![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ನನ್ ಕಾಸು ನನ್ ಕನಸು; ಸಂಜು ವೆಡ್ಸ್ ಗೀತಾ-2ಗೆ ನಾಗಶೇಖರ್ ರೆಡಿ
Team Udayavani, Aug 8, 2023, 3:15 PM IST
![Director nagashekar spoke about sanju weds geetha 2](https://www.udayavani.com/wp-content/uploads/2023/08/nagashekgar-620x342.jpg)
2011ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ನಿರ್ದೇಶಕ ನಾಗಶೇಖರ್ ಇದೀಗ ಮತ್ತೆ ಸಂಜು ಮತ್ತು ಗೀತಾ ಕಥೆ ಹೇಳಲು ರೆಡಿಯಾಗಿದ್ದಾರೆ. ಇದೀಗ ಸಂಜು ವೆಡ್ಸ್ ಗೀತಾ-2 ಚಿತ್ರ ಆರಂಭಿಸಿದ್ದು, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಇದರ ಬಗ್ಗೆ ನಾಗಶೇಖರ್ ಜೊತೆಗಿನ ಮಾತುಕತೆ.
1 ಸಂಜು ವೆಡ್ಸ್ ಗೀತಾ-2 ಮೇಲೆ ನಿಮ್ಮ ಎಕ್ಸೈಟ್ಮೆಂಟ್ ಎಷ್ಟಿದೆ?
– ನೂರಕ್ಕೆ ನೂರು ಪರ್ಸೆಂಟ್ ಎಕ್ಸೆ„ಟ್ ಆಗಿದ್ದೇನೆ. ತುಂಬಾ ಒಳ್ಳೆಯ ಕಥೆ ಸಿಕ್ಕಿದೆ, ಒಳ್ಳೆಯ ಹಾಡುಗಳು ಸಿದ್ಧವಾಗಿದೆ. ಈ ಎಲ್ಲಾ ಕಾರಣದಿಂದ ಚಿತ್ರದ ಮೇಲಿನ ಎಕ್ಸೆ„ಟ್ಮೆಂಟ್ ಹೆಚ್ಚಿದೆ.
2 ಪಾರ್ಟ್ 2 ಮಾಡುವ ಪ್ಲ್ರಾನ್ ಯಾವತ್ತಿನಿಂದ ಇತ್ತು?
– ಆರು ವರ್ಷದಿಂದಲೇ ಇತ್ತು. ಪ್ರತಿ ಸಾರಿ ಕಂಫೋಸಿಂಗ್ ಕುಳಿತಾಗಲೂ ನನಗೆ ಹಾಡುಗಳು ಸಿಗುತ್ತಿರಲಿಲ್ಲ. ಈ ಸಿನಿಮಾವನ್ನು ಪಾರ್ಟ್ ಮಾಡೋದೇ ದೊಡ್ಡ ಚಾಲೆಂಜ್. ಹಾಡುಗಳು ಬಹಳ ಮುಖ್ಯ ಈ ಕಥೆಗೆ. ಈಗ ಕವಿರಾಜ್ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ.
3 ಈ ಸಿನಿಮಾವನ್ನು ರಮ್ಯಾ ಒಪ್ಪಲಿಲ್ವಾ ಅಥವಾ ನಿಮ್ಮ ಆಯ್ಕೆಯೇ ಬೇರೆಯಾಗಿತ್ತಾ?
– ನಾನು ಅವರನ್ನು ಈ ಸಿನಿಮಾ ಬಗ್ಗೆ ಕೇಳಬೇಕು ಅಂದುಕೊಂಡೆ. ಆದರೆ, ಆಗ ಅವರು ಫಾರಿನ್ ನಲ್ಲಿದ್ದರು. ಅವರು ಬರುವವರೆಗೆ ಕಾಯುವಷ್ಟು ಸಮಯ ನನಗಿರಲಿಲ್ಲ. ನನಗೆ ಈ ಚಳಿಗಾಲ, ಮಳೆಗಾಲದಲ್ಲೇ ಶೂಟಿಂಗ್ ಮಾಡಬೇಕು.
4 ನಾಗಶೇಖರ್ ಕೆಲಸದ ಶೈಲಿ ಬದಲಾಗಿದೆಯಾ?
– ನಾಗಶೇಖರ್ ಸಿನಿಮಾ ಮಾಡುತ್ತಾನೆ ಎಂದರೆ ಅಲ್ಲಿ ಅವನದೇ ಆದ ಒಂದು ಶೈಲಿ ಇರುತ್ತದೆ, ಸಖತ್ ಜೋಶ್ ಇರುತ್ತದೆ. ಅದು ಯಾವತ್ತೂ ಬದಲಾಗಲ್ಲ. ಅದೇ ಜೋಶ್ನಲ್ಲಿ ಈ ಸಿನಿಮಾ ಮಾಡುತ್ತೇನೆ. ಈ ಸಿನಿಮಾನ್ನು ನಾನು ಮತ್ತು ನನ್ನ ಸ್ನೇಹಿತರು ಸೇರಿ ನಿರ್ಮಿಸುತ್ತಿದ್ದೇವೆ. ಆ.15ರಂದು ಅದ್ಧೂರಿಯಾಗಿ ಮುಹೂರ್ತ ಮಾಡುತ್ತಿದ್ದೇವೆ. ನನ್ನ ಕಾಸು, ನನ್ನ ಕನಸು.. ಹಾಗಾಗಿ, ಸಿನಿಮಾ ಕೂಡಾ ಅದ್ಭುತವಾಗಿ ಮೂಡಿಬರುವ ವಿಶ್ವಾಸವಿದೆ.
5 ಸಂಜು- ಗೀತಾ ತೆರೆಗೆ ಬರೋದು ಯಾವಾಗ?
– ಮುಂದಿನ ವರ್ಷ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.