ಕಡಲೆಗೆ ಕುಂಕುಮ ರೋಗ
ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ! ಸಿಗುತ್ತಿಲ್ಲ ಬೆಳೆಗೆ ಉತ್ತಮ ಬೆಲೆ
Team Udayavani, Feb 7, 2021, 6:25 PM IST
ಲಕ್ಷ್ಮೇಶ್ವರ: ಹಿಂಗಾರಿನ ವಾಣಿಜ್ಯ ಬೆಳೆ ಕಡಲೆ ಕೊಯ್ಲಿನ ಹಂತದಲ್ಲಿರುವಾಗ ತೀವೃಗತಿಯಲ್ಲಿ ಕುಂಕುಮ ರೋಗಬಾಧೆ ಆವರಿಸಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
ಮುಂಗಾರಿನಲ್ಲಿ ಹೆಚ್ಚು ತೇವಾಂಶದಿಂದ ರೈತರು ಬೆಳೆಹಾನಿ ಅನುಭವಿಸಿದ್ದಾರೆ. ಹಿಂಗಾರಿನಲ್ಲಿ ಹವಾಮಾನ ವೈಪರಿತ್ಯ, ಅಕಾಲಿಕ ಮಳೆ, ಕೀಟಬಾಧೆ ಮತ್ತು ಭೂಮಿಯಲ್ಲಿನ ಸೂಕ್ಷ್ಮಾಣು ಜೀವಿಗಳಿಂದ ಹಿಂಗಾರು ಬೆಳೆಗಳು ರೋಗಬಾಧೆಗೆ ತುತ್ತಾಗುತ್ತಿದ್ದು, ರೈತ ಸಮುದಾಯದ ಸಂಕಷ್ಟ ತಪ್ಪದಂತಾಗಿದೆ.
ಅಕಾಲಿಕ ಮಳೆಗೆ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಲಕ್ಷೆ ¾àಶ್ವರ ತಾಲೂಕಿನಾದ್ಯಂತ ಒಟ್ಟು 26,750 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿನ ಬೆಳೆ ಬಿತ್ತನೆಯಾಗಿದ್ದು, ಅದರಲ್ಲಿ 11,700 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 9,750 ಹೆಕ್ಟೇರ್ ಜಮೀನನಲ್ಲಿ ಕಡಲೆ ಬಿತ್ತನೆಯಾಗಿದೆ.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಗೊಜನೂರ, ಅಡರಕಟ್ಟಿ, ದೊಡೂxರ, ಶಿಗ್ಲಿ, ಅಡರಕಟ್ಟಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ ಜಮೀನುಗಳಲ್ಲಿ ಕಡಲೆ ಬೆಳೆಯಲಾಗಿದೆ.
ಇದನ್ನೂ ಓದಿ :ರೈತರ ಹಿತ ಕಾಪಾಡುವಲ್ಲಿ ಶಾಸಕರು ವಿಫಲ: ಶ್ರೀನಿವಾಸ್
ಪ್ರಾರಂಭದಲ್ಲಿ ಕಡಲೆ ಬೆಳೆ ಕೀಟಬಾಧೆ, ಸಿಡಿ ರೋಗಕ್ಕೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಇರಲಿಲ್ಲ. ಸಂಪೂರ್ಣ ಕಾಯಿ ಬಿಟ್ಟು ಈ ತಿಂಗಳಾಂತ್ಯದಲ್ಲಿ ಕೊಯ್ಲಿಗೆ ಬರುವ ಹಂತದಲ್ಲಿರುವ ಬೆಳೆಗೆ ಇಷ್ಟು ವರ್ಷಗಳಲ್ಲಿ ಕಾಣದ ಕೆಂಪು(ಕುಂಕುಮ) ರೋಗ ಆವರಿಸಿದೆ. ಸಂಪೂರ್ಣ ಬೆಳೆಗೆ ಕೆಂಪು ಬಣ್ಣ, ಕುಂಕುಮ ಪುಡಿ ಎರಚಿದಂತಾಗಿದೆ. ಜಮೀನಿನಲ್ಲಿ ಸಂಚರಿಸಿದರೆ ಕೆಂಪುಪುಡಿ ಮೆತ್ತುತ್ತದೆ. ಇದು ಕೇವಲ ಗಿಡಕ್ಕೆ ಆವರಿಸಿಕೊಳ್ಳದೇ ಕಾಳಿನ ಬೆಳವಣಿಗೆ ಕುಂಠಿತವಾಗಿ ಕಾಳೂ ಕಪ್ಪುಗಟ್ಟುತ್ತದೆ. ಈ ಬೆಳೆ ಒಕ್ಕಲಿ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೇಳಿದ ಬೆಲೆಗೆ ಮಾರಾಟ ಮಾಡಿ ಮತ್ತಷ್ಟು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್