![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ದರ್ಶನ್ 49ನೇ ಚಿತ್ರದ ಹೆಸರು ತಾರಕ್
Team Udayavani, Feb 14, 2017, 11:14 AM IST
![dharsn-sudeer.jpg](https://www.udayavani.com/wp-content/uploads/2017/02/14/dharsn-sudeer.jpg)
ದರ್ಶನ್ “ಚಕ್ರವರ್ತಿ’ ಚಿತ್ರೀಕರಣ ಮುಗಿಸಿದ್ದಾರೆ. ಈಗ ಅವರ 49ನೇ ಚಿತ್ರದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದ್ದು, “ಮಿಲನ’ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶಿಸುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಆದರೆ, ಈ ಸಿನಿಮಾದ ಟೈಟಲ್ ಏನು ಎಂಬ ಕುತೂಹಲ ದರ್ಶನ್ ಅಭಿಮಾನಿಗಳಲ್ಲಿ ಸಹಜವಾಗಿಯೇ ಇತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದು “ತಾರಕ್’. ಹೌದು, ಪ್ರಕಾಶ್ ನಿರ್ದೇಶನದ ದರ್ಶನ್ ಅವರ 49ನೇ ಚಿತ್ರಕ್ಕೆ “ತಾರಕ್’ ಎಂದು ಟೈಟಲ್ ಇಡಲಾಗಿದೆ.
ತಾರಕ್ ಎಂದರೆ ಸಿನಿಮಾದಲ್ಲಿ ದರ್ಶನ್ ಪಾತ್ರದ ಹೆಸರಾ ಎಂಬ ಪ್ರಶ್ನೆಯನ್ನು ನೀವು ಕೇಳಿದರೆ ಸದ್ಯ ಅದಕ್ಕೆ ಉತ್ತರವಿಲ್ಲ. ಉತ್ತರಕ್ಕಾಗಿ ನೀವು ಡಿಸೆಂಬರ್ವರೆಗೆ ಕಾಯಲೇಬೇಕಾಗುತ್ತದೆ. ಮಾರ್ಚ್ 1 ರಿಂದ “ತಾರಕ್’ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಚಿತ್ರದ ಕಥೆ ವಿದೇಶದಲ್ಲೂ ನಡೆಯುವುದರಿಂದ ಇಲ್ಲಿನ ಚಿತ್ರೀಕರಣ ಮುಗಿಸಿ ಚಿತ್ರತಂಡ ವಿದೇಶಕ್ಕೆ ಹೋಗಲಿದೆ.
ಈ ಚಿತ್ರಕ್ಕೆ ಶ್ರುತಿ ಹರಿಹರನ್ ಹಾಗೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು, ದರ್ಶನ್ ಅವರ 50ನೇ ಚಿತ್ರ “ಸರ್ವಾಂತರ್ಯಾಮಿ’ಯನ್ನು ಅವರ ಸಹೋದರ ದಿನಕರ್ ನಿರ್ದೇಶಿಸುತ್ತಾರೆಂದು ಹೇಳಲಾಗಿತ್ತು. ಆ ನಂತರ ದಿನಕರ್ ಐವತ್ತನೇ ಸಿನಿಮಾವನ್ನು ಬಿಟ್ಟುಕೊಟ್ಟಿದ್ದು, ಮುಂದಿನ ದಿನಗಳಲ್ಲಿ “ಸರ್ವಾಂತರ್ಯಾಮಿ’ಯನ್ನು ಮಾಡಲು ನಿರ್ಧರಿಸಿದ್ದಾರೆಂಬ ಸುದ್ದಿಯೂ ಬಂತು.
ಈಗ ದರ್ಶನ್ ಅವರ 50ನೇ ಚಿತ್ರವನ್ನು ನಿರ್ದೇಶಿಸುವ ಅವಕಾಶ ತರುಣ್ ಸುಧೀರ್ಗೆ ಸಿಕ್ಕಿದೆ. “ಚೌಕ’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ತರುಣ್ಗೆ ದರ್ಶನ್ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. “ಚೌಕ’ ಚಿತ್ರದಲ್ಲಿ ದರ್ಶನ್ ಗೆಸ್ಟ್ ಅಪಿಯರೆನ್ಸ್ ಕೂಡಾ ಮಾಡಿದ್ದಾರೆ. ಆ ಸಮಯದಲ್ಲಿ ತರುಣ್ ಕೆಲಸ ನೋಡಿ ಖುಷಿಯಾದ ದರ್ಶನ್, ತಮ್ಮ 50ನೇ ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ಅಂದಹಾಗೆ, ಇದು ತಮಿಳಿನ “ವೀರಂ’ ಚಿತ್ರದ ರೀಮೇಕ್.
ಅಜಿತ್ ನಾಯಕರಾಗಿರುವ ಈ ಚಿತ್ರ 2014ರಲ್ಲಿ ತೆರೆಕಂಡಿತ್ತು. ಈಗ ಈ ಚಿತ್ರದಲ್ಲಿ ದರ್ಶನ್ ನಾಯಕರಾಗಿ ನಟಿಸುತ್ತಿದ್ದಾರೆ. “ಚಕ್ರವರ್ತಿ’ ಸಿನಿಮಾವನ್ನು ನಿರ್ಮಿಸಿರುವ ಸಿದ್ಧಾರ್ಥ್, ದರ್ಶನ್ ಅವರ 50ನೇ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. “ತಾರಕ್’ ಚಿತ್ರೀಕರಣ ಮುಗಿಯುತ್ತಿದ್ದಂತೆ 50ನೇ ಸಿನಿಮಾ ಸೆಟ್ಟೇರಲಿದೆ. ಇನ್ನು, ದರ್ಶನ್ ಅವರ “ಚಕ್ರವರ್ತಿ’ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿದ್ದು, ಮಾರ್ಚ್ನಲ್ಲಿ ಚಿತ್ರ ತೆರೆಗೆ ಬರಲಿದೆ. ಇಲ್ಲಿ ದರ್ಶನ್ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.