ಶಿವಣ್ಣ ನೇತೃತ್ವದ ತಂಡಕ್ಕೆ ಕೆಸಿಸಿ ಕಪ್
Team Udayavani, Apr 9, 2018, 11:26 AM IST
ಸುದೀಪ್ ನೇತೃತ್ವದಲ್ಲಿ ಶನಿವಾರವಷ್ಟೇ ಶುರುವಾಗಿದ್ದ “ಕೆಸಿಸಿ ಟಿ 10′ (ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್) ಲೀಗ್ನಲ್ಲಿ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ತಂಡ ಅಂತಿಮ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಶಿವರಾಜಕುಮಾರ್ ಅವರು ಸ್ಟಾರ್ ಆಟಗಾರರಾಗಿರುವ ವಿಜಯನಗರ ಪೇಟ್ರಿಯಾಟ್ಸ್ ತಂಡ “ಕೆಸಿಸಿ ಟಿ 10′ ಲೀಗ್ನ ಮೊದಲ ಬಾರಿಗೆ ಕಪ್ ಗೆದ್ದು ಚಾಂಪಿಯನ್ಸ್ ಎನಿಸಿಕೊಂಡಿದೆ.
ಶನಿವಾರ ಕಿಚ್ಚ ಸುದೀಪ್ ಅವರು ಸ್ಟಾರ್ ಪ್ಲೇಯರ್ ಆಗಿದ್ದ ಹೊಯ್ಸಳ ಈಗಲ್ಸ್ ವಿರುದ್ಧ ಮೊದಲ ಪಂದ್ಯಾವಳಿಯಲ್ಲೇ ಗೆಲುವು ಸಾಧಿಸಿದ್ದ ಶಿವರಾಜಕುಮಾರ್ ನೇತೃತ್ವದ ತಂಡ, ನಂತರ ನಡೆದ ಎರಡನೇ ಪಂದ್ಯವನ್ನು ಇಂದ್ರಜಿತ್ ಲಂಕೇಶ್ ಮೆಂಟರ್ ಆಗಿರುವ ರಾಷ್ಟ್ರಕೂಟ ಪ್ಯಾಂಥರ್ಸ್ ಎದುರು ಸೆಣೆಸಾಟ ನಡೆಸಿ, ಫೈನಲ್ ಹಂತವನ್ನು ತಲುಪಿತ್ತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸದಾಶಿವ ಶೆಣೈ ಮೆಂಟರ್ ಆಗಿರುವ ಒಡೆಯರ್ ಚಾರ್ಜಸ್ ವಿರುದ್ಧ ಗೆಲುವು ಸಾಧಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅಂದಹಾಗೆ, ಕೃಷ್ಣ ಅವರು ಶಿವರಾಜಕುಮಾರ್ ಸ್ಟಾರ್ ಆಟಗಾರರಾಗಿರುವ ವಿಜಯನಗರ ಪೇಟ್ರಿಯಾಟ್ಸ್ ತಂಡದ ನಾಯಕರಾಗಿದ್ದಾರೆ.
ಮೊದಲ ಬಾರಿಗೆ ನಡೆದ “ಕನ್ನಡ ಚಲನಚಿತ್ರ ಕಪ್’ ಶಿವರಾಜಕುಮಾರ್ ನೇತೃತ್ವದ ತಂಡ ಗೆಲುವು ಸಾಧಿಸಿರುವುದರಿಂದ ಅವರ ಅಭಿಮಾನಿ ವಲಯದಲ್ಲಿ ಖುಷಿ ಮೂಡಿಸಿದೆ. ಅತ್ತ, ಶಿವರಾಜಕುಮಾರ್ ಅಭಿನಯದ “ಟಗರು’ ಸಿನಿಮಾ ಕೂಡ 50 ದಿನವನ್ನು ಪೂರೈಸಿದ ಖುಷಿಯಲ್ಲೂ ಅಭಿಮಾನಿಗಳು ತೆಲುತ್ತಿದ್ದರೆ, ಇತ್ತ “ಕೆಸಿಸಿ ಟಿ 10′ ಗೆಲುವು ಕೂಡ ಇನ್ನಷ್ಟು ಸಂಭ್ರಮಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು