ಗಣೇಶ್ ಮನೆಯಲ್ಲಿ ಅಮೂಲ್ಯ ಮೆಹಂದಿ ರಂಗು
Team Udayavani, May 9, 2017, 11:40 AM IST
ನಟಿ ಅಮೂಲ್ಯ ಅವರ ಮದುವೆಗೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಶಾಸ್ತ್ರೋಸ್ತ್ರವಾಗಿ ಮೆಹಂದಿ ಕಾರ್ಯಕ್ರಮ ಜರುಗಲಿದೆ. ನಟ ಗಣೇಶ್ ಅವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ವೇದಿಕೆಯೊಂದು ಸಜ್ಜಾಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಜಗದೀಶ್ ಮತ್ತು ಅಮೂಲ್ಯ ಅವರ ಮನೆಯಲ್ಲಿ ಮದುವೆಗೆ ಸಂಬಂಧಿಸಿದಂತೆ ಹಲವಾರು ಶಾಸ್ತ್ರ-ಸಂಪ್ರದಾಯಗಳು ಜೋರಾಗಿಯೇ ನಡೆಯುತ್ತಿವೆ. ಗಣೇಶ್ ಮನೆಯಲ್ಲೇ ಮೆಹಂದಿ ಕಾರ್ಯಕ್ರಮ ನಡೆಯಲು ಕಾರಣ, ಗಣೇಶ್ ಪತ್ನಿ ಶಿಲ್ಪಾ.
ಹೌದು, ಈ ಮದುವೆಗೆ ಮುಖ್ಯ ಕಾರಣ ಕೂಡ ಗಣೇಶ್ ದಂಪತಿ. ಹಾಗಾಗಿ, ಶಿಲ್ಪಾ ಅವರು, ತಮ್ಮ ಮನೆಯಲ್ಲೇ ಕಲರ್ಫುಲ್ ಆಗಿ ಮೆಹಂದಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು, ಅದಕ್ಕಾಗಿ ಈಗಾಗಲೇ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅಂದಹಾಗೆ, ಮೇ.10 ರಂದು ಈ ಮೆಹಂದಿ ಕಾರ್ಯಕ್ರಮ ಜರುಗಲಿದೆ. ಮೆಹಂದಿ ಕಾರ್ಯಕ್ರಮ ಅಂದಮೇಲೆ, ಅಲ್ಲಿ ಚೆಂದದ ಹುಡುಗಿಯರದ್ದೇ ಕಾರುಬಾರು. ಅದರಲ್ಲೂ ಕನ್ನಡ ಚಿತ್ರರಂಗದ ಬಹುತೇಕ ನಟಿಯರು ಅಂದು ಪಾಲ್ಗೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಮೆಹಂದಿ ಕಾರ್ಯಕ್ರಮದಲ್ಲಿ ಹತ್ತಾರು ಶಾಸ್ತ್ರಗಳಿವೆ. ಅಮೂಲ್ಯ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲೂ ಅಂತಹ ಅನೇಕ ಶಾಸ್ತ್ರಗಳು ನಡೆಯಲಿವೆಯಂತೆ. ಅದರಲ್ಲೂ ಉತ್ತರ ಭಾರತದ ಶೈಲಿಯಲ್ಲಿ ಮೆಹಂದಿ ಶಾಸ್ತ್ರ ನಡೆಯುತ್ತಿದೆ ಎಂಬುದು ಮತ್ತೂಂದು ವಿಶೇಷ. ಗಣೇಶ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವಷ್ಟೇ ನಡೆದರೆ ಏನು ಚಂದ ? ಅದಕ್ಕೆಂದೇ ಶಿಲ್ಪಾ ಗಣೇಶ್ ಅವರು, ಅಂದು ಮೆಹಂದಿ ಕಾರ್ಯಕ್ರಮದ ಜತೆಯಲ್ಲಿ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ.
ಅದಕ್ಕಾಗಿ ಒಂದಷ್ಟು ರೂಪುರೇಷೆ ಸಿದ್ಧತೆ ಮಾಡಿಕೊಂಡಿದ್ದಾರೆ ಗಣೇಶ್ ಮತ್ತು ಶಿಲ್ಪಾ. ಮೂಲದ ಪ್ರಕಾರ ಪಂಜಾಬಿ ನೃತ್ಯಪಟುಗಳು ಹಾಗೂ ಡೋಲು ತಂಡದವರು ಆಗಮಿಸಲಿದ್ದು, ಆ ಸಂಗೀತ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲಿದ್ದಾರೆ ಎನ್ನಲಾಗಿದೆ. ಆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಸಾಕ್ಷಿಯಾಗಲಿದ್ದಾರೆ. ಮೇ.12 ರಂದು ಆದಿಚುಂಚನಗಿರಿಯಲ್ಲಿ ಅಮೂಲ್ಯ ಮತ್ತು ಜಗದೀಶ್ ಮದುವೆ ನಡೆಯಲಿದ್ದು,
ಬಳಿಕ ಅಮೂಲ್ಯ ಮೇ.14 ರಂದು ಸಂತೋಷ ಕೂಟವನ್ನೂ ಹಮ್ಮಿಕೊಂಡಿದ್ದಾರೆ. ಅದಾದ ಬಳಿಕ ಮೇ.16 ರಂದು ಅರತಕ್ಷತೆ ಕಾರ್ಯಕ್ರಮ ಕೂಡ ಭರ್ಜರಿಯಾಗಿಯೇ ನಡೆಯಲಿದೆ. ಈಗಾಗಲೇ ಅಮೂಲ್ಯ ಹಾಗೂ ಜಗದೀಶ್ ಬಹುತೇಕ ನಟ, ನಟಿಯರ ಮನೆಗೆ ತೆರಳಿ ಮದುವೆಗೆ ಆಹ್ವಾನಿಸಿದ್ದಾರೆ. ಸದ್ಯಕ್ಕೆ ಅಮೂಲ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಗಣೇಶ್ ಮನೆಯಲ್ಲೂ ಸಂತಸದ ವಾತಾವರಣ ತುಂಬಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ