ನನ್ ಮದ್ವೆ ಆಗೋ ಹುಡುಗನ್ನ ನಾನೇ ಹುಡ್ಕೋತ್ತೀನಿ: ನೀತು
Team Udayavani, Oct 11, 2017, 8:00 PM IST
ನಟಿ ನೀತು ಈಗ ಬದಲಾಗಿದ್ದಾರೆ..! ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪಿಸಿಕೊಳ್ಳುವುದು ಬೇಡ. ಅವರೀಗ ಎಂದಿಗಿಂತ ಕೊಂಚ ಸ್ಲಿಮ್ ಆಗಿದ್ದಾರೆ. ಅದೇ ಅವರ ಬದಲಾವಣೆಗೆ ಕಾರಣ. ಅಷ್ಟೇ ಅಲ್ಲ, ಒಂದಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತದೇ ಉತ್ಸಾಹದಲ್ಲಿದ್ದಾರೆ. ನೀತು ಈಗ ನಿತ್ಯವೂ ಜಿಮ್ಗೆ ಹೋಗ್ತಾರೆ, ಟ್ರೈನರ್ ಬಳಿ ಶ್ರದ್ಧೆಯಿಂದ ಕಸರತ್ತು ನಡೆಸುತ್ತಾರೆಇದರ ಜತೆಗೆ ಊಟ, ಉಪಹಾರದಲ್ಲೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ …
ಈ ಎಲ್ಲಾ ಕಾರಣಗಳಿಂದಾಗಿ ಅವರು ಒಂದೇ ತಿಂಗಳಲ್ಲಿ ಬರೋಬ್ಬರಿ 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನೀತು ಮುಂದೆ ಒಂದು ಗುರಿ ಇದೆ, ಅದನ್ನು ತಲುಪುವ ತನಕ ಇದೇ ವರ್ಕೌಟ್ ಮುಂದುವರೆಯಲಿದೆ. ಹೌದು, ನೀತು ಜಿಮ್ ತರಬೇತುದಾರ ರಘುರಾಮ್ ಎಂಬುವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಅದಕ್ಕಾಗಿ ನಿತ್ಯ ಎಚ್ಎಸ್ಆರ್ ಲೇಔಟ್ನಿಂದ ಇಂದಿರಾನಗರದವರೆಗೂ ಓಡಾಡುತ್ತಾರೆ.
ಒಟ್ಟಾರೆ, ಮೊದಲ ಸಿನಿಮಾ “ಜೋಗ್ ಫಾಲ್ಸ್’ನಲ್ಲಿ ಹೇಗೆ ಕಾಣಿಸಿಕೊಂಡಿದ್ದರೋ, ಅಷ್ಟೇ ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕೆಂಬ ಛಲ ತೊಟ್ಟಿದ್ದಾರೆ. ಅದೇ ಗುರಿ ತಲುಪುವ ಹಾದಿಯಲ್ಲಿದ್ದಾರೆ ನೀತು. ಇದಕ್ಕಾಗಿ ಅವರು ಕೀಟೋ ಡಯೆಟ್ ಮಾಡುತ್ತಿದ್ದಾರಂತೆ. ಈ ಹಿಂದೆ ಅವರು ಸರ್ಜರಿ ಮಾಡಿಸಿಕೊಂಡು ತಪ್ಪು ಮಾಡಿದ್ದರಂತೆ. ಈ ಕೀಟೋ ಡಯೆಟ್ನಿಂದ ಯಾವುದೇ ಸೈಡ್ ಎಫೆಕ್ಟ್ ಆಗಲ್ಲ. ಹಾಗಾಗಿ, ಅದನ್ನೇ ಮುಂದುವರೆಸುವ ಯೋಚನೆ ಮಾಡಿದ್ದಾರೆ.
ಕೀಟೋ ಡಯೆಟ್ನಲ್ಲಿ ಏನಿದೆ ಅಂದರೆ, ಊಟ, ಉಪಹಾರದ ವಿಷಯದಲ್ಲಿ ಜಾಗೃತರಾಗಿರಬೇಕು, ತರಬೇತುದಾರ ಹೇಳಿದಂತೆ ವರ್ಕೌಟ್ ಮಾಡಬೇಕು ಅಷ್ಟೇ. ದಿನಕ್ಕೆ ಎರಡುವರೆ ತಾಸು ವರ್ಕೌಟ್ ಆಗುತ್ತೆ. ದಿನದ ಅರ್ಧ ದಿನ ಅದಕ್ಕೇ ಮೀಸಲು. ಈಗಂತೂ ದಪ್ಪ ಅಂತ ಯಾರೇ ಮಾತಾಡಿದರೂ ಆ ಬಗ್ಗೆ ಕೇರ್ ಮಾಡಲ್ಲ ಅನ್ನುತ್ತಾರೆ ನೀತು. ಈಗ ನೀತು ಬಳಿ ಒಂದೊಂದೇ ಸಿನಿಮಾ ಬರುತ್ತಿವೆ.
ಆ ಪೈಕಿ “ಒನ್ ಟ್ರಿಪ್’ ಎಂಬ ಚಿತ್ರ ಮಾಡುತ್ತಿದ್ದಾರೆ. ಅದು ಗೆರಿಲ್ಲ ಶೈಲಿಯ ಸಿನಿಮಾವಂತೆ. ನ್ಯಾಚುರಲ್ ಲೈಟಿಂಗ್ ಇಟ್ಟುಕೊಂಡು ಮಾಡಲಿರುವ ಸಿನಿಮಾ ಅದು. ಒಬ್ಬ ಸೂಪರ್ಸ್ಟಾರ್ ನಟಿಯೊಬ್ಬಳು ರಾಜಕೀಯಕ್ಕೆ ಎಂಟ್ರಿಯಾಗಲು ತಯಾರಾದಾಗ, ಡಿಮಾನಿಟೈಸೇಷನ್ ಆಗುತ್ತೆ. ಆಗ ಏನೆಲ್ಲಾ ಆಗುತ್ತೆ ಅನ್ನೋದು ಆ ಚಿತ್ರದ ಕಥೆಯಂತೆ. ಇನ್ನು, ಐಟಿ ಮಂದಿ ಸೇರಿ ಮಾಡುತ್ತಿರೋ ಚಿತ್ರವದು ಎನ್ನುವ ನೀತು, “ವಜ್ರಮುಖೀ’ ಎಂಬ ಸಿನಿಮಾವನ್ನೂ ಮಾಡುತ್ತಿದ್ದಾರೆ.
ಸದ್ಯಕ್ಕೆ ಅವರು ಅಭಿನಯಿಸಿರುವ “ಮೋಂಬತ್ತಿ’ ಹಾಗೂ “ಐಸ್ಪೈಸ್’ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಅದೆಲ್ಲಾ ಸರಿ, ನೀತು ಮದುವೆ ಯಾವಾಗ? ಈ ಪ್ರಶ್ನೆಗೆ ಉತ್ತರಿಸೋ ನೀತು, “ನನ್ನ ಅಮ್ಮನೇ ಈ ಪ್ರಶ್ನೆ ಕೇಳಿಲ್ಲ. ಆದರೂ ನಾನು ಮದುವೆ ಆಗುವ ಹುಡುಗನನ್ನ ನಾನೇ ಹುಡುಕೋತ್ತೀನಿ’ ಅಂತ ಹಾಗೊಂದು ಸ್ಮೈಲ್ ಕೊಟ್ಟು ಸಮ್ಮನಾಗುತ್ತಾರೆ ನೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !