ಈ ಬಜೆಟ್‌ಗೆ ವಾಸ್ತವದ ಅರಿವೂ ಇದೆ, ವಿಕಾಸದ ವಿಶ್ವಾಸವೂ ಇದೆ : ಪ್ರಧಾನಿ ನರೇಂದ್ರ ಮೋದಿ


Team Udayavani, Feb 2, 2021, 7:05 AM IST

ಈ ಬಜೆಟ್‌ಗೆ ವಾಸ್ತವದ ಅರಿವೂ ಇದೆ, ವಿಕಾಸದ ವಿಶ್ವಾಸವೂ ಇದೆ : ಪ್ರಧಾನಿ ನರೇಂದ್ರ ಮೋದಿ

ನಮಸ್ಕಾರ…
ಅಸಾಮಾನ್ಯ ಪರಿಸ್ಥಿತಿಗಳ ನಡುವೆಯೇ 2021ರ ಬಜೆಟ್‌ ಮಂಡಿಸಲಾಗಿದೆ. ಇದರಲ್ಲಿ ವಾಸ್ತವದ ಅರಿವೂ ಇದೆ, ವಿಕಾಸದ ವಿಶ್ವಾಸವೂ ಇದೆ. ಒಂದೆಡೆ ಕೊರೊನಾ ಇಡೀ ವಿಶ್ವವನ್ನೇ, ಮಾನವಕುಲವನ್ನೇ ಅಲುಗಾಡಿಸಿಬಿಟ್ಟಿದೆ. ಇದರ ನಡುವೆಯೇ ಮಂಡಿಸಲಾಗಿರುವ ಬಜೆಟ್‌ ಭಾರತದ ಆತ್ಮವಿಶ್ವಾಸವನ್ನು ಸಾದ ರ ಪಡಿಸಲಿದೆ. ಜತೆಯಲ್ಲೇ ಪ್ರಪಂಚದಲ್ಲಿ ಒಂದು ಹೊಸ ಆತ್ಮವಿಶ್ವಾಸವನ್ನು ತುಂಬಲಿದೆ. ಇವತ್ತಿನ ಆಯವ್ಯಯದಲ್ಲಿ ಆತ್ಮನಿರ್ಭರತೆಯ ದೃಷ್ಟಿಯೂ ಇದೆ, ಮತ್ತಿದು ಎಲ್ಲಾ ನಾಗರಿಕರ ಶ್ರೇಯೋಭಿವೃದ್ಧಿಯ ಹಿತಚಿಂತನೆಯನ್ನೂ ಒಳಗೊಂಡಿದೆ.

ಬೆಳವಣಿಗೆಗಾಗಿ ಹೊಸ ದ್ವಾರಗಳನ್ನು ತೆರೆಯುವುದು, ನವ ಸಂಭಾವ್ಯತೆಗಳನ್ನು ವಿಸ್ತರಿಸುವುದು, ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಮಾನವಸಂಪ ನ್ಮೂಲಕ್ಕೆ ಹೊಸ ಆಯಾಮ ಕೊಡುವುದು, ಮೂಲಸೌಕರ್ಯ ನಿರ್ಮಾಣಕ್ಕಾಗಿ ಹೊಸ ಹೊಸ ಕ್ಷೇತ್ರಗಳನ್ನು ವಿಕಾಸಗೊಳಿ ಸುವುದು, ಆಧುನಿಕತೆಯೆಡೆಗೆ ಮುನ್ನಡೆಯುವುದು, ನವ ಸುಧಾರಣೆಗಳನ್ನು ತರುವುದು…ಇವೇ ಸಿದ್ಧಾಂತಗಳ ಆಧಾರದಲ್ಲೇ ನಾವು ಈ ಬಜೆಟ್‌ ತಂದಿದ್ದೇವೆ. ಗೆಳೆಯರೇ ಜಟಿಲ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿ ಸಾಮಾನ್ಯ ಜನರ ಜೀವನದಲ್ಲಿ ಈಸ್‌ ಆಫ್ ಲಿವಿಂಗ್‌(ಜೀವನ ಸುಲಭಗೊಳ್ಳುವುದು) ಹೆಚ್ಚಿಸಲು ಗಮನ ನೀಡಲಾಗಿದೆ. ಇಂಡಿವಿಷುವಲ್ಸ್‌ (ವ್ಯಕ್ತಿ ಗಳು), ಇನ್ವೆಸ್ಟರ್ಸ್‌(ಹೂಡಿಕೆದಾರರು),

ಇಂಡಸ್ಟ್ರಿ(ಉದ್ಯಮ) ಮತ್ತು ಇನ್‌ಫ್ರಾಸ್ಟ್ರಕ್ಚರ್‌(ಮೂಲಸೌಕರ್ಯ) ಕ್ಷೇತ್ರದಲ್ಲಿ ಬಹಳ ಸಕಾರಾತ್ಮಕ ಬದಲಾವಣೆ ತರಲಿದೆ.
ನಾನು ಇದಕ್ಕಾಗಿ ದೇಶದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ, ಅವರ ಸಹಸಚಿವರಾದ ಅನುರಾಗ್‌ ಅವರಿಗೆ ಮತ್ತು ವಿತ್ತ ಸಚಿವಾಲಯದ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ನೇಹಿತರೇ, ಒಂದು ಬಜೆಟ್‌ ಮಂಡನೆಯಾದ ಕೆಲವೇ ಗಂಟೆಗಳಲ್ಲಿ ಅದಕ್ಕೆ ಇಷ್ಟೊಂದು ಪ್ರಮಾಣದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆಯು ವುದಿದೆಯಲ್ಲ, ಅದು ಅಪರೂಪದಲ್ಲಿ ಅಪರೂಪವಾದದ್ದು. ಕೊರೊನಾದ ಈ ವೇಳೆಯಲ್ಲಿ ಅನೇಕ ಪರಿಣತರು, “”ಸರ್ಕಾರ ಸಾರ್ವಜನಿಕರ ಮೇಲಿನ ಹೊರೆ ಹೆಚ್ಚಿಸಲಿದೆ” ಎಂದೇ ಭಾವಿಸಿದ್ದರು. ಆದರೆ ಸರ್ಕಾರ ಹಣಕಾಸು ಸುಸ್ಥಿರತೆಯೆಡೆಗಿನ ತನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನ ಗಾತ್ರ ಹೆಚ್ಚಿಸಲು ಒತ್ತು ನೀಡಿತು. ಬಜೆಟ್‌ ಪಾರದರ್ಶಿ ಯಾಗಿರಬೇಕು ಎಂದು ನಮ್ಮ ಆಡಳಿತ ಬಹಳ ಶ್ರಮಪಟ್ಟಿತು. ಹೀಗಾಗೇ, ಇಂದು ಅನೇಕ ತಜ್ಞರು ಬಜೆಟ್‌ನ ಪಾರದರ್ಶಕತೆಯನ್ನು ಶ್ಲಾಘಿಸುತ್ತಿರುವುದು ನನಗೆ ಖುಷಿ ತಂದಿದೆ.

ಕೊರೊನಾ ಕಾಲದಲ್ಲಿ ಮಾಡಲಾದ ಸುಧಾರಣೆಗಳಿರಲಿ ಅಥವಾ ಆತ್ಮನಿರ್ಭರ ಭಾರತದ ಸಂಕಲ್ಪವಾಗಿರಲಿ ಸಾಂಕ್ರಾಮಿಕದ ಈ ಹೋರಾಟದಲ್ಲಿ ಭಾರತ reactive ಆಗಿರುವ ಬದಲು ಮೊದಲಿಂದಲೂ proactive ಆಗಿದೆ. ದೇಶದ ಈ proactive ಅನ್ನು ಹೆಚ್ಚಿಸುವ ನಿಟ್ಟಿನಲ್ಲೂ ಈ ಬಜೆಟ್‌ ರೂಪುಗೊಂಡಿದೆ.

ಜಾನ್‌ ಭೀ ಜಹಾಂ ಭಿ(ಜೀವವೂ ಮುಖ್ಯ ಜಗತ್ತೂ ಮುಖ್ಯ) ಎಂದ ಧ್ಯೇಯೋದ್ದೇಶದಡಿಯಲ್ಲಿ ಯಾವ ಕ್ಷೇತ್ರಗಳಲ್ಲಿ ಸಮೃದ್ಧಿ ಮತ್ತು ಸ್ವಾಸ್ಥ್ಯ ವೇಗವಾಗಿ ಬೆಳೆಯುತ್ತದೋ ಅಂಥ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ಆಯವ್ಯಯ ಗಮನ ಕೇಂದ್ರೀಕರಿಸಿದೆ. ಉದಾಹರಣೆಗೆ, ಎಂಎಸ್‌ಎಂಇ ಮತ್ತು ಮೂಲಸೌಕರ್ಯಕ್ಕೆ ವಿಶೇಷವಾಗಿ ಒತ್ತು ನೀಡಲಾಗಿದೆ. ಅದಷ್ಟೇ ಅಲ್ಲದೇ, ಈ ಬಜೆಟ್‌ ಆರೋಗ್ಯ ಕ್ಷೇತ್ರದ ಮೇಲೆ ಗಮನಹರಿಸಿರುವ ರೀತಿಯೂ ಅಭೂತಪೂರ್ವವಾದದ್ದು.

ನನಗೆ ಖುಷಿ ಆಗುತ್ತಿರುವುದೇನೆಂದರೆ, ಮುಖ್ಯವಾಗಿ ನಮ್ಮ ದಕ್ಷಿಣದ ರಾಜ್ಯಗಳು, ನಮ್ಮ ಈಶಾನ್ಯದ ರಾಜ್ಯಗಳು ಹಾಗೂ ಉತ್ತರದ ಲೇಹ್‌-ಲಡಾಖ್‌ನಂಥ ಕ್ಷೇತ್ರಗಳ ವಿಕಾಸಕ್ಕೆ ವಿಶೇಷ ಗಮನ ನೀಡಲಾಗಿರುವುದು. ಇನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಂಥ ಭಾರತದ ಕರಾವಳಿ ರಾಜ್ಯ ಗಳನ್ನು ಉದ್ಯಮ ಶಕ್ತಿಕೇಂದ್ರಗಳಾಗಿಸುವ ನಿಟ್ಟಿನಲ್ಲೂ ಬೃಹತ್‌ ಹೆಜ್ಜೆಯಿಡಲಾಗಿದೆ. ಈಶಾನ್ಯದ ರಾಜ್ಯಗಳು, ಉದಾಹರಣೆಗೆ, ಅಸ್ಸಾಂನಂಥ ರಾಜ್ಯಗಳ ಅನ್ವೇಷಿಸದ ಸಾಮರ್ಥ್ಯವನ್ನು ಗುರುತಿಸುವಲ್ಲಿ ಈ ಬಜೆಟ್‌ ಸಹಕರಿಸಲಿದೆ.

ಇನ್ನು ಸಂಶೋಧನೆ ಮತ್ತು ನಾವೀನ್ಯತಾ ವಲಯಕ್ಕೆ ಬಲ ನೀಡಲಾಗಿರುವುದರಿಂದ ನಮ್ಮ ಯುವಕರಿಗೆ ಶಕ್ತಿ ಸಿಗಲಿದೆ ಹಾಗೂ ಭಾರತವು ಉಜ್ವಲ ಭವಿಷ್ಯದತ್ತ ಬಹಳ ದೃಢವಾದ ಹೆಜ್ಜೆಯನ್ನಿಡುವಂತಾಗುತ್ತದೆ. ಗೆಳೆಯರೇ, ಸಾಮಾನ್ಯ ಜನರು, ಮಹಿಳೆಯರ ಜೀವನ ಸುಲಭಗೊಳಿಸಲು ಸ್ವಾಸ್ಥ್ಯ, ಸ್ವತ್ಛತೆ, ಪೋಷಣೆ, ಶುದ್ಧಜಲ ಹಾಗೂ ಸಮಾನ ಅವಕಾಶಗಳ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆಬಲ ನೀಡಲು, ರೈತರ ಆದಾಯ ಹೆಚ್ಚಿಸಲು ಈ ಬಜೆಟ್‌ನಲ್ಲಿ ಬಹಳ ಅವಕಾಶ ನೀಡ ಲಾಗಿದೆ. ಮುಖ್ಯವಾಗಿ ದೇಶದ ಮಾರುಕಟ್ಟೆಗಳನ್ನು ಅಂದರೆ ಎಪಿಎಂಸಿಯನ್ನು ಮತ್ತಷ್ಟು ಸಶಕ್ತಗೊಳಿಸಲು ಅಗ್ರಿಕಲ್ಚರ್‌ ಇನಾ#†ಸ್ಟ್ರಕ್ಚರ್‌ ಫ‌ಂಡ್‌ನಿಂದ ಸಹಾಯ ಘೋಷಿಸಲಾಗಿದೆ.

ಈ ಎಲ್ಲಾ ನಿರ್ಣಯಗಳೂ ಬಜೆಟ್‌ನ ಹೃದಯದಲ್ಲಿ ನಮ್ಮ ಗ್ರಾಮಗಳಿವೆ, ನಮ್ಮ ರೈತರಿದ್ದಾರೆ ಎಂದು ತೋರಿಸುತ್ತದೆ. ಸೂಕ್ಷ್ಮ, ಸಣ್ಣ, ಮಧ್ಯಮ ಸ್ತರದ ಕೈಗಾರಿಕೆಗಳಿಗೆ ವೇಗ ನೀಡಲು, ಎಂಎಸ್‌ಎಂಇ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಈ ಬಾರಿ ಈ ಕ್ಷೇತ್ರದ ಬಜೆಟ್‌ ಅನ್ನು ಕಳೆದಬಾರಿಗಿಂತ ಎರಡುಪಟ್ಟು ಹೆಚ್ಚಿಸಿದ್ದೇವೆ. ಈ ದಶಕದ ಆರಂಭಕ್ಕೆ ಒಂದು ಬಲಿಷ್ಠ ಬುನಾದಿ ಹಾಕುವಂಥ ಬಜೆಟ್‌ ಇದು. ಆತ್ಮನಿರ್ಭರ ಭಾರತದ ದಾರಿಯಲ್ಲಿ ದೇಶವನ್ನು ಕೊಂಡೊಯ್ಯಲಿರುವ ಈ ಮಹತ್ವಪೂರ್ಣ ಬಜೆಟ್‌ಗಾಗಿ ನಾನು ಎಲ್ಲಾ ದೇಶವಾಸಿಗಳಿಗೂ ಅಭಿನಂದಿಸುತ್ತೇನೆ. ಧನ್ಯವಾದ.

– ನರೇಂದ್ರ ಮೋದಿ , ಪ್ರಧಾನಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.