ಬರದ ನಾಡಿನಲ್ಲೊಬ್ಬಳು ‘ಭಗೀರಥೆ’…ಜಲಕ್ರಾಂತಿಗೆ ಸಾಕ್ಷಿಯಾದಳು 19 ವರ್ಷದ ತರುಣೆ  


Team Udayavani, Feb 20, 2021, 8:55 PM IST

Babita r

ಮಧ್ಯಪ್ರದೇಶ : ಗಂಗೆಯನ್ನು ಭೂಮಿಗೆ ಕರೆತಂದ ಭಗೀರಥನಂತೆ ಬುಂದೇಲ್‌ಖಂಡ್ ನ ಬಬಿತಾ ರಜಪೂತ್ ಬರದಿಂದ ನಲಗುತ್ತಿದ್ದ ತನ್ನೂರಿನಲ್ಲಿ ಜಲಕ್ರಾಂತಿ ಮಾಡಿದ್ದಾರೆ.

ಮಧ್ಯಪ್ರದೇಶದ ಆಗ್ರೋಥ ಗ್ರಾಮದಲ್ಲಿ ಮೊದಲಿಂದಲೂ ಜೀವಜಲಕ್ಕೆ ಪರಿತಪಿಸುವ ಪರಿಸ್ಥಿತಿ ಇತ್ತು. ವರ್ಷದಲ್ಲಿ ಎರಡ್ಮೂರು ಸಾರಿ ಬೀಳುವ ಮಳೆ ನೀರು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ವರ್ಷಕ್ಕೆ ಒಂದು ಬೆಳೆ ಬೆಳಯಲು ಹರಸಾಹಸ ಪಡುವ ದುಸ್ಥಿತಿ ಈ ಗ್ರಾಮಕ್ಕೆ ಬಂದೋದಗಿತ್ತು. ಬೇಸಿಗೆ ಕಾಲದಲ್ಲಿ ದೂರದ ಊರಿಂದ ನೀರು ತರಲು ಮಕ್ಕಳು ಶಾಲೆಯನ್ನೇ ಬಿಡಬೇಕಾಗುತ್ತಿತ್ತು.

ಆಗ್ರೋಥ ಗ್ರಾಮದಲ್ಲಿ 70 ಎಕರೆ ವಿಸ್ತೀರ್ಣದ ಕೆರೆಯಿದ್ದರೂ ನೀರಿಲ್ಲದೆ ಬರಿದಾಗಿತ್ತು. ಮಳೆಯಿಂದ ಸಂಗ್ರಹವಾಗುವ ಅಲ್ಪ ಪ್ರಮಾಣದ ನೀರು ಗ್ರಾಮಸ್ಥರಿಗೆ ಸಾಕಾಗುತ್ತಿರಲಿಲ್ಲ. 2018 ರಲ್ಲಂತೂ ಈ ಗ್ರಾಮಕ್ಕೆ ಮಳೆರಾಯನ ದರುಶನ ಅಪರೂಪವಾಗಿತ್ತು. ಕೇವಲ ಎರಡು ಬಾರಿ ಮಾತ್ರ ಮಳೆ ಸುರಿಯಿತು. ಈ ನೀರು ಕೂಡ ಹರಿದು ಪೊಲಾಯಿತು.

ಜಲಕ್ರಾಂತಿಗೆ ಪಣ ತೊಟ್ಟ ಬಬಿತಾ :

ಡಿಗ್ರಿ ಮುಗಿಸಿರುವ ಬಬಿತಾ ತಮ್ಮ ಗ್ರಾಮದ ನೀರಿನ ಸಮಸ್ಯೆ ಹೋಗಲಾಡಿಸಲು ಪಣ ತೊಡುತ್ತಾಳೆ. ಬೆಟ್ಟದಿಂದ ಹರಿದು ಪೊಲಾಗುವ ನೀರನ್ನು ಕೆರೆಗೆ ತರಲು ಯೋಜನೆ ರೂಪಿಸುತ್ತಾಳೆ. ಇದಕ್ಕಾಗಿ ಕಾಲುವೆ ತೋಡಬೇಕಾಗುತ್ತದೆ. ಕೆರೆಯ ಸುತ್ತಮುತ್ತಲಿನ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದರಿಂದ ಇದಕ್ಕೆ ಅನುಮತಿ ದೊರೆಯುವುದಿಲ್ಲ. ಆದರೆ, ಅಧಿಕಾರಿಗಳಿಗೆ ತನ್ನೂರಿನ ಪರಿಸ್ಥಿತಿ ತಿಳಿ ಹೇಳಿ ಕಾಲುವೆ ನಿರ್ಮಿಸಲು ಅನುಮತಿ ಪಡೆಯುತ್ತಾಳೆ ಈ ಗಟ್ಟಿ ಗಿತ್ತಿ.

 

ಬರದ ನಾಡಿನಲ್ಲೊಬ್ಬಳು ‘ಭಗೀರಥೆ’…ಜಲಕ್ರಾಂತಿಗೆ ಸಾಕ್ಷಿಯಾದಳು 19 ವರ್ಷದ ತರುಣೆ  

7 ತಿಂಗಳ ಕಾಲ ಪ್ರರಿಶ್ರಮ :

ಮಳೆಯ ನೀರನ್ನು ಕೆರೆಗೆ ತರಲು ಮುಂದಾದ ಬಬಿತಾ, ತಾನೇ ಕಾಲುವೆ ನಿರ್ಮಿಸಲು ಪಿಕಾಸಿ ಹಿಡಿದು ಮುಂದಾಗುತ್ತಾಳೆ. ಇವಳಿಗೆ ಊರಿನ 200 ಮಹಿಳೆಯರು ಕೈ ಜೋಡಿಸುತ್ತಾರೆ. 7 ತಿಂಗಳಿನಲ್ಲಿ ಕಾಲುವೆ ಸಿದ್ಧವಾಗುತ್ತೆ. ಈ ಸಾಹಸಿಯರ ಬೆವರು ಹನಿಯ ಪ್ರತೀಕವಾಗಿ ಕಳೆದ ಒಂದು ವರ್ಷದಿಂದ ಊರಿನ ಕೆರೆ ತುಂಬಿ ತುಳುಕುತ್ತಿದೆ.

ತುಂಬಿತು ಕೆರೆ, ನೀಗಿತು ಬರದ ಹೊರೆ :     

ಮನಸಿದ್ದರೆ ಮಾರ್ಗ ಎಂಬುವುದಕ್ಕೆ ಈ ಊರಿನ ಬಬಿತಾ ಸಾಕ್ಷಿಯಾಗಿದ್ದಾರೆ. ಇವರು ಮಾಡಿರುವ ಜಲಕ್ರಾಂತಿಗೆ ಊರಿನ ಸಮಸ್ಯೆ ದೂರವಾಗಿದೆ. ಬರದಿಂದ ನಲುಗುತ್ತಿದ್ದ ಆಗ್ರೋಥ ಗ್ರಾಮದಲ್ಲಿ ನೀರಿನ ಸಮಸ್ಯೆ ನೀಗಿದೆ. ಮಳೆಯ ನೀರು ನೇರವಾಗಿ ಕೆರೆಗೆ ಹರಿದು ಬರುತ್ತಿದೆ. ಪರಿಣಾಮ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ ಇಲ್ಲಿಯ ರೈತರು.

2020ರಲ್ಲಿಯೂ ಕಡಿಮೆ ಮಳೆಯಾಯಿತು. ಆದರೂ 10 ಬಾವಿ, 5 ಬೋರ್ ವೆಲ್ ಗಳು ನೀರು ಚಿಮ್ಮುತ್ತಿವೆ. ನನ್ನ 12 ಎಕರೆ ಜಮೀನು ಈಗ ನೀರಾವರಿಯಾಗಿದೆ ಎನ್ನುತ್ತಾರೆ ಈ ಗ್ರಾಮದ ರೈತ ರಾಮರತನ್ ರಜಪೂತ್.

ಟಾಪ್ ನ್ಯೂಸ್

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.