ಇಂದೇ ಶ್ರೀರಾಮಾವತರಣ; ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ
ಬ್ರಾಹ್ಮೀ ಮುಹೂರ್ತದಿಂದ ವಿಧಿವಿಧಾನ ಆರಂಭ; ಮೋದಿ ಸೇರಿ ಐವರ ಉಪಸ್ಥಿತಿ
Team Udayavani, Jan 22, 2024, 7:00 AM IST
ಅಯೋಧ್ಯೆ: ಹಲವು ಶತಮಾನಗಳ ಕಾಯುವಿಕೆ, ತಪಸ್ಸಿಗೆ ಸೋಮವಾರ ಫಲ ಸಿಗಲಿದೆ. ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರುವುದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ 7 ಸಾವಿರ ಅತಿಥಿಗಳು ಈ ದಿವ್ಯ ಘಳಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.
ಸೋಮವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12.20ರಿಂದ 12.45ರ ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ ಮುಖ್ಯಹಂತಕ್ಕೆ ತಲುಪಲಿದೆ. ಈ ವೇಳೆ ಪ್ರಧಾನಿ ಮೋದಿ ಬಾಲರಾಮನ ವಿಗ್ರಹಕ್ಕೆ ನೇತ್ರೋನ್ಮಿಲನ (ಕಣ್ಣು ತೆರೆಸುವ ಕ್ರಿಯೆ) ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಅವರೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಪ್ರಧಾನ ಅರ್ಚಕರು ಮಾತ್ರ ಗರ್ಭಗುಡಿಯಲ್ಲಿ ಇರಲಿದ್ದಾರೆ.
-ಸೋಮವಾರ ಬ್ರಾಹ್ಮಿ ಮುಹೂರ್ತದಿಂದಲೇ ಕಾರ್ಯಕ್ರಮಗಳು ಆರಂಭ
-ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಧಾರ್ಮಿಕ ಕ್ರಿಯೆಯಾಗಿ ವಿಗ್ರಹ ಶುದ್ಧೀಕರಣ ಪ್ರಕ್ರಿಯೆಗಳು.
-ಪ್ರಧಾನ ಪುರೋಹಿತರಿಂದ ವಿಗ್ರಹಕ್ಕೆ ಶ್ರೀರಾಮನ ಚೈತನ್ಯ ತುಂಬುವ ಕ್ರಿಯೆ ಆರಂಭ.
-ಬೆಳಗ್ಗೆ 10ರಿಂದಲೇ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳ ವಾದ್ಯಗಳ ನಿನಾದ ಆರಂಭ
-ಮಧ್ಯಾಹ್ನ 12-20ರಿಂದ 12-45ರವರೆಗೆ ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಮುಖ್ಯಹಂತ.
-ನೇತ್ರೋನ್ಮಿಲನ ಆರಂಭ. ಮಂತ್ರೋಚ್ಚಾರಣೆ ಸಹಿತ ಕಾಡಿಗೆ ಬಳಿದು, ಚಿನ್ನದ ಸೂಜಿಯಿಂದ ಕಣ್ಣುಗಳನ್ನು ತೆರೆಸುವ ವಿಧಿ.
-ಕನ್ನಡಿಯನ್ನು ವಿಗ್ರಹಕ್ಕೆ ಅಭಿಮುಖವಾಗಿ ಹಿಡಿದು, ಮೊದಲ ಬಾರಿ ದೇವತೆಯ ಪೂರ್ಣದರ್ಶನ.
-ಪ್ರಾಣ ಪ್ರತಿಷ್ಠಾಪನಾ ಅನಂತರದ ಪೂಜಾ ವಿಧಿಗಳ ಆರಂಭ.
-ಉದ್ಘಾಟನೆಯ ಬಳಿಕ ಸೇನಾ ಹೆಲಿಕಾಪ್ಟರ್ನಿಂದ ಮಂದಿರಕ್ಕೆ ಪುಷ್ಪವೃಷ್ಟಿ.
07 ದಿನಗಳು
05ಪ್ರಮುಖರು
24 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ