ರತ್ನಮಂಜರಿ ಹಾಡಿಗೆ ಮಿಲಿಯನ್ ಖುಷಿ
Team Udayavani, May 8, 2019, 3:00 AM IST
ಸ್ಟಾರ್ಗಳ ಸಿನಿಮಾದಲ್ಲಾದರೆ ಸ್ಟಾರ್ಗಳಿರುತ್ತಾರೆ, ಅವರಿಗೊಂದು ಅಭಿಮಾನಿ ವರ್ಗವಿರುತ್ತದೆ. ಸಹಜವಾಗಿ ಸಿನಿಮಾದ ಮೇಲೆ ಕುತೂಹಲವಿರುತ್ತದೆ. ಅದೇ ಹೊಸಬರ ಸಿನಿಮಾದಲ್ಲಾದರೆ, ಅವರ ಕೆಲಸವೇ ಮಾತನಾಡಬೇಕು. ಆ ಮೂಲಕ ಗಮನಸೆಳೆಯಬೇಕು. ಈಗ ಹೊಸಬರೇ ಸೇರಿಮಾಡಿರುವ “ರತ್ನಮಂಜರಿ’ ತಂಡ ಖುಷಿಯಾಗಿದೆ.
ಅದಕ್ಕೆ ಕಾರಣ ಸಿನಿಮಾದ ಹಾಡೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರೋದು. ಹೌದು, “ರತ್ನಮಂಜರಿ’ ಚಿತ್ರದ “ಬಾರೇ ಸುಂದರಿಯೇ..ಕೊಡಗಿನ ಸಿರಿಯೇ..’ ಹಾಡು ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ ಈ ಸಿನಿಮಾದ ಹಾಡನ್ನು ಪ್ರಸನ್ನ ಬೋಜಶೇಖರ ಬರೆದಿದ್ದಾರೆ.
ಈ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು,” ಈ ಚಿತ್ರದಲ್ಲಿ ಕಥೆಯೇ ಹೀರೋ. ಚಿತ್ರಕಥೆ ಕೂಡ ಭಿನ್ನವಾಗಿದೆ. ಚಿತ್ರದ ಮೇಕಿಂಗ್ನಲ್ಲಿ ವಿಶೇಷತೆ ಇದೆ. ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದೆ. ಅಮೆರಿಕಾದಲ್ಲಿ 20 ದಿನ ಔಟ್ಡೋರ್ ಶೂಟಿಂಗ್ ಮಾಡಲಾಗಿದ್ದು, ಚಿತ್ರದಲ್ಲಿ ಅಮೆರಿಕಾದವರೂ ನಟಿಸಿದ್ದಾರೆ’ ಎನ್ನುತ್ತಾರೆ.
ಚಿತ್ರವನ್ನು ಅನಿಸಿವಾಸಿ ಕನ್ನಡಿಗ ಸಂದೀಪ್ ತಮ್ಮ ಸ್ನೇಹಿತರ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರ ಮೂಡಿಬಂದಿರುವ ಬಗ್ಗೆ ಅವರಿಗೆ ಖುಷಿ ಇದೆ. ಚಿತ್ರವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವೂ ಇದೆ. ಜೋಡಿ ಕೊಲೆ ಪ್ರಕರಣ ಕುತೂಹಲಕಾರಿ ಎನಿಸಿತು. ಅದನ್ನು ಪೊಲೀಸರು ಹೇಗೆ ಬೇಧಿಸಿದರು ಎನ್ನುವುದು ಕೂಡಾ ಅಷ್ಟೇ ಕುತೂಹಲಕಾರಿ ಅಂಶ. ಆ ಪ್ರಕರಣವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರ ನಮಗೆಲ್ಲಾ ಬಹಳ ಇಷ್ಟವಾಯಿತು’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ