ದೇವೇಗೌಡರಿಂದ ಇಂದು ಬಂಗಾರ ವೀಕ್ಷಣೆ
Team Udayavani, May 22, 2017, 11:58 AM IST
ಶಿವರಾಜಕುಮಾರ್ ನಾಯಕರಾಗಿರುವ “ಬಂಗಾರ ಸನ್ಆಫ್ ಬಂಗಾರದ ಮನುಷ್ಯ’ ಚಿತ್ರದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ರೈತರ ಸಮಸ್ಯೆಗಳನ್ನು ತುಂಬಾ ವಿವರವಾಗಿ ಮತ್ತು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈಗ ಈ ಚಿತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವೀಕ್ಷಿಸುವ ಮನಸ್ಸು ಮಾಡಿದ್ದಾರೆ.
ಹೌದು, ಇಂದು ಮೈಸೂರಿನ ಡಿಆರ್ಸಿ ಮಾಲ್ನಲ್ಲಿ ದೇವೇಗೌಡರು “ಬಂಗಾರ ಸನ್ಆಫ್ ಬಂಗಾರದ ಮನುಷ್ಯ’ ಚಿತ್ರವನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳ ಕುರಿತು ಮಾಡಿದ ಸಿನಿಮಾವನ್ನು ರೈತ ಪರ ಸಾಕಷ್ಟು ಹೋರಾಟ ಮಾಡಿದ ದೇವೇಗೌಡರು ವೀಕ್ಷಿಸುತ್ತಿದ್ದಾರೆಂದು ಚಿತ್ರತಂಡ ಸಹಜವಾಗಿಯೇ ಖುಷಿಯಾಗಿದೆ.
ಈ ಚಿತ್ರ ಜಯಣ್ಣ ಕಂಬೈನ್ಸ್ ನಡಿ ನಿರ್ಮಾಣವಾಗಿದ್ದು, ಯೋಗಿ ಜಿ ರಾಜ್ ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೇ ಪುನೀತ್ರಾಜಕುಮಾರ್ ಅವರ “ರಾಜ್ಕುಮಾರ’ ಚಿತ್ರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೈಸೂರಿನ ಡಿಆರ್ಸಿ ಮಾಲ್ನಲ್ಲೇ ನೋಡಿದ್ದರು. ಈಗ ಶಿವರಾಜಕುಮಾರ್ ಅವರ ಚಿತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೀಕ್ಷಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…