ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 9 ಚಿತ್ರಗಳು ತೆರೆಗೆ 


Team Udayavani, Dec 16, 2022, 8:51 AM IST

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 9 ಚಿತ್ರಗಳು ತೆರೆಗೆ 

ಸ್ಯಾಂಡಲ್‌ವುಡ್‌ನಲ್ಲಿ ಈ ವಾರ 9 ಚಿತ್ರಗಳು ಬಿಡುಗಡೆಆಗುತ್ತಿವೆ. ಆ ಚಿತ್ರಗಳ ಕುರಿತು ಒಂದು ಕಿರುನೋಟ..

ಟೆಂಪರ್‌

ಟೆಂಪರ್‌ ಎಂಬ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಮಂಜುಕವಿ ಟೆಂಪರ್‌ ಚಿತ್ರದ ನಿರ್ದೇಶಕರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್‌ ಲವ್‌ ಸ್ಟೋರಿ ಒಳಗೊಂಡ “ಟೆಂಪರ್‌’ ಚಿತ್ರವನ್ನು ಶ್ರೀಬಾಲಾಜಿ ಎಂಟರ್‌ ಪ್ರೈಸಸ್‌ ಬ್ಯಾನರ್‌ನಡಿ ಮೋಹನ್‌ ಬಾಬು ಬಿ. ಹಾಗೂ ವಿ. ವಿನೋದ್‌ ಕುಮಾರ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಆರ್ಯನ್‌ ಸೂರ್ಯ ಹಾಗೂ ಕಾಶಿಮಾ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದು, ಧನು ಯಲಗಚ್‌ ಹಾಗೂ ಮಜಾಟಾಕೀಸ್‌ ಪವನ್‌ ಕುಮಾರ್‌ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್‌ ಕೃಷ್ಣ, ಊರಗೌಡನಾಗಿ ಬಲ ರಾಜವಾಡಿ, ಯತಿರಾಜ್‌ ನಂದಿನಿ ವಿಠಲ, ಪ್ರಿಯ ತರುಣ್‌, ಸನತ್‌ ವಿನೋದ್‌ ಮಿಥಾಲಿ ಶಶಿ ಹಾಗೂ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಾಕ್ಷಸರು

ಸಾಯಿಕುಮಾರ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಕ್ಷಸರು’ ಚಿತ್ರ ತೆರೆಗೆ ಬರುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ “ರಾಕ್ಷಸರು’ ಸಿನಿಮಾವನ್ನು “ಗರುಡಾದ್ರಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ರಮೇಶ್‌ ಕಶ್ಯಪ್‌ ನಿರ್ಮಾಣ ಮಾಡಿರುವ “ರಾಕ್ಷಸರು’ ಸಿನಿಮಾಕ್ಕೆ ರಜತ್‌ ನಿರ್ದೇಶನವಿದೆ. ಐವರು ಕ್ರಿಮಿನಲ್‌ಗ‌ಳು ಕ್ರೈಂ ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಸಿನಿಮಾದ ಕಥೆಯ ಒಂದು ಎಳೆ. ಪೊಲೀಸರ ಸಾಹಸಗಾಥೆ ಈ ಸಿನಿಮಾದಲ್ಲಿದೆ ಎಂಬುದು ತಂಡದ ಮಾತು

ಶಂಭೋ ಶಿವ ಶಂಕರ

ಅಘನ್ಯ ಪಿಕ್ಚರ್ ಮೂಲಕ ವರ್ತೂರು ಮಂಜು ಈ ಚಿತ್ರವನ್ನು ನಿರ್ಮಿಸುತ್ತಿರುವ “ಶಂಭೋ ಶಿವ ಶಂಕರ’ ಚಿತ್ರವನ್ನು ಶಂಕರ್‌ ಕೋನಮಾನಹಳ್ಳಿ ನಿರ್ದೇಶಿಸಿ ದ್ದಾರೆ. ಈ ಚಿತ್ರದಲ್ಲಿ ಅಭಯ್‌ ಪುನೀತ್‌ ನಾಯಕರಾಗಿ ನಟಿಸಿದ್ದಾರೆ. ಇವರಿಗೆ ಸೋನಾಲ್‌ ಮೊಂತೆರೋ ನಾಯಕಿ. ಇದು ಮೂವರು ಹುಡುಗರ ಸುತ್ತ ನಡೆಯುವ ಕಥೆ. ನಾಯಕ ಹಾಗೂ ಆತನ ಇಬ್ಬರು ಸ್ನೇಹಿತರ ಸುತ್ತ ನಡೆಯುವ ಕಥೆಯಾಗಿದ್ದು, ಆ ಮೂವರು ಹುಡುಗರ ಹೆಸರನ್ನೇ ಚಿತ್ರದ ಟೈಟಲ್‌ ಆಗಿ ಇಡಲಾಗಿದೆ. ನಾಯಕ ಅಭಯ್‌ ಜೊತೆ ರೋಹಿತ್‌ ಹಾಗೂ ರಕ್ಷಕ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಲಿಪ್‌ಸ್ಟಿಕ್‌ ಮರ್ಡರ್‌

“ಲಿಪ್‌ಸ್ಟಿಕ್‌ ಮರ್ಡರ್‌’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇಂದು ಬಿಡುಗಡೆಯಾಗುತ್ತಿದೆ. ಕ್ರೈಮ್‌ ಥ್ರಿಲ್ಲರ್‌ ಕಥಾಹಂದರವೊಂದಿರುವ ಈ ಚಿತ್ರವನ್ನು ರಾಜೇಶ್‌ ಮೂರ್ತಿ ನಿರ್ದೇಶಿಸಿದ್ದಾರೆ. ಬಿ.ಎಸ್‌. ಮಂಜುನಾಥ್‌ ಹಾಗೂ ರಾಜೇಶ್‌ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ ಮೂಲಕ ಯುವಕರು ಯಾವ ರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳಲಾಗಿದೆಯಂತೆ. ಈ ಚಿತ್ರದ ಕಥೆಯಲ್ಲಿ ಡೇಟಿಂಗ್‌ ಆ್ಯಪ್‌ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್‌ ಆಗುವ ಕಥೆಯಿದೆ. ಚಿತ್ರದಲ್ಲಿ ಆರ್ಯನ್‌ ರಾಜ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್‌ ಮಿಶ್ರಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಟೆನ್‌

ವಿನಯ್‌ ರಾಜ್‌ಕುಮಾರ್‌ ನಟನೆಯ “ಟೆನ್‌’ ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದೆ. ಈ ಚಿತ್ರವನ್ನು ಕರಮ್‌ ಚಾವ್ಲಾ ನಿರ್ದೇಶಿಸಿದ್ದು, ಪುಷ್ಕರ್‌ ನಿರ್ಮಿಸಿದ್ದಾರೆ. ಅನುಷಾ ಈ ಚಿತ್ರದ ನಾಯಕಿ. ಚಿತ್ರದಲ್ಲಿ ವಿನಯ್‌ ಬಾಕ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮೊದಲ ಮಿಡಿತ

ಹರಿಚೇತ್‌ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ, ನಿಮೀಶ್‌ ಸಾಗರ್‌, ರಶ್ಮಿರಾ ರೋಜಾ ಅಭಿನಯದ “ಮೊದಲ ಮಿಡಿತ’ ಚಿತ್ರ ಇಂದು ತೆರೆಕಾಣುತ್ತಿದೆ. “ಚಿತ್ರದಲ್ಲಿ ನಾಲ್ಕು ಫೈಟ್‌, ನಾಲ್ಕು ಹಾಡುಗಳಿದ್ದು, ಮನ ಮಿಡಿಯುವ ಪ್ರೇಮಕಥೆ, ತಂದೆ ಮಗನ ಬಾಂಧ್ಯವ್ಯ, ತಾಯಿ ಮಗನ ಮಮಕಾರ, ಹಾಸ್ಯದ ಸಿಂಚನ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಿದೆ’ ಎನ್ನುವುದು ನಿರ್ದೇಶಕರು ಮಾತು. ನಾಯಕ ನಿಮೀಶ್‌ ಸಾಗರ್‌, ರಾಹುಲ್‌ ಎಂಬ ಶ್ರೀಮಂತ ಮನೆತನದ ಹುಡುಗನಾಗಿ ನಟಿಸಿದ್ದಾರಂತೆ. ಚಿತ್ರವನ್ನು ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್‌ ನಿರ್ಮಿಸಿದ್ದಾರೆ.

ನೇಗಿಲ ಒಡೆಯ

“ಸೂರ್ಯೋದಯ ಮೂವೀಸ್‌’ ಲಾಂಛನದಲ್ಲಿ ನಾಗಳ್ಳಿ ಅನಂತ ರತ್ನಮ್ಮ ನಿರ್ಮಿಸಿರುವ “ನೇಗಿಲ ಒಡೆಯ’ ಚಿತ್ರ ತೆರೆಕಾಣುತ್ತಿದೆ. ಸಾಮಾನ್ಯ ರೈತನೊಬ್ಬ ವಿಶ್ವಮಟ್ಟದಲ್ಲಿ ಸಾಧನೆ ಮಾಡುವ, ಲವ್‌ ಕಂ ಸೆಂಟಿಮೆಂಟ್‌ ಜೊತೆಗೆ ರೈತಪರ ಮತ್ತು ವಿದ್ಯಾರ್ಥಿಗಳಿಗೆ ಸಂದೇಶವಿರುವ ಈ ಚಿತ್ರವನ್ನು ಎನ್‌. ಕೃಷ್ಣ ಮೋಹನ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

“ನೇಗಿಲ ಒಡೆಯ’ ಸಿನಿಮಾದ ಹಾಡುಗಳಿಗೆ ವಿಕ್ಟರಿ ಡ್ಯಾನಿಯಲ್‌ ಸಂಗೀತ ಸಂಯೋಜನೆಯಿದೆ. ಹಾಡುಗಳಿಗೆ ಹೇಮಂತರಾಜು, ಮಂಜು, ಸಿ. ಎನ್‌ ಮೂರ್ತಿ ಸಾಹಿತ್ಯ ಒದಗಿಸಿದ್ದಾರೆ. ನಿತಿನ್‌ ರಾಜ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಎಸ್‌.ಬಾಲು ಛಾಯಾಗ್ರಹಣ, ಅನಿಲ್‌ ಚಿನ್ನು ಸಂಕಲನವಿದೆ. ಇದರ ಜೊತೆಗೆ “ಯು ಟರ್ನ್ 2′ ಹಾಗೂ “ನಿಂಗ’ ಚಿತ್ರಗಳು ಕೂಡಾ ಈ ವಾರ ತೆರೆಕಾಣುತ್ತಿವೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.