇಕೆಂದು ಮಾಡಿದ ಪ್ರಯತ್ನಗಳು ಶ್ಲಾಘನೀಯ ಎಂದರು. ಬೆಂಗಳೂರಿನ ಜನಪದ ಪರಿಷತ್ತು ಅಧ್ಯಕ್ಷ ಡಾ| ಬಾಲಾಜಿ, ಸರ್ವಾಧ್ಯಕ್ಷ ಎ.ಪಿ.ಕುಮಾರ್ ಮಾತನಾಡಿದರು. ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮೇಘರಾಜ್, ಸಿದ್ದಲಿಂಗಯ್ಯ, ಬೇಲಿಮಲ್ಲೂರ್ ನಾಗಪ್ಪ, ಡಾ| ನಾಸಿರ್ ಖಾನ್ ಮುಂತಾದವರಿದ್ದರು.
ಪ್ರಭಾಕರ ಬೀರಯ್ಯ, ಶಾಂತಿ ಸಾಮಿಲ್ ಮಾಲೀಕ ಜಿ. ಸುರೇಶ್, ಕಬಡ್ಡಿ ಕೃಷ್ಣೇಗೌಡ, ಕೆ.ಮಂಧರಕುಮಾರ್ ಹಿರಿಯೂರು ಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು. ಕತ್ತಲಗೆರೆ ತಿಮ್ಮಯ್ಯ ನಿರೂಪಿಸಿದರು. ಎಚ್.ತಿಮ್ಮಪ್ಪ ಸ್ವಾಗತಿಸಿದರು. ಕೆ. ಬಸವರಾಜಪ್ಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್