ಹೊಸಬರ ಅಯ್ಯನ ಗುಡಿ ಚಿತ್ರಕ್ಕೆ ಚಾಲನೆ
Team Udayavani, Dec 5, 2017, 11:35 AM IST
ಗಾಂಧಿನಗರಕ್ಕೆ ಮತ್ತೂಂದು ಹೊಸಬರ ತಂಡದ ಆಗಮನವಾಗಿದೆ. “ಅಯ್ಯನ ಗುಡಿ’ ಚಿತ್ರದ ಮೂಲಕ ಸಾಯಿ ನಾಗರಾಜ್ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಸಾಯಿ ನಾಗರಾಜ್ ಅವರಿಗೆ ಎಸ್.ಬಿ.ಲಿಂಗೇಗೌಡರು ಹಣ ಹಾಕುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.
ಅಮೂಲ್ಯಾ ಮೂವೀಸ್ ಮೇಕರ್ ಬ್ಯಾನರ್ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಕೆಂಗಲ್ ಹನುಮಂತರಾಯರ ಗುಡಿ ಮುಂದೆ ಮುಹೂರ್ತ ನೆರವೇರಿಸಲಾಯಿತು. ನಾಯಕ ಮತ್ತು ನಾಯಕಿ ಅಭಿನಯದ ಮೊದಲ ದೃಶ್ಯಕ್ಕೆ ಲಿಂಗಪ್ಪ ಕ್ಲಾಪ್ ಮಾಡಿದರೆ, ಭೈರೇಗೌಡ್ರು, ನಾಗಣ್ಣ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ರಮೇಶ ಕೊಯಿರಾ ಕ್ಯಾಮೆರಾ ಹಿಡಿದರೆ, ಅರುಣ್ ಶೆಟ್ಟಿ ಅವರ ಸಂಗೀತವಿದೆ. ಕುಂಫು ಚಂದ್ರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಕೆ.ಎಸ್.ನಾಗರಾಜ್ ಅವರು ಕಾರ್ಯಕಾರಿ ನಿರ್ಮಾಪಕರು. ದತ್ತಾತ್ರೇಯ, ಜಯಕುಮಾರ್, ಚೆನ್ನಕೇಶವ ಅವರ ಸಹ ನಿರ್ದೇಶನವಿದೆ.
ಚಿತ್ರದಲ್ಲಿ ಜಯಸೂರ್ಯ, ಸಾನ್ವಿಕ, ರಾಧಾ, ಕೆ. ವೆಂಕಟೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಡಿಂಗ್ರಿ ನಾಗರಾಜ್, ಶಿವಕುಮಾರ್ ಆರಾಧ್ಯ, ಸುಧಾ ಮಂಗಳೂರು, ಆನಂದ್, ಲಿಂಗೇಗೌಡ, ರಾಜ್, ಉದಯ್ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ