ಸಂಕಲ್ಪದ ಹೆಗಲೇರಿ ಮುನ್ನಡೆಸುವ ಶರಣಾಗತಿ


Team Udayavani, Feb 13, 2021, 6:45 AM IST

Untitled-1

ಸಾಂದರ್ಭಿಕ ಚಿತ್ರ

ಸಾಧನೆಗೆ ಒಂದೇ ಮಾರ್ಗ. “ಶರಣಾ ಗತಿ’ ಮತ್ತು “ದೃಢ ಸಂಕಲ್ಪ’ಗಳಿಂದ ಆ ದಾರಿಯನ್ನು ತುಳಿಯಬಹುದು.

ಮೇಲ್ನೋಟಕ್ಕೆ “ಶರಣಾಗತಿ’ ಮತ್ತು “ದೃಢಸಂಕಲ್ಪ’ ತದ್ವಿರುದ್ಧ ಎಂಬಂತೆ ಭಾಸವಾಗುತ್ತವೆ. ಆದರೆ ನಿಜಕ್ಕೂ ಅವು ಒಂದಕ್ಕೊಂದು ಪೂರಕ.

ದೃಢ ಸಂಕಲ್ಪವನ್ನು ಹೊಂದಿರುವಾತ ಮಾತ್ರ ಸಂಪೂರ್ಣವಾಗಿ ಶರಣಾಗಬಲ್ಲ. ಏಕೆಂದರೆ, ಶರಣಾಗತಿಗೆ ಅಸಾಧಾರಣ ವಾದ ಧೈರ್ಯ ಬೇಕು. ದುರ್ಬಲರು ಎಂದಿಗೂ ತಲೆಬಾಗುವ ಆಲೋಚನೆ ಮಾಡಲಾರರು. ಧೈರ್ಯ ಶಾಲಿಗಳು ಮಾತ್ರ ಶರಣಾಗತಿಯನ್ನು ಆರಿಸಿ ಕೊಳ್ಳುತ್ತಾರೆ. ತನ್ನತನ, ತಾನು, ತನ್ನ ಅಹಮಿಕೆ ಯನ್ನು ಕೂಡ ತಲೆ ಬಾಗುವಂತೆ ಮಾಡು ವುದಕ್ಕೆ ಬೇಕಾಗುವ ಧೈರ್ಯ ಕಡಿಮೆಯದಲ್ಲ.

ಶರಣಾಗುವುದಕ್ಕೆ ದೃಢಸಂಕಲ್ಪ ಕೂಡ ಬೇಕಾಗಿದೆ. ದೃಢಸಂಕಲ್ಪ ಇಲ್ಲವಾದರೆ  ನಾವು ಯಾರಿಗೂ ತಲೆಬಾಗೆವು.

ಆದರೆ ಕೇವಲ ದೃಢಸಂಕಲ್ಪ ಹೆಚ್ಚು ಪ್ರಯೋಜನಕ್ಕೆ ಬರಲಾರದು. ದೃಢ ಸಂಕಲ್ಪ ಮಾತ್ರವೇ ಇದ್ದರೆ ಅದು ಅಹಮಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ನಾವು ನಡೆಯುವ ಸಾಧ ನೆಯ ಹಾದಿಯಿಂದ ವಿಮುಖವಾಗ ಬಲ್ಲೆವು. ದೃಢಸಂಕಲ್ಪದ ಕೈಗೆ ಕೀಲಿಕೈ ಕೊಡುವುದು ಅಪಾಯಕಾರಿ. ಶರಣಾ ಗತಿಯ ಸೇವಕನಂತೆ ದೃಢಸಂಕಲ್ಪ ಇದ್ದರೆ ಅದಕ್ಕಿಂತ ಚೆನ್ನಾದುದು ಇನ್ನೊಂದಿಲ್ಲ. ಶರಣಾಗತಿಗೆ ಸಹಾಯಕನಾಗಿ ದೃಢ ಸಂಕಲ್ಪವನ್ನು ನಿಯೋಜಿಸಿದರೆ ಸರಿ ಯಾದ ದಾರಿಯಲ್ಲಿ ಸಾಗಬಹುದು. ಅವು ಎರಡಾಗಿ ತೋರುತ್ತವೆ; ಆದರೆ ಒಂದಕ್ಕೊಂದು ಅತ್ಯದ್ಭುತವಾಗಿ ಸಹಾಯ ಮಾಡುತ್ತವೆ.

ಈ ಕಥೆಯನ್ನು ನೀವು ಕೇಳಿರ ಬಹುದು. ಮೇಲೆ ವಿವರಿಸಿದ ಹಿನ್ನೆಲೆಯ ಸಹಿತ ಇನ್ನೊಮ್ಮೆ ಓದಿಕೊಳ್ಳಿ – ಹೊಸ ಅರ್ಥದಲ್ಲಿ ಕಥೆ ಹೊಳೆಯುತ್ತದೆ.

ಒಂದು ಊರಿನ ಬದಿಯಲ್ಲಿ ಒಂದು ದಟ್ಟಾರಣ್ಯ ಇತ್ತು. ಊರಿನಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ ಇಬ್ಬರು ಭಿಕ್ಷುಕರು ವಾಸ ಮಾಡುತ್ತಿದ್ದದ್ದು ಆ ಕಾಡಿನಲ್ಲಿ. ಒಂದೇ ವೃತ್ತಿಯಲ್ಲಿದ್ದ ಆ ಇಬ್ಬರಲ್ಲಿ ಪರಸ್ಪರ ಸ್ಪರ್ಧೆ, ಈಷ್ಯೆì, ಕೋಪತಾಪಗಳು ಸಾಮಾನ್ಯವಾಗಿದ್ದವು. ಇಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ.

ವಿಚಿತ್ರ ಎಂದರೆ, ಆ ಭಿಕ್ಷುಕರಲ್ಲಿ ಒಬ್ಬ ಹೆಳವ. ಇನ್ನೊಬ್ಬ ಅಂಧ.

ಹೀಗಿರಲಾಗಿ ಒಂದು ಬೇಸಗೆಯ ದಿನ ಆ ಭಿಕ್ಷುಕರು ವಾಸವಾಗಿದ್ದ ಕಾಡಿಗೆ ಬೆಂಕಿ ಬಿತ್ತು. ನೋಡ ನೋಡುತ್ತಿರು ವಂತೆಯೇ ಕಾಳಿYಚ್ಚು ನಾಲೆªಸೆಗೆ ಹಬ್ಬಿತು. ಸ್ವಲ್ಪ ಸಮಯ ಹೋದರೆ ಭಿಕ್ಷುಕರನ್ನೂ ಬೆಂಕಿ ಸ್ವಾಹಾ ಮಾಡು ವುದು ಖಚಿತ.

ಹೆಳವನಿಗೆ ಓಡಿ ಪಾರಾಗುವುದು ಸಾಧ್ಯವಿಲ್ಲ. ಅಂಧ ಓಡಬಲ್ಲ; ಆದರೆ ಕಣ್ಣು ಕಾಣಿಸುವುದಿಲ್ಲವಲ್ಲ! ಹೀಗಾಗಿ ಇಬ್ಬರೂ ಸುಟ್ಟುಹೋಗುವ ಸ್ಥಿತಿ.

ಬೆಂಕಿ ಹತ್ತಿರಕ್ಕೆ ಬಂತು ಎನ್ನುವ ಹೊತ್ತಿಗೆ ಅವರಿಬ್ಬರೂ ರಾಜಿಯಾದರು. “ನಮ್ಮ ನಡುವಿನ ಅಭಿಪ್ರಾಯ ಭೇದ ಗಳನ್ನು ಮರೆತು ಜತೆಗೂಡುವ ಸಮಯ ಇದು’ ಎಂದ ಕುರುಡ. “ನಿಜ’ ಎಂದ ಹೆಳವ. “ಬಾ ನನ್ನ ಹೆಗಲ ಮೇಲೆ ಕುಳಿ ತುಕೋ. ನೀನು ದಾರಿ ಹೇಳು, ನಾನು ಓಡುತ್ತೇನೆ. ಇಬ್ಬರೂ ಸೇರಿ ಪಾರಾ ಗೋಣ’ ಎಂದ ಅಂಧ.

ಹೀಗೆ ಅವರಿಬ್ಬರೂ ಓಡಿಹೋಗಿ ಜೀವ ಉಳಿಸಿಕೊಂಡರು. ಸಂಕಲ್ಪ ಮತ್ತು ಶರಣಾಗತಿಯ ಸ್ಥಿತಿಯೂ ಇದೇ. ಸಂಕಲ್ಪವು ಕುರುಡು, ಆದರೆ ವೇಗವಾಗಿ ಕ್ರಮಿಸಬಲ್ಲುದು. ಶರಣಾಗತಿಗೆ ದರ್ಶಿಸುವ ಶಕ್ತಿಯಿದೆ, ಆದರೆ ನಿರ್ವೇಗಿ. ಸಂಕಲ್ಪ ಮತ್ತು ಶರಣಾಗತಿಗಳ ನಡುವೆ ಸ್ನೇಹವನ್ನು ಬೆಸೆಯುವುದು ನಮಗೆ ಸಾಧ್ಯವಾದರೆ; ನಮ್ಮ ಸಂಕಲ್ಪ ಶಕ್ತಿಯ ಹೆಗಲ ಮೇಲೆ ಶರಣಾಗತಿಯು ಕುಳಿತು ಮುನ್ನಡೆಸು ವುದು ಸಾಧ್ಯವಾದರೆ ನಮ್ಮ ಬದುಕಿನ ಅತ್ಯಂತ ಶ್ರೇಷ್ಠವಾದ ಸಾಧನೆಗಳಲ್ಲಿ ಒಂದು ಆದಂತೆ. ಆಗ ಸಾಧನೆಯ ಹಾದಿಯನ್ನು ಕ್ರಮಿಸುವುದು ಸುಲಭ ವಾಗುತ್ತದೆ, ಗುರಿ ಹತ್ತಿರವಾಗುತ್ತದೆ.

( ಸಾರ ಸಂಗ್ರಹ)

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.