Gujarat ನಿಂದ ಅಯೋಧ್ಯೆಗೆ ಬಂತು 500 ಕೆಜಿ ತೂಕದ ಚಿನ್ನ, ಬೆಳ್ಳಿ ಲೇಪಿತ ನಗಾರಿ…
Team Udayavani, Jan 12, 2024, 10:39 AM IST
ಗುಜರಾತ್: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕುರಿತು ದೇಶಾದ್ಯಂತ ರಾಮಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ದೇಶದ ಮೂಲೆ ಮೂಲೆಯಿಂದ ಭಕ್ತರು ದೇವಸ್ಥಾನಕ್ಕೆ ವಿಶಿಷ್ಟ ರೀತಿಯಲ್ಲಿ ವಸ್ತುಗಳನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದಾರೆ ಅದೇ ರೀತಿ ಗುಜರಾತ್ ನಿಂದಲೂ ಓರ್ವ ಭಕ್ತರು ದೇವಸ್ಥಾನಕ್ಕೆ ಭಾರಿ ಗಾತ್ರದ ನಗಾರಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.
ಇದರ ತೂಕವೇ ಬರೋಬ್ಬರಿ ಐನೂರು ಕೆಜಿ ಇದ್ದು ವಿಶೇಷ ಮೆರವಣಿಗೆ ಮೂಲಕ ಗುರುವಾರ ಅಯೋಧ್ಯೆಯನ್ನು ತಲುಪಿದೆ.
ಚಿನ್ನ ಮತ್ತು ಬೆಳ್ಳಿ ಲೇಪಿತ:
ಗುಜರಾತ್ನ ಅಹಮದಾಬಾದ್ನಿಂದ ಈ ನಗಾರಿಯನ್ನು ಮೆರವಣಿಗೆ ಮೂಲಕ ಅಯೋಧ್ಯೆಗೆ ತರಲಾಗಿದೆ. ಸುಮಾರು ಐನೂರು ಕೆಜಿ ತೂಕ ಇರುವ ನಗಾರಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಲೇಪಿಸಲಾಗಿದೆ. ರಚನೆಯಲ್ಲಿ ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಸಹ ಬಳಸಲಾಗಿದೆ. ಈ ನಗಾರಿಯನ್ನು ದಬ್ಗರ್ ಸಮುದಾಯದ ಜನರೇ ತಯಾರಿಸಿದ್ದಾರೆ. ಇದರ ಸದ್ದು ಕೆಲ ಕಿಲೋಮೀಟರ್ ದೂರದವರೆಗೆ ಕೇಳಲಿದೆಯಂತೆ. ಹಿಂದೂ ಸಂಸ್ಕೃತಿಯ ಪ್ರತೀಕವಾದ ಈ ಬೃಹತ್ ನಗಾರಿಯನ್ನು ರಾಮಮಂದಿರದಲ್ಲಿ ಸ್ಥಾಪಿಸಲು ಕರ್ಣಾವತಿ ಮಹಾನಗರದ ದರ್ಯಾಪುರದಲ್ಲಿ ನಿರ್ಮಿಸಲಾಗಿದೆ. ಗುಜರಾತ್ ವಿಶ್ವ ಹಿಂದೂ ಪರಿಷತ್ತಿನ ಪ್ರದೇಶ ಸಚಿವ ಅಶೋಕ್ ರಾವಲ್ ಅವರು ನಗಾರಿಯನ್ನು ಸ್ವೀಕರಿಸಲು ಶಿಫಾರಸು ಮಾಡಿ ಪತ್ರವನ್ನು ಕಳುಹಿಸಿದ್ದಾರೆ. ಅದರಂತೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ನಗಾರಿಯನ್ನು ಸ್ವೀಕರಿಸಿ ರಾಮಮಂದಿರದ ಸೂಕ್ತವಾದ ಸ್ಥಳದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
#WATCH | Uttar Pradesh | A ‘nagada’, decorated with Gold foil, brought to Ayodhya ahead of the ‘pranpratishtha’ of the Ram Temple.
Shri Ram Janmabhoomi Teerth Kshetra General Secretary Champat Rai says, “We will see where it can be installed on the temple premises.” pic.twitter.com/2dGopz1hck
— ANI (@ANI) January 11, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
MUST WATCH
ಹೊಸ ಸೇರ್ಪಡೆ
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!