ಭಟ್ಟರಿಗೆ ಸಿಕ್ತು ಭರ್ಜರಿ ಚೆಕ್
Team Udayavani, Sep 12, 2017, 10:25 AM IST
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸೋಮವಾರ ಯೋಗರಾಜ್ ಭಟ್ಟರು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ವಿರುದ್ಧ ಕೋರ್ಟಿಗೆ ಹೋಗಬೇಕಿತ್ತು. “ದನ ಕಾಯೋನು’ ಚಿತ್ರಕ್ಕೆ ಸಂಬಂಧಿಸಿದಂತೆ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಪಡೆಯುವುದಕ್ಕೆ ಕೋರ್ಟು ಮೆಟ್ಟಿಲು ಹತ್ತಬೇಕಿತ್ತು. ಆದರೆ, ಅದಕ್ಕೆ ಮುನ್ನವೇ ಸಮಸ್ಯೆ ಬಗೆಹರಿದಂತಿದೆ.
ಕನಕಪುರ ಶ್ರೀನಿವಾಸ್, ಯೋಗರಾಜ್ ಭಟ್ಗೆ ಮೂರು ಚೆಕ್ಗಳನ್ನು ಕೊಟ್ಟಿದ್ದು, ಅದನ್ನು ಪಡೆದು ಭಟ್ಟರು ಮನೆಗೆ ಬಂದಿದ್ದಾರೆ. ಅದನ್ನು ಸದ್ಯದಲ್ಲೇ ಬ್ಯಾಂಕಿಗೆ ಹಾಕುತ್ತಾರಂತೆ. ಪಾಸ್ ಆದರೆ ಓಕೆ, ಇಲ್ಲದಿದ್ದರೆ ಬಾಕಿ ವಿಷಯ ಬ್ರೇಕ್ ಕೆ ಬಾದ್. ಹೌದು, ನಿನ್ನೆ ಯೋಗರಾಜ್ ಭಟ್ ಮತ್ತು ಕನಕಪುರ ಶ್ರೀನಿವಾಸ್ ಮಧ್ಯೆ ಒಂದು ರಾಜಿ ಸಂಧಾನವಾಗಿದೆ.
ರಾಜಿ ಮಾಡಿಸಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು. ಕೋರ್ಟ್ಗೆ ಹೋಗುತ್ತೀನಿ ಎನ್ನುತ್ತಿದ್ದ ಭಟ್ಟರನ್ನು ತಡೆದು ಮೂರು ಚೆಕ್ ಕೊಡಿಸಿದ್ದಾರಂತೆ. ಅಷ್ಟೇ ಅಲ್ಲ, ಅದು ಬೌನ್ಸ್ ಆಗುವುದಿಲ್ಲ, ಧೈರ್ಯವಾಗಿರಿ ಎಂದು ಆಶ್ವಾಸನೆ ಕೊಟ್ಟಿದ್ದಾರಂತೆ. ಗೋವಿಂದು ಅವರು ಮುಂದೆ ನಿಂತು ಎಲ್ಲವನ್ನೂ ನಡೆಸಿಕೊಟ್ಟಿರುವುದರಿಂದ, ಭಟ್ಟರು ತಮ್ಮ ತೀರ್ಮಾನವನ್ನು ಬದಲಾಯಿಸಿದ್ದಾರೆ.
ಅವರು ಕೊಟ್ಟ ಚೆಕ್ ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಈ ಬಾರಿ ಚೆಕ್ ಹಾಕಿ ನೋಡೋಣ, ಮತ್ತೆ ಏನಾದರೂ ಸಮಸ್ಯೆಯಾದರೆ ಕೋರ್ಟ್ ಇದ್ದೇ ಇದೆ ಎಂದು ವಾಪಸ್ಸು ಬಂದಿದ್ದಾರೆ. ಅಲ್ಲಿಗೆ ಪ್ರಕರಣ ಸದ್ಯಕ್ಕೆ ಬಗೆಹರಿದಂತಿದೆ. ಬಾಕಿ ವಿಷಯ ಚೆಕ್ ಪಾಸ್ ಆದ್ಮೇಲೆ …
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್