ಆತ್ಮಚರಿತ್ರೆ ಬರೆಯುತ್ತಾರಂತೆ “ದುನಿಯಾ’ ವಿಜಯ್‌


Team Udayavani, Mar 22, 2017, 11:51 AM IST

Vijay-(5).jpg

“ಈಗನಿಸುತ್ತೆ 10 ವರ್ಷಗಳನ್ನ ವೇಸ್ಟ್‌ ಮಾಡಿ ಬಿಟ್ಟೆ …’ ಹಾಗಂತ ಉದ್ಗರಿಸಿದರು “ದುನಿಯಾ’ ವಿಜಯ್‌. ಅವರಿಗೆ ಈ 10 ವರ್ಷಗಳಲ್ಲಿ ಒಂದು ವಿಷಯ ಬಹಳ ಸ್ಪಷ್ಟವಾಗಿದೆ. ಅದೇ ಓದಿನ ಮಹತ್ವ. ವಿಜಯ್‌ ಮುಂಚೆ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಈಗ ಸಾಹಿತ್ಯದ ಕಡೆಗೆ ಅವರ ಮನಸ್ಸು ಹರಿದಿದೆ.

“ಟ್ರೆಂಡ್‌ ಬದಲಾಗಿದೆ. ಮುಂಚಿನ ತರಹ ಓಯ್ತದೆ, ಬರ್ತದೆ ಎಂದು ಸಂಭಾಷಣೆ ಹೇಳ್ಳೋಕ್ಕಾಗಲ್ಲ. ಭಾಷೆಯಲ್ಲಿ ಸ್ಪಷ್ಟತೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಾಜ್ಞಾನ ಇರಬೇಕು. ಅದಕ್ಕೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದೀನಿ. ಫೋನ್‌, ಇಂಟರ್‌ನೆಟ್‌ ಎಲ್ಲವನ್ನೂ ದೂರ ಇಟ್ಟು, ಓದುವುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೀನಿ’ ಎನ್ನುತ್ತಾರೆ ವಿಜಯ್‌.

ಪುಸ್ತಕ ಬರೆಯೋ ಯೋಚನೆ ಇದೆ: ಹಾಗೆ ಮಾಡುವುದಕ್ಕೆ ವಿಜಯ್‌ ಅವರಿಗೆ ಒಂದು ಕಾರಣವೂ ಇದೆ. ಅದೇನೆಂದರೆ, ವಿಜಯ್‌ ತಮ್ಮ ಆತ್ಮಚರಿತ್ರೆ ಬರೆಯುವುದಕ್ಕೆ ಯೋಚನೆ ಮಾಡುತ್ತಿದ್ದಾರೆ. ಅದರ ಸಿದ್ಧತೆಗೆ ಈ ಓದು ಎಂದರೆ ತಪ್ಪಿಲ್ಲ. “ಹೆಚ್ಚಿನವರಿಗೆ ನನ್ನ ಬಗ್ಗೆ ಗೊತ್ತಿಲ್ಲ. ನನ್ನ ಶೈಲಿ ನೋಡಿ ಎಲ್ಲರಿಗೂ ನನ್ನ ಬಗ್ಗೆ ಬೇರೆಯದೇ ಅಭಿಪ್ರಾಯವಿದೆ. ನಾನು ಹಾಗಲ್ಲ ಎಂದು ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಹಾಗಾಗಿ ನನ್ನ ಜೀವನದಲ್ಲಿ ಏನೇನು ನಡೆಯಿತೋ, ಅದನ್ನೆಲ್ಲಾ ಪುಸ್ತಕ ರೂಪದಲ್ಲಿ ಮುಂದೊಂದು ದಿನ ಹೊರತರುವಾಸೆ. ಇನ್ನು ನನ್ನ ಜೀವನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಅವನ್ನೆಲ್ಲಾ ವಿವರವಾಗಿ ಹೇಳಬೇಕು. ಹಾಗಾಗಿ ಅದಕ್ಕೆ ಭಾಷೆ ಚೆನ್ನಾಗಿರಬೇಕು. ಆ ಭಾಷಾಜ್ಞಾನಕ್ಕಾಗಿಯೇ ಹೆಚ್ಚು ಓದುತ್ತಿದ್ದೀನಿ’ ಎನ್ನುತ್ತಾರೆ ವಿಜಯ್‌.

ಸೋಷಿ ಯಲ್‌ ಮೀಡಿಯಾ ದಿಂದ ದೂರ: ಮೊದಲೇ ಹೇಳಿದಂತೆ ಫೋನ್‌, ಸೋಷಿ ಯಲ್‌ ಮೀಡಿಯಾ ಎಲ್ಲದರಿಂದಲೂ ದೂರ ಆಗಿದ್ದಾರಂತೆ ವಿಜಯ್‌. “ಮೊದಲು ಫೋನ್‌ ಚಟ ಬಿಡಬೇಕು. ನಮ್ಮಲ್ಲಿ ಸುಮ್ಮನೆ ಫೋನ್‌ ಉಪಯೋಗಿಸುತ್ತಲೇ ಇರುತ್ತಾರೆ. ಅಗತ್ಯ ಇದ್ದರೆ ಓಕೆ. ಅಗತ್ಯವಿಲ್ಲದಿದ್ದರೂ ಸೋಷಿಯಲ್‌ ಮೀಡಿಯಾಗೆ ಅಂಟುಕೊಂಡೇ ಇರುತ್ತಾರೆ. ಬರೀ ಫೋನ್‌ ಒಂದೇ ಜೀವನವಲ್ಲ.

ಜೀವನದಲ್ಲಿ ಮುಖ್ಯವಾಗಿದ್ದು ಇನ್ನೂ ಏನೇನೋ ಇದೆ. ಅದನ್ನೆಲ್ಲಾ ಬಿಟ್ಟು, ಸದಾ ಫೋನ್‌ ಹಿಡಿದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರಿಂದ ಬೇಸರವಾಗಿ ನಾನು ಸೋಷಿಯಲ್‌ ಮೀಡಿಯಾದಿಂದ ಸಂಪೂರ್ಣವಾಗಿ ಹೊರ ಬಂದಿದ್ದೇನೆ.  ಫೋನ್‌ ಎಷ್ಟು ಬೇಕೋ ಅಷ್ಟು ಉಪಯೋಗಿಸುತ್ತಿದ್ದೇನೆ. ನನ್ನ ಮಕ್ಕಳಿಂದಲೂ ದೂರ ಇಟ್ಟಿದ್ದೇನೆ’ ಎಂದು ನೇರವಾಗಿಯೇ ಹೇಳುತ್ತಾರೆ ವಿಜಯ್‌.

ಪ್ಯಾಶನ್‌ಗಿಂಥ ಫ್ಯಾಶನ್‌ ಹೆಚ್ಚು: ಇನ್ನು ಚಿತ್ರರಂಗದಲ್ಲಿ ನಾಯಕನಾಗಿ ಅವರು 10 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಜೀವನ ಸಾಕಷ್ಟು ಕಲಿಸಿದೆ ಎನ್ನುವ ಅವರು, “ಈ 10 ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೀನಿ. ಬಹಳ ಖುಷಿಯಾಗಿದ್ದೀನಿ. ಎಲ್ಲಕ್ಕಿಂತ ಹೆಚ್ಚಾಗಿ ಲೈಫ್ಸ್ಟೈಲ್‌ ಬದಲಿಸಿಕೊಳ್ಳುತ್ತಿದ್ದೀನಿ.

ನಾನು ಗಮನಿಸಿರುವಂತೆ ಚಿತ್ರರಂಗಕ್ಕೆ ಬರುವವರಿಗೆ ಪ್ಯಾಶನ್‌ಗಿಂಥ ಫ್ಯಾಶನ್‌ ಜಾಸ್ತಿಯಾಗಿದೆ. ಬರೀ ಜಿಮ್‌ಗೆ ಹೋಗಿ, ಅಬxಮನ್‌ ಬೆಳೆಸಿಕೊಳ್ಳೋದಷ್ಟೇ ಅಲ್ಲ. ಹೆಣ್ಮಕ್ಕಳೂ ಅಷ್ಟೇ. ಬರೀ ಗ್ಲಾಮರ್‌ವೊಂದೇ ಮುಖ್ಯವಲ್ಲ. ಈ 10 ವರ್ಷಗಳಲ್ಲಿ ಸಾಕಷ್ಟು ಜನ ಚಿತ್ರರಂಕ್ಕೆ ಬಂದಿದ್ದಾರೆ. ಆದರೆ, ಇಲ್ಲೆಷ್ಟು ಜನ ಗಟ್ಟಿಯಾಗಿ ನೆಲೆಯೂರಿದ್ದಾರೆ. 

ಅವಕಾಶಕ್ಕಾಗಿ ಏನು ಮಾಡೋಕೆ ಸಿದ್ಧ ಅನ್ನೋದಲ್ಲ. ಅದಕ್ಕೆ ಒಂದಿಷ್ಟು ತಯಾರಿ ಬೇಕು. ಪ್ರಮುಖವಾಗಿ ರಂಗಭೂಮಿ ಒಡನಾಟ ಇರಬೇಕು. ಪ್ರತಿಭೆ ಇದ್ದರೆ ಅವಕಾಶ, ಇಲ್ಲದಿದ್ದರೆ ವಾಶೌಟ್‌ ಆಗುತ್ತಾರೆ. ಹಾಗಾಗಿ ಒಂದಿಷ್ಟು ಸೂಕ್ತ ತರಬೇತಿ ಪಡೆದು ಬನ್ನಿ. ಆಗ ಸ್ವಲ್ಪ ಕಷ್ಟವಾದರೂ, ಹೆಚ್ಚು ದಿನ ಇರುತ್ತಾರೆ’ ಎನ್ನುತ್ತಾರೆ ವಿಜಯ್‌.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.