ಅಪ್ಪಂಗೂ ಕಾಲೇಜ್‌ ಫ್ರೆಂಡ್‌; ಮಕ್ಕಳಿಗೂ ಕಾಲೇಜ್‌ ಫ್ರೆಂಡ್‌


Team Udayavani, Oct 17, 2017, 12:32 PM IST

Honnavalli-Krishna-and-Pune.jpg

ಹೊನ್ನವಳ್ಳಿ ಕೃಷ್ಣ ಯಾರಿಗೂ ಗೊತ್ತಿರದ ಒಂದು ದಾಖಲೆ ಮಾಡಿದ್ದಾರೆ! ಅವರು ಮಾಡಿದ ಆ ಅಪರೂಪದ ದಾಖಲೆಯ ಗುಟ್ಟು ರಟ್ಟು ಮಾಡಿದ್ದು ಬೇರಾರೂ ಅಲ್ಲ, ಪುನೀತ್‌ ರಾಜ್‌ಕುಮಾರ್‌. ಹೌದು, ಹೊನ್ನವಳ್ಳಿ ಕೃಷ್ಣ ಅವರನ್ನು ಪುನೀತ್‌ ರಾಜ್‌ಕುಮಾರ್‌ ಕಳೆದ ನಾಲ್ಕು ದಶಕಗಳಿಂದಲೂ ಹತ್ತಿರದಿಂದ ನೋಡಿದ್ದಾರೆ. ಸರಿ ಸುಮಾರು ನಾಲ್ಕು ದಶಕಗಳಿಂದಲೂ ಹೊನ್ನವಳ್ಳಿ ಕೃಷ್ಣ ಡಾ.ರಾಜ್‌ಕುಮಾರ್‌ ಅವರ ಕುಟುಂಬದಲ್ಲಿ ಒಬ್ಬರಾದವರು.

ಹೊನ್ನವಳ್ಳಿ ಕೃಷ್ಣ ರಾಜ್‌ಕುಮಾರ್‌ ಅವರಿಂದ ಹಿಡಿದು, ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಸಿನಿಮಾದಲ್ಲಿ ನಟಿಸಿದ್ದಾರೆ. ವಿಷಯ ಇಷ್ಟೇ ಆಗಿದ್ದರೆ, ಇಲ್ಲಿ ಹೇಳುವ ಅಗತ್ಯವಿರಲಿಲ್ಲ. ಆದರೆ, ಹೊನ್ನವಳ್ಳಿ ಕೃಷ್ಣ ಅವರ ಬಗ್ಗೆ ಯಾರಿಗೂ ಗೊತ್ತಿರದ ಒಂದು ಅಪರೂಪದ ವಿಷಯವೊಂದನ್ನು ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರೇ ಬಹಿರಂಗಪಡಿಸಿದ್ದಾರೆ. ಅಂದಹಾಗೆ, ಹೊನ್ನವಳ್ಳಿ ಕೃಷ್ಣ ಅವರ ದಾಖಲೆ ಕುರಿತು ಪುನೀತ್‌ ಹೇಳಿದ್ದೇನು ಗೊತ್ತಾ?

“ಹೊನ್ನವಳ್ಳಿ ಕೃಷ್ಣ ಅವರನ್ನು ನಾನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೇನೆ. ಅವರು ನಟಿಸಿದಂತೆಯೇ ನಾನೂ ಚಿಕ್ಕವನಿದ್ದಾಗ ನಟಿಸಿ ತೋರಿಸುತ್ತಿದ್ದೆ. ಕನ್ನಡ ಚಿತ್ರರಂಗಕ್ಕೆ ಹೊನ್ನವಳ್ಳಿ ಕೃಷ್ಣ ಅವರ ಕೊಡುಗೆಯೂ ಇದೆ. ಇನ್ನೊಂದು ವಿಶೇಷವೆಂದರೆ, ಅಪ್ಪಾಜಿ ಸಿನಿಮಾಗಳಲ್ಲಿ ಕಾಲೇಜ್‌ ಫ್ರೆಂಡ್‌ ಆಗಿ ನಟಿಸಿದ್ದಾರೆ, ಶಿವಣ್ಣನ ಸಿನಿಮಾದಲ್ಲೂ ಕಾಲೇಜ್‌ ಫ್ರೆಂಡ್‌ ಆಗಿ ಕಾಣಿಸಿಕೊಂಡಿದ್ದಾರೆ, ಅಷ್ಟೇ ಅಲ್ಲ, ರಾಘಣ್ಣ ಅವರ ಚಿತ್ರಗಳಲ್ಲೂ ಕಾಲೇಜ್‌ ಗೆಳೆಯರಾಗಿ ನಟಿಸಿದ್ದಾರೆ.

ನಿಜಕ್ಕೂ ಅದು ಅವರ ದಾಖಲೆ. ನನ್ನ ಚಿತ್ರಗಳಲ್ಲೂ ಹೊನ್ನವಳ್ಳಿ ಕೃಷ್ಣ ಅವರು ನಟಿಸಿದ್ದಾರೆ. ಆದರೆ, ಕಾಲೇಜ್‌ ಫ್ರೆಂಡ್‌ ಆಗಿ ಮಾತ್ರ ನಟಿಸಿಲ್ಲ. ಹೊನ್ನವಳ್ಳಿ ಕೃಷ್ಣ ಅವರು ಒಂದು ಸಾವಿರ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನುವುದು ಸುಲಭದ ಮಾತಲ್ಲ. “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರ ಅವರ ಅಭಿನಯದ ಒಂದು ಸಾವಿರದ ಸಿನಿಮಾ. ಇಂತಹ ಕಲಾವಿದರನ್ನು ಗುರುತಿಸಿ ಪಾತ್ರ ಕೊಟ್ಟಿರುವುದು ಖುಷಿಯ ವಿಷಯ.

ನನ್ನ ಮುಂದಿನ ಚಿತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ ಅವರಿಗೆ ಖಂಡಿತವಾಗಿಯೂ ಪಾತ್ರ ಇದ್ದೇ ಇರುತ್ತೆ. ಅದರಲ್ಲೂ ನನ್ನ ಪ್ರೊಡಕ್ಷನ್‌ ಚಿತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ ಇರುತ್ತಾರೆ’ ಎಂದು ಹೇಳುತ್ತಾರೆ ಪುನೀತ್‌. ಅಂದಹಾಗೆ, ಪುನೀತ್‌ ಹೀಗೆ ಹೇಳಲು ಕಾರಣ, “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ. ಅಂದು ಟ್ರೇಲರ್‌ ರಿಲೀಸ್‌ ಮಾಡಿದ ಪುನೀತ್‌, ಹೊನ್ನವಳ್ಳಿ ಕೃಷ್ಣ ಅವರನ್ನು ಸನ್ಮಾನಿಸಿ ಮಾತನಾಡಿದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.