ಆ ಒಂದು ನೋಟು ಚಿತ್ರದಲ್ಲಿ ಬೇಂದ್ರೆ ಹಾಡು


Team Udayavani, Jan 31, 2019, 6:51 AM IST

aa-notu.jpg

ಕನ್ನಡದ ಅನೇಕ ಕವಿಗಳ ಕವನಗಳು ಭಾವಗೀತೆಗಳಾಗಿವೆ, ಚಲನಚಿತ್ರಗಳಲ್ಲೂ ಬಳಕೆಯಾಗಿವೆ. ಹಾಗೆ ನೋಡಿದರೆ, ವರಕವಿ ದ.ರಾ.ಬೇಂದ್ರೆ ಅವರ ‘ನೀ ಹಿಂಗ ನೋಡ ಬ್ಯಾಡ ನನ್ನ…’, ‘ಇಳಿದು ಬಾ ತಾಯೇ ಇಳಿದು ಬಾ..’ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು…’ ಎಂಬ ಗೀತೆಗಳು ಹಲವು ಚಿತ್ರಗಳಲ್ಲಿ ಬಳಕೆಯಾಗಿ ಸಾಕಷ್ಟು ಜನಪ್ರಿಯತೆಗೊಂಡಿವೆ.

ಈಗ ಅವರ ಮತ್ತೂಂದು ಹಾಡನ್ನು ಹೊಸಬರ ‘ಆ ಒಂದು ನೋಟು’ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‘ಕುರುಡು ಕಾಂಚಾಣ..’ ಎಂಬ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದನ್ನು ಜ.31 (ಇಂದು) ದ.ರಾ.ಬೇಂದ್ರೆ ಅವರ 122 ನೇ ಜನ್ಮದಿನದ ಅಂಗವಾಗಿ ಚಿತ್ರತಂಡ ಮರುಸೃಷ್ಟಿಸಿರುವ ‘ಕುರುಡು ಕಾಂಚಾಣ..’ ಗೀತೆಯ ಲಿರಿಕಲ್‌ ವಿಡಿಯೋವನ್ನು ಲಹರಿ ಆಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

1932 ರಲ್ಲಿ ‘ನಾದಲೀಲೆ’ ಕವನಸಂಕಲನದಲ್ಲಿ ಪ್ರಕಟಗೊಂಡ ಈ ಕವನ ನಂತರದ ದಿನಗಳಲ್ಲಿ ಸಿ.ಅಶ್ವತ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಹೊರಬಂದಿತ್ತು. ಈಗ ಅದೇ ಹಾಡನ್ನು ಕಲಾವತಿ ಪುತ್ರನ್‌ ಹಾಡಿದ್ದಾರೆ. ಹಣದ ಗುಣದ ಕುರಿತು ಬರೆದಿರುವ ಈ ಗೀತೆ ‘ಆ ಒಂದು ನೋಟು’ ಚಿತ್ರದ ಕಥೆಗೆ ಪೂರಕವಾಗಿದ್ದು, ಅದನ್ನು ಬಳಸಿಕೊಳ್ಳಲಾಗಿದೆ.

ಚಿತ್ರದಲ್ಲಿ 2000 ನೋಟಿನ ಕಥೆ ಇದೆ. ಮುಖ್ಯವಾದ ಭಾಗವೇ 2000 ನೋಟು. ಚಿತ್ರದಲ್ಲಿರುವ ಪ್ರತಿಯೊಂದು ಪಾತ್ರ ಕೂಡ ಆ ನೋಟಿನ ಸುತ್ತವೇ ಸುತ್ತುತ್ತವೆ. ಇದೊಂದು ಪ್ರಯೋಗಾತ್ಮಕ ಕಥೆ. ಅದಕ್ಕೊಂದಷ್ಟು ಕಮರ್ಷಿಯಲ್‌ ಅಂಶ ಬೆರೆಸಿ, ಹೊಸತನದೊಂದಿಗೆ ನಿರೂಪಣೆ ಮಾಡಿ ಚಿತ್ರ ಮಾಡಲಾಗಿದೆ. ಫ್ರೆಂಡ್ಸ್‌ ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಡಿ ಎಮ್‌.ಕೆ.ಜಗದೀಶ್‌ ಮತ್ತು ಜಿ. ಪ್ರೇಮನಾಥ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರತ್ನಾ ತನಯ್‌ ನಿರ್ದೇಶನ ಮಾಡಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ರವಿವರ್ಮ ಛಾಯಾಗ್ರಹಣ ಮಾಡಿದರೆ, ಅರ್ಜುನ್‌ ಕಿಟ್ಟು ಸಂಕಲನ ಮಾಡಿದ್ದಾರೆ. ವೀರ್‌ಸಮರ್ಥ್ ಹಿನ್ನಲೆ ಸಂಗೀತವಿದೆ. ಕೌಶಿಕ್‌ ಸಂಗೀತ ಚಿತ್ರಕ್ಕಿದ್ದು, ಕೆ.ಕಲ್ಯಾಣ್‌, ಹರೀಶ್‌ ಕೆ.ಗೌಡ ಗೀತೆ ರಚಿಸಿದ್ದಾರೆ.

ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಲರಾಜವಾಡಿ, ಗೌತಮ್‌, ಜಗದೀಶ್‌ ಎಂ.ಕೆ., ಅಕ್ಷತಾ ಪಾಂಡವಪುರ, ಆದಿತ್ಯ ಶೆಟ್ಟಿ, ಮೇಘಾ, ರವಿಶಂಕರ್‌, ಸಿಲ್ಲಿ ಲಲ್ಲಿ ಆನಂದ, ಜಯರಾಮ್‌, ಕಾಂತರಾಜ್‌ ನಟಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಇದೀಗ ಹಿನ್ನಲೆ ಸಂಗೀತ ಹಾಗು ಡಿಐ ಕೆಲಸಗಳು ನಡೆಯುತ್ತಿವೆ. ಫೆಬ್ರ್ರವರಿಯಲ್ಲಿ ಆಡಿಯೋ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.