ಜೆ.ಡಿ.ಚಕ್ರವರ್ತಿ ಸಾರಥ್ಯದಲ್ಲಿ ಭೂ, ಉತಾಹಿ
Team Udayavani, Mar 28, 2017, 11:16 AM IST
ತೆಲುಗಿನ ನಟ ಕಮ್ ನಿರ್ದೇಶಕ ಜೆ.ಡಿ.ಚಕ್ರವರ್ತಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ಪೂಜಾ ಗಾಂಧಿ ಅವರ “ರಾವಣಿ’ಯಲ್ಲಿ ನಟಿಸುತ್ತಾರೆಂಬ ಸುದ್ದಿ ಇತ್ತಾದರೂ, ಆ ಚಿತ್ರ ಸೆಟ್ಟೇರಲಿಲ್ಲ. ಈಗ ಪೂಜಾ ಗಾಂಧಿ ಅವರ “ಎಂಟರ್ಟೈನ್ಮೆಂಟ್ ಫ್ಯಾಕ್ಟರಿ’ಯಲ್ಲಿ ತಯಾರಾಗುತ್ತಿರುವ “ಭೂ’ ಮತ್ತು “ಉತಾಹಿ’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ ಜೆ.ಡಿ.ಚಕ್ರವರ್ತಿ.
ಈ ಕುರಿತು “ಉದಯವಾಣಿ’ ಜತೆ ಸ್ವತಃ ಜೆ.ಡಿ.ಚಕ್ರವರ್ತಿ ಆ ಎರಡು ಸಿನಿಮಾಗಳ ಕುರಿತು ಮಾತಾಡಿದ್ದಾರೆ. “ಭೂ’ ಮತ್ತು “ಉತಾಹಿ’ ಚಿತ್ರಗಳು ಹೊಸಬಗೆಯ ಕಥೆಗಳನ್ನು ಹೊಂದಿವೆ. “ಭೂ’ ಹಾರರ್ ಮತ್ತು ಸಸ್ಪೆನ್ಸ್ ಕಥೆ ಹೊಂದಿದೆ. ಇಷ್ಟಕ್ಕೂ ನಾನು ಕನ್ನಡದಲ್ಲಿ ನಿರ್ದೇಶನ ಮಾಡಲು ಕಾರಣ ಹೊಸಬಗೆಯ ಕಥೆಗಳನ್ನು ಕನ್ನಡಿಗರು ಸ್ವೀಕರಿಸುತ್ತಿರುವುದು. ಹೊಸತನ ಇರುವ ಕಥೆಗಳೇ ಇಲ್ಲಿ ಗೆಲ್ಲುತ್ತಿವೆ.
“ಭೂ’ ಮತ್ತು “ಉತಾಹಿ’ ಕೂಡ ಹೊಸ ಬಗೆಯ ಕಥೆ ಹೊಂದಿದೆ. ಮೇ ನಲ್ಲಿ “ಉತಾಹಿ’ ಶುರುವಾಗಲಿದೆ. “ಭೂ’ ಗೂ ಸದ್ಯದಲ್ಲೇ ಚಾಲನೆ ದೊರೆಯಲಿದೆ. “ಉತಾಹಿ’ ಥ್ರಿಲ್ಲರ್ ಸಬೆjಕ್ಟ್ ಹೊಂದಿರುವ ಸಿನಿಮಾ. ಈ ಎರಡು ಚಿತ್ರಗಳಿಗೂ ಹರ್ಷರಾಜ್ ಕ್ಯಾಮೆರಾ ಹಿಡಿದರೆ, ಅಮರ್ ಮೊಹಿಲೆ ಸಂಗೀತವಿದೆ. ರಾಧಿಕಾ ಗಾಂಧಿ ಅವರು ಆನ್ಲೈನ್ ಪ್ರೊಡ್ಯುಸರ್ ಆಗಿ ಕೆಲಸ ಮಾಡಲಿದ್ದಾರೆ’ ಎಂದಷ್ಟೇ ವಿವರ ಕೊಡುತ್ತಾರೆ ಜೆ.ಡಿ.ಚಕ್ರವರ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ