ಮರಿದೇವ ಇನ್ನು ಮುಂದೆ ಮಾದೇವ
ವಾರಾಂತ್ಯದಲ್ಲಿ ಮಾದೇಶ್ವರನ ಮಹಿಮೆ!
Team Udayavani, May 8, 2019, 3:00 AM IST
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಕಥಾಹಂದರ ಹೊಂದಿರುವ ಉಘೇ ಉಘೇ ಮಾದೇಶ್ವರ ಧಾರಾವಾಹಿ ಸಾಕಷ್ಟು ಅದ್ಧೂರಿಯಾಗಿ, ವೀಕ್ಷಕರ ಮನಗೆಲ್ಲುತ್ತ ಮೂಡಿ ಬರುತ್ತಿದೆ. ಸದ್ಯ ಉಘೇ ಉಘೇ ಮಾದೇಶ್ವರ ಧಾರಾವಾಹಿ ಪ್ರಮುಖ ಘಟ್ಟಕ್ಕೆ ಬಂದು ನಿಂತಿದ್ದು, ಬಾಲಕ ಮರಿದೇವ ಇನ್ನು ಮುಂದೆ ದುಂಡುಮುಖದ ಅಂದಗಾರ ಮಾದಪ್ಪನಾಗಿ, ಮಾದೇಶ್ವರರಾಗಿ ಬೆಳೆದು ನಿಲ್ಲುವ ಪರ್ವಕಾಲದ ಚಿತ್ರಣ ಆರಂಭವಾಗಲಿದೆ.
ಇದೇ ಮೇ 11ರ ಸಂಚಿಕೆಯಿಂದ ಬಾಲಕ ಮರಿದೇವ, ಮಾದೇಶ್ವರನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾನೆ. ಇನ್ನು ಮುಂದೆ ಮಾದೇಶ್ವರರ ಪಾತ್ರದಲ್ಲಿ ನಟ ಆರ್ಯನ್ ರಾಜ್ ಕಾಣಿಸಿಕೊಳ್ಳುತ್ತಿದ್ದು, ಮಲೆ ಮಾದೇಶ್ವರನ ಇನ್ನೂ ಹಲವಾರು ಮಹಿಮೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಕಾಣಬಹುದಾಗಿದೆ.
ಮುಂಬರುವ ಸಂಚಿಕೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವಂತೆ ಮಾಡಲು ಧಾರಾವಾಹಿಯಲ್ಲಿ ವಿಶೇಷ ಗ್ರಾಫಿಕ್ಸ್ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗಿದೆ. ಉಘೇ ಉಘೇ ಮಾದೇಶ್ವರ ವಾರಾಂತ್ಯದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6ಗಂಟೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ನವೀನ್ ಕೃಷ್ಣ ನಿರ್ದೇಶನ ಮತ್ತು ಮಹೇಶ್ ಸುಖಧರೆ ಅವರ ಪ್ರಧಾನ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ.