Kannada Cinema; ‘ಕುಟೀರ’ದೊಳಗೆ ಕೋಮಲ್ ಎಂಟ್ರಿ’: ಪ್ರಿಯಾಂಕಾ ಸಾಥ್
Team Udayavani, Feb 22, 2024, 11:54 AM IST
ನಟ ಕೋಮಲ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಅವುಗಳ ಪೈಕಿ ಒಂದಾಗಿರುವ “ಕುಟೀರ’ ಸಿನಿಮಾ ಇತ್ತೀಚೆಗೆ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ. “ಕುಟೀರ’ ಸಿನಿಮಾವನ್ನು ಅನೂಪ್ ಆ್ಯಂಟೋನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, “ಕಂಸಾಳೆ ಫಿಲಂಸ್’ ಬ್ಯಾನರ್ನಲ್ಲಿ ಮಧು ಮರಿಸ್ವಾಮಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
“ಕುಟೀರ’ ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟ ಕೋಮಲ್, “ಇದೊಂದು ಹಾರರ್ ಕಾಮಿಡಿ ಶೈಲಿಯ ಸಿನಿಮಾ. “ಕುಟೀರ’ ಎಂದರೆ ಪಾಳು ಬಿದ್ದಿರುವ ಮನೆ. ಆ ಮನೆಯಲ್ಲಿ ನಡೆಯುವ ಚೇಷ್ಟೆಗಳ ಮೇಲೆ ಈ ಸಿನಿಮಾದ ಕಥೆ ನಡೆಯುತ್ತದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ಶೈಲಿಯ ಸಿನಿಮಾಗಳು ನನಗೆ ತುಂಬ ಇಷ್ಟ. ಹಾರರ್-ಕಾಮಿಡಿ ಶೈಲಿಯಲ್ಲಿ ನಾನು ಅಭಿನಯಿಸುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು. ಅಂದಹಾಗೆ, ಈ ಸಿನಿಮಾದಲ್ಲಿ “ಒಂದಲ್ಲ, ಎರಡಲ್ಲ ಬರೋಬ್ಬರಿ ಒಂದು ಡಜನ್ ದೆವ್ವಗಳ ಜೊತೆಗೆ ಕಣ್ಣಾಮುಚ್ಚಾಲೆ ಇದೆ’ ಎನ್ನುತ್ತಾರೆ ಕೋಮಲ್.
“ಸಾಮಾನ್ಯವಾಗಿ ಹಾರರ್ ಸಿನಿಮಾಗಳೆಂದರೆ, ಒಂದು ಮನೆಯಲ್ಲಿ ಕೆಲವರು ಲಾಕ್ ಆಗುತ್ತಾರೆ ಮತ್ತು ಅಲ್ಲಿ ದೆವ್ವದ ಚೇಷ್ಟೆ ಶುರುವಾಗುತ್ತದೆ. ಆದರೆ, ಇಲ್ಲಿ ಡಜನ್ ದೆವ್ವಗಳಿವೆ. ಒಂದು ದೆವ್ವವೇ ಅಷ್ಟು ಕಾಟ ಕೊಟ್ಟರೆ, ಡಜನ್ ದೆವ್ವಗಳು ಏನೆಲ್ಲಾ ಮಾಡಬಹುದು ಯೋಚಿಸಿ. ಇಲ್ಲಿ ಹಾರರ್ ಮತ್ತು ಕಾಮಿಡಿ ಜೊತೆಗೆ ವಿಡಂಬನೆ ಸಹ ಇದೆ. ಹಾಲಿವುಡ್ನಲ್ಲಿ “ಸ್ಕೇರಿ ಮೂವಿ’ ತರಹದ ಹಾರರ್ ಸರಣಿಗಳು ಬಂದಿವೆ. ಇಲ್ಲೂ ಸಹ ಕಥೆ ಯನ್ನು ಪಾರ್ಟ್ ಬೈ ಪಾರ್ಟ್ ಮಾಡಬಹುದು. ಸಿನಿಮಾದಲ್ಲಿ ಗ್ರಾಫಿಕ್ಸ್ ಹೆಚ್ಚಿರುತ್ತದೆ. ಒಂದು ಸೆಟ್ ಹಾಕಿ, ಗ್ರೀನ್ ಮ್ಯಾಟ್ ಹಾಕಿ ಶೂಟಿಂಗ್ ಮಾಡುತ್ತಿದ್ದೇವೆ’ ಎಂಬುದು ಕೋಮಲ್ ಮಾತು.
“ಕುಟೀರ’ ಸಿನಿಮಾದಲ್ಲಿ ಕೋಮಲ್ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಮಿಕ್ಕಂತೆ ಅವಿನಾಶ್, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸಿನಿಮಾದ ಹಾಡುಗಳಿಗೆ ಬಿ. ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದು, ಅರುಣ್ ಸುರೇಶ್ ಛಾಯಾಗ್ರಹಣ, ಎನ್. ಎಂ. ವಿಶ್ವ ಸಂಕಲನವಿದೆ. ಅಂದಹಾಗೆ, ಇದೇ ಮಾರ್ಚ್ ಎರಡನೇ ವಾರದಿಂದ “ಕುಟೀರ’ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ