ನಿರಂಜನ್- ತಿಲಕ್ ಹೊಸ ಚಿತ್ರ ಅಭಿರಾಮಿ; ಕಾಮಿಡಿ-ಸೀರಿಯಸ್ ಜೊತೆ..
Team Udayavani, Jan 18, 2018, 2:57 PM IST
ವರ್ಷದ ಆರಂಭದಲ್ಲಿ ಹೊಸಬರ ಪರ್ವ ಶುರುವಾಗಿದೆ. ಈಗಾಗಲೇ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ. ಆ ಸಾಲಿಗೆ “ಅಭಿರಾಮಿ’ ಕೂಡ ಹೊಸ ಸೇರ್ಪಡೆ. ಈ ಚಿತ್ರದ ಮೂಲಕ ಶರಣ್ ತಾಳದ್ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜವಾಬ್ದಾರಿಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕರಾಗಿ ಕೃಷ್ಣಪ್ಪ ಸೊರಬ ಇವರಿಗೂ ಇದು ಹೊಸ ಅನುಭವ.
ಚಿತ್ರದ ಹೆಸರೇ ಹೇಳುವಂತೆ, ಇದೊಂದು ಮಹಿಳೆ ಸುತ್ತ ತಿರುಗುವ ಕಥೆ. ಪಕ್ಕಾ ಯೂತ್ಸ್ಗೆ ಸಂಬಂಧಿಸಿದ ಕಥೆಯಾಗಿದ್ದರೂ, ಕಮರ್ಷಿಯಲ್ ಅಂಶಗಳೊಂದಿಗೆ ಸಾಗುವ ಹೊಸ ಬಗೆಯ ಚಿತ್ರವಿದು ಎಂಬುದು ನಿರ್ದೇಶಕರ ಮಾತು. ಇಲ್ಲಿ ಇಬ್ಬಿಬ್ಬರು ಹೀರೋಗಳಿದ್ದಾರೆ. ಇಬ್ಬರು ನಾಯಕಿಯರೂ ಇದ್ದಾರೆ. ಆದರೆ, ಹೊಡೆದಾಟಗಳಿಲ್ಲ. ಯಾರೂ ಹಾಡುವ ಮೂಲಕ ಮರಸುತ್ತುವುದೂ ಇಲ್ಲ. ಗಂಭೀರ ವಿಷಯದೊಂದಿಗೆ ಕುತೂಹಲ ಕೆರಳಿಸುವ ಮೂಲಕ ಹೊಸತನ ಕೊಡುವ ನಿಟ್ಟಿನಲ್ಲಿ ಯೋಗಕ್ಕಿಳಿಯುತ್ತಿರುವುದಾಗಿ ಹೇಳುತ್ತಾರೆ ಶರಣ್ ತಾಳದ್.
ಇಲ್ಲಿ ನಿರಂಜನ್ ದೇಶಪಾಂಡೆ, ತಿಲಕ್ ಹೀರೋಗಳು. ಸಾಯಿಕುಮಾರ್ ಅವರಿಗಿಲ್ಲಿ ಪ್ರಮುಖ ಪಾತ್ರವಿದೆ. ವೈಷ್ಣವಿ ಮೆನನ್ ನಾಯಕಿಯಾಗಿದ್ದಾರೆ. ಅನಿತಾ ಭಟ್ ಅವರಿಗಿಲ್ಲಿ ವಿಶೇಷ ಎನಿಸುವ ಪಾತ್ರವಿದೆ. ಉಳಿದಂತೆ ಚಿತ್ರದಲ್ಲಿ ಶೋಭರಾಜ್, ಅರುಣ್, ಆನಂದ್, ಪ್ರದೀಪ್ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಮಿಲ್ ಸಂಗೀತ ನೀಡುತ್ತಿದ್ದಾರೆ. ಕಥೆಯ ಹಿನ್ನೆಲೆಯಲ್ಲಿ ಸಾಗುವ ಎರಡು ಗೀತೆಗಳನ್ನು ಕೀತ… ಭಂಡಾರಿ ಬರೆದಿದ್ದಾರೆ.
ಚಿತ್ರಕ್ಕೆ ಎಂ.ಬಿ.ಹಳ್ಳಿಕಟ್ಟೆ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಇಲ್ಲಿ ಪ್ರಯೋಗ ಮಾಡುತ್ತಿರುವುದರಿಂದ ಚಿತ್ರಕ್ಕೆ ಸೋನಿ 8.5ಕೆ ಕ್ಯಾಮೆರಾವನ್ನು ಬಳಸುತ್ತಿದೆ ಚಿತ್ರತಂಡ. ತಾಂತ್ರಿಕತೆಯಲ್ಲಿ ಚಿತ್ರ ಶೀಮಂತವಾಗಿರುತ್ತೆ ಎಂಬುದು ನಿರ್ದೇಶಕರ ಮಾತು. ಬೆಂಗಳೂರು, ಚಿಕ್ಕಮಗಳೂರು, ಯಲ್ಲಾಪುರ, ಮಡಿಕೇರಿ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಜನವರಿ ಅಂತ್ಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ