![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ಕನ್ನಡ ಶೀರ್ಷಿಕೆಗಳಿಗೆ ಆದ್ಯತೆ ಕೊಡಿ
Team Udayavani, Feb 15, 2017, 10:58 AM IST
![Sa.Ra-Govind.jpg](https://www.udayavani.com/wp-content/uploads/2017/02/15/Sa.Ra-Govind-370x465.jpg)
ಇತ್ತೀಚೆಗೆ ಬರುತ್ತಿರುವ ಬಹುತೇಕ ಕನ್ನಡ ಸಿನಿಮಾಗಳ ಶೀರ್ಷಿಕೆಗಳು ಇಂಗ್ಲೀಷ್ಮಯವಾಗಿವೆ. ಇಂಗ್ಲೀಷ್ ಶೀರ್ಷಿಕೆ ಇಡೋದೇ ಒಂದು ಫ್ಯಾಶನ್ ಎಂಬಂತೆ ಚಿತ್ರತಂಡಗಳು ಏನೇನೋ ಇಂಗ್ಲೀಷ್ ಟೈಟಲ್ ಇಡುತ್ತಿವೆ. ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಬೇಸರ ತರಿಸಿದೆ. ಸ್ವತಃ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು “ಕನ್ನಡ ಶೀರ್ಷಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.
“ಪರಭಾಷಾ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಶೀರ್ಷಿಕೆಗಳಿಗಷ್ಟೇ ಆದ್ಯತೆ. ಅದಕ್ಕೆ ಸರಿಯಾಗಿ ಅಲ್ಲಿನ ನಿರ್ದೇಶಕ, ನಿರ್ಮಾಪಕರು ಆಯಾ ಭಾಷೆಯ ಶೀರ್ಷಿಕೆಗಳನ್ನೇ ಇಡುತ್ತಿದ್ದಾರೆ. ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಾಗಿದೆ. ಶೀರ್ಷಿಕೆ ನೋಂದಾವಣೆಗೆ ಬರುವ ಬಹುತೇಕ ಶೀರ್ಷಿಕೆಗಳು ಇಂಗ್ಲೀಷ್ನಲ್ಲಿರುತ್ತವೆ. ನಾವು “ಕನ್ನಡ ಶೀರ್ಷಿಕೆ ಇಡಿ, ಈ ಶೀರ್ಷಿಕೆ ಬದಲಿಸಿ’ ಎಂದು ಎಷ್ಟು ಹೇಳಿದರೂ ನಿರ್ದೇಶಕರು ಕೇಳುತ್ತಿಲ್ಲ.
“ಇಲ್ಲಾ ಸಾರ್, ಕಥೆಗೆ ತುಂಬಾ ಹೊಂದುತ್ತೆ. ಟೈಟಲ್ ಬದಲಿಸಿದರೆ ಸಿನಿಮಾದ ಸಾರವೇ ಹೋಗುತ್ತದೆ’ ಎನ್ನುತ್ತಾರೆ. ನಾವು ಹೇಳುವಷ್ಟು ಹೇಳುತ್ತೇವೆ. ಮತ್ತೆ ಏನಾದರೂ ಮಾಡಿಕೊಳ್ಳಿ, ನಮ್ಮಿಂದ ಸಿನಿಮಾ ಸೋತಿತು ಎಂಬ ಅಪವಾದ ಬೇಡ ಎಂದು ಟೈಟಲ್ ಕೊಟ್ಟು ಕಳಿಸುತ್ತಿದ್ದೇವೆ.
ಕೇವಲ ಇಂಗ್ಲೀಷ್ ಟೈಟಲ್ ಇಟ್ಟ ಕೂಡಲೇ ಸಿನಿಮಾ ಯಶಸ್ವಿಯಾಗುತ್ತದೆ ಎಂಬುದು ಕೇವಲ ಭ್ರಮೆ’ ಎನ್ನುವ ಮೂಲಕ ಕನ್ನಡ ಶೀರ್ಷಿಕೆಗಳಿಗೆ ಆದ್ಯತೆ ಕೊಡಬೇಕು ಎಂದಿದ್ದಾರೆ ಸಾ.ರಾ.ಗೋವಿಂದು. ಅಂದಹಾಗೆ, ಸಾ.ರಾ.ಗೋವಿಂದು ಟೈಟಲ್ ಬಗ್ಗೆ ಮಾತನಾಡಿದ್ದು “ಬ್ರಾಂಡ್’ ಎಂಬ ಕನ್ನಡ ಸಿನಿಮಾದ ಆಡಿಯೋ ರಿಲೀಸ್ನಲ್ಲಿ.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.