ಲಂಡನ್ನಲ್ಲಿ ಲಂಭೋದರನಿಗೆ ಮುಹೂರ್ತ
Team Udayavani, Mar 20, 2018, 11:25 AM IST
ಈ ಬಾರಿಯ “ಬಿಗ್ಬಾಸ್’ ಮನೆಯಿಂದ ಹೊರ ಬಂದವರಿಗೆ ಅಂಥದ್ದೇನೂ ಅದೃಷ್ಟ ಇಲ್ಲವಾದರೂ, ಕೆಲವರಿಗೆ ಮಾತ್ರ ಸಿನಿಮಾ ಕೈ ಹಿಡಿದಿದೆ. ಇತ್ತೀಚೆಗೆ ಜೆಕೆ ಮತ್ತು ಅನುಪಮಾ ಅವರೂ “ಕರಾಳ ರಾತ್ರಿ’ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಬಿಗ್ಬಾಸ್ ಮನೆಯಲ್ಲಿದ್ದು ಶ್ರುತಿ ಪ್ರಕಾಶ್ ಕೂಡ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಆ ಚಿತ್ರಕ್ಕೆ “ಲಂಡನ್ನಲ್ಲಿ ಲಂಭೋದರ’ ಎಂದು ನಾಮಕರಣ ಮಾಡಲಾಗಿದೆ.
ಮೈ ಮಾಸ್ಟರ್ ಮೂವೀಸ್ ಬ್ಯಾನರ್ನಡಿ ಸುದರ್ಶನ್ ಬಿ ನಿರ್ಮಿಸುತ್ತಿದ್ದಾರೆ. ಇದು ಇವರ ಮೊದಲ ನಿರ್ಮಾಣದ ಸಿನಿಮಾ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಲಂಡನ್ನಲ್ಲಿ ನೆಲೆಸಿರುವ ಕನ್ನಡಿಗರ ಲಂಡನ್ ಸ್ಕ್ರೀನ್ಸ್ ತಂಡ ಸಾಥ್ ನೀಡಿದೆ. ಚಿತ್ರಕ್ಕೆ ರಾಜ್ ಸೂರ್ಯ ನಿರ್ದೇಶಕರು. ಬೆಂಗಳೂರಿನ ಯುವಕನೊಬ್ಬ ಹಲವು ನಂಬಿಕೆಗಳನ್ನು ಹೊತ್ತು, ಲಂಡನ್ಗೆ ಹಾರುತ್ತಾನೆ.
ಅಲ್ಲಿ ಹೋದವನಿಗೆ ಎದುರಾಗುವ ಕಷ್ಟಗಳು ಮತ್ತು ಒಂದಷ್ಟು ಸಮಸ್ಯೆಗಳು ಹೇಗೆ ಹಾಸ್ಯರೂಪ ಪಡೆಯುತ್ತವೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಲಂಡನ್ನಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನೆರವೇರಲಿದೆ. ಚಿತ್ರಕ್ಕೆ ಲಂಡನ್ ಕನ್ನಡಿಗ ಸಂತು ಹೀರೋ ಆಗಿದ್ದಾರೆ. ಉಳಿದಂತೆ ಸಾಧು ಕೋಕಿಲ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸಂಪತ್ರಾಜ್, ಅರುಣ ಬಾಲರಾಜ್, ಕುರಿ ಪ್ರತಾಪ್, ಗಿರಿ ಇತರರು ನಟಿಸುತ್ತಿದ್ದಾರೆ.
ಪಣಿಧರ್ ರೇವನೂರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಪ್ರಣವ್ ಸಂಗೀತ ನಿರ್ದೇಶನವಿದೆ. ರಂಜಿತ್ ರಾ. ಸ., ಹೈದರಾಬಾದ್ ಗಣೇಶ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭಕ್ಕೆ ಸಾಧು ಕೋಕಿಲ, ಮಮತಾ ಗೌಡ, ಸತೀಶ್ ಶಾಸ್ತ್ರಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ