ರಾಷ್ಟ್ರ ಜಾಗೃತಿಗೆ ರಾಮಮಂದಿರ ಕಟ್ಟಿದ ದೇವರಹುಬ್ಬಳ್ಳಿ ಹಳ್ಳಿಗರು

ರಾಮಮಂದಿರ ಆಂದೋಲನದ ಸಂದರ್ಭ ಹುಟ್ಟಿದ ರಾಷ್ಟ್ರಭಕ್ತಿಯ ತಾಣ

Team Udayavani, Jan 14, 2024, 6:10 AM IST

1-wewewq

ಧಾರವಾಡ: ರಾಮಮಂದಿರ ನಿರ್ಮಾಣಕ್ಕೆ ಇಲ್ಲಿಂದಲೇ ಸಂಕಲ್ಪ ಮಾಡಿದ್ದರು ಈ ಹಳ್ಳಿ ಗರು. ಕರ ಸೇವೆಗೂ ಕೈ ಮೇಲೆತ್ತಿದ್ದು ಇದೇ ಗ್ರಾಮದ ಯುವ ಕರ ಪಡೆ. ಮಂದಿರ ನಿರ್ಮಾಣಕ್ಕೆ ಈ ಹಳ್ಳಿಗರು ಕೊಟ್ಟಿದ್ದು ಲಕ್ಷ ಲಕ್ಷ ರೂ. ಕಾಣಿಕೆ. ಹೀಗಾಗಿಯೇ ಇಲ್ಲಿವೆ ರಾಮ ಮಂದಿರದ ಚೈತನ್ಯ ಯಾತ್ರೆಯ ಶ್ರೀರಾಮನ ಪರಿವಾರದ ಮೂರ್ತಿಗಳು. ಅಷ್ಟೇಯಲ್ಲ, ಇದು ಬರೀ ರಾಮ ಮಂದಿ ರವಲ್ಲ, ರಾಷ್ಟ್ರ ಭಕ್ತಿ ಜಾಗೃತಿ ಮಾಡುವ ಭಾರತ ಮಾತಾ ಮಂದಿರ.

ಹೌದು. ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮ 1990ರ ದಶಕದಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿತ್ತು. ಹೀಗಾಗಿ ಇಲ್ಲಿ ಶ್ರೀರಾಮ, ಸೀತಾ, ಹನು ಮಾನ ಮತ್ತು ಭಾರತ ಮಾತೆಯ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಭಾರತ ಮಾತಾ ಮಂದಿರವು ಕಳೆದ 35 ವರ್ಷಗಳಿಂದ ಈ ಭಾಗದ ಜನರಲ್ಲಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಬೆಳೆಸುವ ಜತೆಗೆ ಯುವಕರಿಗೆ ಉತ್ತಮ ಸಂಸ್ಕಾರ ನೀಡುವ ಕೇಂದ್ರವಾಗಿ ರೂಪುಗೊಂಡಿದೆ.

1980ರ ದಶಕದಲ್ಲಿ ದೇಶದ ತುಂಬಾ ರಾಮ ಜನ್ಮಭೂಮಿ ವಿವಾದದ ತಾರಕ ಕೇರಿತ್ತು. ದೇಶದ ವಿವಿಧ ಭಾಗಗಳಲ್ಲಿ ಶ್ರೀರಾಮನ ಪಾದುಕೆಗಳು, ಮೂರ್ತಿ, ರಾಮನ ಚರಿತ್ರೆ ಮೆರವಣಿಗೆ ಮತ್ತು ಜಾಗೃತಿ ಆಂದೋಲನಗಳು ನಡೆದವು. ಇಂಥ ಸಂದರ್ಭದಲ್ಲಿ, ಅಯೋಧ್ಯೆ ಯಿಂದ ಶ್ರೀರಾಮ, ಸೀತೆ ಮತ್ತು ಹನುಮಾನ ದೇವರ ಮೂರ್ತಿಗಳನ್ನು ಜಾಗೃತಿ ರಥಯಾತ್ರೆಯಲ್ಲಿ ಮೆರವಣಿಗೆ ಮಾಡಿ ಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲಾಯಿತು. ಈ ಕೊನೆಗೆ ಇಲ್ಲಿ ಪ್ರತಿಷ್ಠಾಪನೆಯಾಗಿವೆ.

ರಾಷ್ಟ್ರ ಹೋರಾಟಗಳ ವೇದಿಕೆ: 1990ರ ದಶಕದಲ್ಲಿ ರಾಮಜನ್ಮಭೂಮಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಾಗ ಸುತ್ತಲಿನ ಗ್ರಾಮಗಳ ತರುಣರು ಇಲ್ಲಿ ಸೇರಿ ಹೋರಾ ಟದಲ್ಲಿ ಧುಮುಕಿದ್ದರು. ಅಯೋಧ್ಯೆಯಲ್ಲಿ ನಡೆದ ಕರಸೇವೆ ಅಷ್ಟೆಯಲ್ಲ, ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹೋರಾಟ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನಕ್ಕೂ ದೇವರಹುಬ್ಬಳ್ಳಿಯ ಈ ಭಾರತ ಮಾತಾ ಮಂದಿರ ವೇದಿಕೆಯಾಗಿತ್ತು.

ಏನಿದು ಭಾರತಮಾತಾ ಮಂದಿರ?
ಭಾರತ ಮಾತೆಗೆ ಮಂದಿರ ಕಟ್ಟಿ, ದಿನವೂ ಅವಳನ್ನು ಪೂಜಿ ಸುವ ಸಂಸ್ಕೃತಿಗೆ ನಾಂದಿ ಹಾಡಿದ ಸ್ಥಳ ದೇವರ ಹುಬ್ಬಳ್ಳಿ. 1989ರಲ್ಲಿ ಈ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಯಾದಾಗಿನಿಂದ ಈವರೆಗೂ ಗ್ರಾಮದ ಯುವಕರು ಹಬ್ಬ ಹರಿದಿನ ಆಚರಣೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ತರುಣರು ಇಲ್ಲಿ ಸೇರಿ ದೇಶದ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಮಹಾನವಮಿಯಲ್ಲಿ ದೇವಿ ಪಾರಾಯಣ ನಡೆದರೆ, ಗ್ರಾಮದ ಯುವತಿಯರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಇಲ್ಲಿ ಪಾಠಗಳು ನಡೆಯುತ್ತವೆ. ಅಷ್ಟೇಯಲ್ಲ, ಹಳ್ಳಿಗರ ಆರೋಗ್ಯ ಶಿಬಿರಗಳಿಗೂ, ತಾಯಂದಿರಿಗೆ ಶಿಶುಪಾಲನೆಯ ಪಾಠ, ನವವಧುವರರಿಗೆ ಬದುಕಿನ ಪಾಠಕ್ಕೂ ಈ ಮಂದಿರವೇ ವೇದಿಕೆಯಾಗಿದೆ.

ಶ್ರೀ ಸಿದ್ದಶಿವ ಯೋಗಿಗಳ ನೇತೃತ್ವ
ಗ್ರಾಮದ ಯುವಕರಲ್ಲಿ ರಾಷ್ಟ್ರಾಭಿಮಾನ ಮತ್ತು ಬದುಕಿನ ಸಂಸ್ಕಾರ ನೀಡಿದ್ದು ದೇವರ ಹುಬ್ಬಳ್ಳಿಯ ಸಿದ್ದಾಶ್ರಮದ ಶ್ರೀ ಸಿದ್ದಶಿವಯೋಗಿ ಸ್ವಾಮೀಜಿ ಅವರು. ಪ್ರತೀ ವರ್ಷ ರಾಮನವಮಿಯಲ್ಲಿ ರಾಮಾಯಣ ಹೇಳುವುದಷ್ಟೇ ಅಲ್ಲ, ವರ್ಷ ಪೂರ್ತಿಯಾಗಿ ಸುತ್ತಮುತ್ತಲಿನ ಗ್ರಾಮ ಗಳಿಂದ ಬರುವ ಆಧ್ಯಾತ್ಮಿಕ ಮನಸ್ಸುಗಳಿಗೆ ರಾಮಚರಿತ ಮಾನಸದಂತಹ ಚರಿತ್ರೆಯನ್ನು ಹೇಳುತ್ತ ಬಂದಿದ್ದಾರೆ.

ನಮ್ಮ ಭಾಗ್ಯ
ತರುಣರಲ್ಲಿ ದೇಶಪ್ರೇಮ ಮೂಡಿಸಲು ಗ್ರಾಮಸ್ಥರೇ ಒಗ್ಗಟ್ಟಾಗಿ ಕಲ್ಲುಮಣ್ಣು, ಕಟ್ಟಿಗೆ ತಂದು ತಾವೇ ಇಟ್ಟಿಗೆ ಇಟ್ಟು ಕಟ್ಟಿದ ಮಂದಿರವಿದು. ನಾವೆಲ್ಲ ಅದರ ಸಂಸ್ಕಾರದಲ್ಲೇ ಬೆಳೆದು ಬಂದಿದ್ದೇವೆ. ಊರಿಗೊಂದು ಭಾರತ ಮಾತಾ ಮಂದಿರ ಅಗತ್ಯ.
ಶ್ರೀ ಮುಕ್ತಾನಂದ ಸ್ವಾಮೀಜಿ, ಸಿಂಧೋಗಿ ಮಠ.

ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.